twitter
    For Quick Alerts
    ALLOW NOTIFICATIONS  
    For Daily Alerts

    ನಟ ವಿಷ್ಣುವರ್ಧನ್ ಮನೆಗೆ ರಾತ್ರಿ ಕಲ್ಲು ತೂರಾಟ

    By ಅನಂತರಾಮು, ಹೈದರಾಬಾದ್
    |

    Dhenikaina Ready still
    ನಟ ಕಮ್ ರಾಜಕಾರಣಿ ಡಾ.ಮೋಹನ್ ಬಾಬು ನಿರ್ಮಾಣದ 'ದೇನಿಕೈನಾ ರೆಡಿ' (ಯಾವುದಕ್ಕೂ ರೆಡಿ) ಚಿತ್ರದ ವಿರುದ್ಧ ಬ್ರಾಹ್ಮಣ ಸಮುದಾಯ ತಿರುಗಿಬಿದ್ದಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ಬ್ರಾಹ್ಮಣರನ್ನು ಲೇವಡಿ ಮಾಡಲಾಗಿದ್ದು, ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

    ಈ ಸಂಬಂಧ ಬ್ರಾಹ್ಮಣ ಸಮುದಾಯ ಕಾನೂನು ಕ್ರಮಕ್ಕೂ ಮುಂದಾಗಿದೆ. ಈ ಘಟನೆ ನಡೆದ ಬಳಿಕ ಎಲ್ಲಾ ತಣ್ಣಗಾಯಿತು ಎಂದುಕೊಂಡಿರುವಾಗಲೇ ಚಿತ್ರದ ನಾಯಕ ನಟ ಮಂಚು ವಿಷ್ಣುವರ್ಧನ್ ಅವರ ಮನೆಗೆ ರಾತ್ರಿ ವೇಳೆಯಲ್ಲಿ ಯಾರೋ ಕಲ್ಲು ತೂರಿದ ಘಟನೆ ನಡೆದಿದೆ.

    ಸರಿಸುಮಾರು 40 ಮಂದಿಯಿದ್ದ ತಂಡ ಹೈದರಾಬಾದಿನ ಅವರ ಮನೆಗೆ ಕಲ್ಲು ತೂರಿ ಅವರ ಮನೆ ಬಾಗಿಲನ್ನು ಜಖಂ ಗೊಳಿಸಿದ್ದಾರೆ. ಅವರ ಮನೆಯ ಮುಂದಿನ ದೀಪಗಳು ಕಲ್ಲಿನ ದಾಳಿಗೆ ಪುಡಿಪುಡಿಯಾಗಿವೆ. ಆದರೆ ಈ ಸಂದರ್ಭದಲ್ಲಿ ನಟ ವಿಷ್ಣುವರ್ಧನ್ ಮನೆಯಲ್ಲಿರಲಿಲ್ಲವಂತೆ. ಅವರ ತಾಯಿ ಮಾತ್ರ ಇದ್ದರಂತೆ.

    ಈ ಘಟನೆಯಿಂದ ಕಂಗೆಟ್ಟಿರುವ ಅವರು ತಮ್ಮನ್ನು ಕಾಪಾಡಿ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ಮೊರೆಹೋಗಿದ್ದಾರೆ. ಚಿತ್ರದಲ್ಲಿ ಬ್ರಾಹ್ಮಣ ಸಮುದಾಯದ ಪುರೋಹಿತರನ್ನು ತಮಾಷೆಯಾಗಿ, ಲೇವಡಿ ಮಾಡಿ ತೋರಿಸಲಾಗಿದೆ ಎಂದು ವಿವಿಧ ಬ್ರಾಹ್ಮಣ ಸಂಘಟನೆಗಳು ಆರೋಪಿಸಿವೆ. (ಏಜೆನ್ಸೀಸ್)

    English summary
    The controversy surrounding the Telugu movie Dhenikaina Ready is getting worse with about 40 people attacking hero Manchu Vishnu's house and destroying doors and lights by pelting stones on Wednesday night (October 31). The Telugu actor, who was in a mood to celebrate its successful opening, had to knock the door of the Human Rights Commission (HRC) for justice.
    Saturday, November 3, 2012, 16:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X