Don't Miss!
- News ದೇವೇಗೌಡರು ಕಣ್ಣೀರು ಹಾಕುವಂತೆ ಯಾರು ಏನು ಮಾಡಿದ್ದಾರೆ? ಡಿ ಕೆ ಶಿವಕುಮಾರ್ ಹೇಳಿದ್ದೇನು?
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅವಕಾಶ ಕೊಡಿಸುವುದಾಗಿ 'ವಠಾರ' ಧಾರಾವಾಹಿ ನಟಿಗೆ ವಂಚನೆ
Recommended Video
'ವಠಾರ', 'ಬದುಕು', 'ರಂಗೋಲಿ' ಧಾರಾವಾಹಿಗಳ ಮೂಲಕ ಮನೆ ಮಾತಾಗಿದ್ದ ನಟಿ ಮಂಜುಳಮ್ಮ ಅವರಿಗೆ ಪಾತ್ರ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನವೀನ್ ರೈ ಎನ್ನುವ ಧಾರಾವಾಹಿ ನಿರ್ದೇಶಕನಿಂದ ಹಿರಿಯ ನಟಿ ಮೋಸ ಹೋಗಿದ್ದಾರೆ.
ನವೀನ್ ರೈ ಹಿಂದಿನಿಂದಲೂ ಧಾರಾವಾಹಿಗಳಲ್ಲಿ ಮಂಜುಳಮ್ಮ ಅವರಿಗೆ ಸಣ್ಣ ಪುಟ್ಟ ಪಾತ್ರಗಳನ್ನು ಕೊಡಿಸುತ್ತಾ ಬಂದಿದ್ದ. ನಂತರ 'ಸಣ್ಣಮ್ಮನ ಅಜ್ಜಿ' ಎನ್ನುವ ಹೆಸರಿನಲ್ಲಿ ಕಿರುಚಿತ್ರ ಮಾಡಲು ಮುಂದಾಗಿದ್ದ.
ಪವರ್ಸ್ಟಾರ್ ಹೆಸರು ಬಳಸಿಕೊಂಡು ದೋಖಾ ಮಾಡಿದ ಕಿಲಾಡಿ!
ಇದೇ ವೇಳೆಯಲ್ಲಿ ಕಿರುಚಿತ್ರ ನಿರ್ಮಾಣಕ್ಕೆ ಹಣ ಬೇಕಿದ್ದ ಕಾರಣ ಮಂಜುಳಮ್ಮ ಅವರ ಬಳಿ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ 15 ಲಕ್ಷ ಹಣ ಪಡೆದಿದ್ದ. ಹಣ ಪಡೆದು ಎಷ್ಟು ದಿನವಾದರೂ ಪತ್ತೆ ಇಲ್ಲದ ನವೀನ್ ರೈ ಅವರನ್ನು ಹುಡುಕಿಕೊಂಡು ಮಂಜುಳಮ್ಮ, ನವೀನ್ ಮನೆಯ ಬಳಿ ಹೋಗಿದ್ದಾರೆ.
ನವೀನ್ ರೈ ಯಾರಿಗೂ ಗೊತ್ತಾಗದಂತೆ ಮನೆ ಖಾಲಿ ಮಾಡಿಕೊಂಡು ಪರಾರಿ ಆಗಿರುವ ವಿಚಾರ ತಿಳಿದ ನಂತರ ಕೂಡಲೇ ಈ ಕುರಿತು ಚೆನ್ನಮ್ಮನ ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ಪೊಲೀಸರು ನವೀನ್ ಗಾಗಿ ಹುಡುಕಾಟ ಶುರು ಮಾಡಿದ್ದಾರೆ.