Don't Miss!
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದಂಡಂ' ಅಂತ ಮತ್ತೆ ಗಾಂಧಿನಗರಕ್ಕೆ ಬಂದ 'ನಮಕ್ ಹರಾಮ್' ಮಹೇಶ್
ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಅವರ ತಮ್ಮ ಮಹೇಶ್ ಅವರ ಚೊಚ್ಚಲ ಚಿತ್ರ 'ನಮಕ್ ಹರಾಮ್' ಬಾಕ್ಸಾಫೀಸ್ ನಲ್ಲಿ ಅಷ್ಟೇನು ಸದ್ದು ಮಾಡದೇ ತೋಪೆದ್ದು ಹೋದ ನಂತರ ಅದರ ಬೆನ್ನಲ್ಲೇ 'ದುಬಾರಿ' ಎಂಬ ಚಿತ್ರಕ್ಕೂ ಸಹಿ ಹಾಕಿದ್ದು, ಇದೀಗ ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ಅಂದಹಾಗೆ ಮೊದಲ ಚಿತ್ರ ಅಷ್ಟಾಗಿ ಯಶಸ್ಸು ಗಳಿಸದಿದ್ದರು ಕೂಡ ನಟ ಮಹೇಶ್ ಅವರಿಗೆ ಚಂದನವನದಲ್ಲಿ ಬಹಳ ಬೇಡಿಕೆ ಇದೆ. ಅದಕ್ಕಾಗಿ ನಟ ಮಹೇಶ್ ಅವರಿಗೆ 'ದಂಡಂ' ಎಂಬ ಚಿತ್ರದಲ್ಲಿ ನಟಿಸಲು ಆಫರ್ ಬಂದಿದ್ದು, ಈಗಾಗಲೇ ಸಹಿ ಕೂಡ ಹಾಕಿದ್ದಾರೆ.
ನಿರ್ದೇಶಕ ಬಾಲಾ ವಿನಾಯಕ ಅವರು 'ದಂಡಂ' ಚಿತ್ರದ ಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದು, ನಿರ್ಮಾಪಕರಾದ ಶಿವಮಹಾದೇವಪ್ಪ ಮತ್ತು ತಿರುಮಲೇಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.[ಸೆನ್ಸಾರ್ ಅಂಗಳದಲ್ಲಿ ಪಾಸ್ ಆದ 'ನಮಕ್ ಹರಾಮ್']
'ಎದೆಗಾರಿಕೆ' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದ ಕಾಮಿಡಿ ನಟ ಸಾಧು ಕೋಕಿಲ ಅವರು ತುಂಬಾ ದಿನಗಳ ನಂತರ ಮತ್ತೆ ಸಂಗೀತ ನಿರ್ದೇಶನದತ್ತ ಹೊರಳಿದ್ದು, ಮಹೇಶ್ ಅವರ 'ದಂಡಂ' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.
ಸಖತ್ ಆಕ್ಷನ್-ಥ್ರಿಲ್ಲರ್ ಮೂವಿ ಆಗಿರುವ 'ದಂಡಂ' ಚಿತ್ರಕ್ಕೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ (ನವೆಂಬರ್ 27) ಚಿತ್ರದ ಸೆಟ್ಟೇರಿದೆ.
ಅದೇನೇ ಇರಲಿ ನಟ ಮಹೇಶ್ ಅವರು 'ದಂಡಂ' (ಶಿಕ್ಷೆ) ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ನಿಂತು ಈ ಸಿನಿಮಾ ಕೈ ಹಿಡಿಯುತ್ತ ಕಾದು ನೋಡಬೇಕು.