twitter
    For Quick Alerts
    ALLOW NOTIFICATIONS  
    For Daily Alerts

    ಅವಕಾಶ ಕೊಡಿಸುವುದಾಗಿ 'ವಠಾರ' ಧಾರಾವಾಹಿ ನಟಿಗೆ ವಂಚನೆ

    By Pavithra
    |

    Recommended Video

    ಹಿರಿಯ ನಟಿಗೆ 15 ಲಕ್ಷ ಪಂಗನಾಮ ಹಾಕಿದ ಭೂಪ..! | Filmibeat Kannada

    'ವಠಾರ', 'ಬದುಕು', 'ರಂಗೋಲಿ' ಧಾರಾವಾಹಿಗಳ ಮೂಲಕ ಮನೆ ಮಾತಾಗಿದ್ದ ನಟಿ ಮಂಜುಳಮ್ಮ ಅವರಿಗೆ ಪಾತ್ರ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನವೀನ್ ರೈ ಎನ್ನುವ ಧಾರಾವಾಹಿ ನಿರ್ದೇಶಕನಿಂದ ಹಿರಿಯ ನಟಿ ಮೋಸ ಹೋಗಿದ್ದಾರೆ.

    ನವೀನ್ ರೈ ಹಿಂದಿನಿಂದಲೂ ಧಾರಾವಾಹಿಗಳಲ್ಲಿ ಮಂಜುಳಮ್ಮ ಅವರಿಗೆ ಸಣ್ಣ ಪುಟ್ಟ ಪಾತ್ರಗಳನ್ನು ಕೊಡಿಸುತ್ತಾ ಬಂದಿದ್ದ. ನಂತರ 'ಸಣ್ಣಮ್ಮನ ಅಜ್ಜಿ' ಎನ್ನುವ ಹೆಸರಿನಲ್ಲಿ ಕಿರುಚಿತ್ರ ಮಾಡಲು ಮುಂದಾಗಿದ್ದ.

    ಪವರ್‌ಸ್ಟಾರ್ ಹೆಸರು ಬಳಸಿಕೊಂಡು ದೋಖಾ ಮಾಡಿದ ಕಿಲಾಡಿ! ಪವರ್‌ಸ್ಟಾರ್ ಹೆಸರು ಬಳಸಿಕೊಂಡು ದೋಖಾ ಮಾಡಿದ ಕಿಲಾಡಿ!

    Actor Manjulamma loges complaint against accused Naveen Rai

    ಇದೇ ವೇಳೆಯಲ್ಲಿ ಕಿರುಚಿತ್ರ ನಿರ್ಮಾಣಕ್ಕೆ ಹಣ ಬೇಕಿದ್ದ ಕಾರಣ ಮಂಜುಳಮ್ಮ ಅವರ ಬಳಿ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ 15 ಲಕ್ಷ ಹಣ ಪಡೆದಿದ್ದ. ಹಣ ಪಡೆದು ಎಷ್ಟು ದಿನವಾದರೂ ಪತ್ತೆ ಇಲ್ಲದ ನವೀನ್ ರೈ ಅವರನ್ನು ಹುಡುಕಿಕೊಂಡು ಮಂಜುಳಮ್ಮ, ನವೀನ್ ಮನೆಯ ಬಳಿ ಹೋಗಿದ್ದಾರೆ.

    Actor Manjulamma loges complaint against accused Naveen Rai

    ನವೀನ್ ರೈ ಯಾರಿಗೂ ಗೊತ್ತಾಗದಂತೆ ಮನೆ ಖಾಲಿ ಮಾಡಿಕೊಂಡು ಪರಾರಿ ಆಗಿರುವ ವಿಚಾರ ತಿಳಿದ ನಂತರ ಕೂಡಲೇ ಈ ಕುರಿತು ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ಪೊಲೀಸರು ನವೀನ್ ಗಾಗಿ ಹುಡುಕಾಟ ಶುರು ಮಾಡಿದ್ದಾರೆ.

    English summary
    Actor Manjulamma loges complaint against accused Naveen Rai. Naveen had duped many actors by promising roles in films. Chenammanakere Achhukattu police launches manhunt to nab fraudster.
    Tuesday, July 31, 2018, 9:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X