Don't Miss!
- News ಮಂಗಳೂರಿನಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಫಿಶ್ ಆಯಿಲ್ ಫ್ಯಾಕ್ಟರಿ
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Finance ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಐಟಿ ಕಂಪೆನಿಗಳನ್ನು ಕೇರಳಕ್ಕೆ ಆಹ್ವಾನಿಸಿದ ಸಚಿವ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತವರಿನಲ್ಲಿ ಮಲ್ಲಿಕಾ ಶೆರಾವತ್ ಮೇಲೆ ಮುಗಿಬಿದ್ದ ಜನ
ಅತ್ಯಪರೂಪಕ್ಕೆ ಅಂತ ತವರೂರಿಗೆ ಹೋಗಿದ್ದ ಖ್ಯಾತ ನಟಿ ಮಲ್ಲಿಕಾ ಶೆರಾವತ್ ಅವರು ಅಲ್ಲಿನ ಜನರ ಪ್ರೀತ್ಯಾಭಿಮಾನಗಳನ್ನು ಕಂಡು ಬೆಚ್ಚಿಬಿದ್ದು, ಕಾರ್ಯಕ್ರಮವನ್ನು ಅರ್ಧಕ್ಕೇ ಮೊಟಕುಗೊಳಿಸಿ ವಾಪಸಾಗಿದ್ದಾರೆ.
ಹರಿಯಾಣದ
ಹಿಸಾರ್
ಜಿಲ್ಲೆಯ
ಮೊತ್
ರಂಗ್ರಾನ್
ಎಂಬುದು
ನಟಿ
ಮಲ್ಲಿಕಾ
ಹುಟ್ಟೂರು.
36
ವರ್ಷದ
ನಟಿ
ಮಲ್ಲಿಕಾ
ಸುಮಾರು
15
ವರ್ಷಗಳ
ಬಳಿಕ
ನಿನ್ನೆ
ಮಂಗಳವಾರ
ತಮ್ಮ
ಸ್ವಗ್ರಾಮಕ್ಕೆ
ಭೇಟಿ
ನೀಡಿದ್ದರು.
ಬಹುಚರ್ಚಿತ
'ದಿ
ಬ್ಯಾಚಲರೇಟ್
ಇಂಡಿಯಾ'
ಟಿವಿ
ರಿಯಾಲ್ಟಿ
ಷೋ
ಚಿತ್ರೀಕರಣಕ್ಕಾಗಿ
ಆಗಮಿಸಿದ್ದರು.
ಆ
ವೇಳೆ
ಆಕೆಯನ್ನು
ನೋಡಲು
ಜನರ
ದಂಡೇ
ಸೇರಿತ್ತು.
The Bachelorette India -- Mere Khayalon ki Mallika
'ದಿ
ಬ್ಯಾಚಲರೇಟ್
ಇಂಡಿಯಾ
ಮೇರೆ
ಕಯಾಲೋಂಕಿ
ಮಲ್ಲಿಕಾ'
ರಿಯಾಲ್ಟಿ
ಷೋಗಾಗಿ
ನಟಿ
ಮಲ್ಲಿಕಾ
ತನ್ನ
ಪೂರ್ವಿಕರ
ಮನೆ
ಹಾಗೂ
ಗ್ರಾಮದ
ಗುರುದ್ವಾರಕ್ಕೆ
ಭೇಟಿ
ನೀಡುವುದು
ಮತ್ತು
ಟ್ರ್ಯಾಕ್ಟರಿನಲ್ಲಿ
ಊರಲ್ಲೆಲ್ಲಾ
ರೌಂಡ್ಸ್
ಹೊಡೆಯುವುದನ್ನು
ಚಿತ್ರೀಕರಣ
ಮಾಡಬೇಕಿತ್ತು.
ಆದರೆ
ಮಲ್ಲಿಕಾ
ಕಾರಿನಲ್ಲಿ
ಬರುತ್ತಿದ್ದಂತೆ
ಮೂರ್ನಾಲ್ಕು
ಸಾವಿರ
ಜನ
ಆಕೆಯನ್ನು
ನೋಡಲು
ಸೇರಿದ್ದಲ್ಲದೆ
ಒಂದು
ಗುಂಪು
ಆಕೆಯ
ಕಾರನ್ನು
ಸುತ್ತುವರಿದ್ದಿದ್ದರು.
ಇದರಿಂದ
ಕಾರಿನಿಂದಲೂ
ಇಳಿಯಲು
ಆಗದೆ
ನಟಿ
ಮಲ್ಲಿಕಾ
ಗ್ರಾಮದಿಂದ
ಹಿಂತಿರುಗಿದ್ದಾಳೆ.
Actor Mallika Sherawat native Moth Rangran, Hisar district
ಅಂದಹಾಗೆ ಮೂಲತಃ ಹರಿಯಾಣದ ಮೊತ್ ರಂಗ್ರಾನ್ ಗ್ರಾಮದವಳಾದ ಮಲ್ಲಿಕಾಳ ಮೂಲ ಹೆಸರು ರೀಮಾ ಲಂಬಾ. ಈಕೆಯ ತಂದೆ ಮುಖೇಶ್ ಲಂಬಾ. ಇವರು ಹರಿಯಾಣದಲ್ಲಿ ಇಂಜಿನಿಯರ್. ಮುಖೇಶ್ ಲಂಬಾ, ಗುರುದ್ವಾರದ ಬಳಿ ದೊಡ್ಡ ಸಂಖ್ಯೆಯಲ್ಲಿದ್ದ ಚಿತ್ರೀಕರಣ ತಂಡದ ಮಧ್ಯೆ ಹೇಗೋ ದಾರಿ ಮಾಡಿಕೊಂಡು ಮಗಳಿಗಾಗಿ ಕಾಯುತ್ತಿದ್ದರು.
Reema Lamba D/o Mukesh Lamba
ಆದರೆ ಮಗಳು ಮಲ್ಲಿಕಾ, ಗ್ರಾಮಕ್ಕೆ ಭೇಟಿ ಕೊಟ್ಟರೂ ಅನಿವಾರ್ಯ ಪರಿಸ್ಥಿತಿಯಲ್ಲಿ ಕೂಡಲೇ ಹಿಂತಿರುಗಿದ್ದರು. ಇದರಿಂದ ಅಪ್ಪ ಮುಖೇಶ್ ಅವರಿಗೂ ಬೇಸರವಾಗಿತ್ತು. ಅಲ್ಲದೆ, ಆಕೆಯ ಪೂರ್ವಿಕರ ನಿವಾಸದ ಬಳಿ ನೆರೆದಿದ್ದ ನೂರಾರು ಮಂದಿ ಸಂಬಂಧಿಕರಿಗೂ ನಿರಾಸೆಯಾಯಿತು. Murder ಖ್ಯಾತಿಯ ನಟಿ ಮಲ್ಲಿಕಾ, ಹಿಸ್ಸಾರಿನ ದೊಡ್ಡ ದಾನಿ, ಖ್ಯಾತ ಸೇಠ್ ಛಾಜು ರಾಮ್ ಅವರ ಮರಿಮೊಮ್ಮಗಳು.
Hisar SHO Bijendar Singh
ಕಾರ್ಯಕ್ರಮ ಆಯೋಜಕರು ಮೊದಲೇ ಪೊಲೀಸರಿಗೆ ವಿಷಯ ತಿಳಿಸದೆ ಇದ್ದಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಿದ್ದೂ ಶೆರಾವತ್ ಅವರನ್ನು ಸುರಕ್ಷಿತವಾಗಿ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಬಿಜೇಂದರ್ ಸಿಂಗ್ ಹೇಳಿದ್ದಾರೆ.