ಶಿವರಾತ್ರಿ ವಿಶೇಷವಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿದ ನಿಖಿಲ್ ಕುಮಾರ್
ನಟ ನಿಖಿಲ್ ಕುಮಾರ್ ಇಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶಿವರಾತ್ರಿ ಹಬ್ಬದ ವಿಶೇಷವಾಗಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿದ್ದಾರೆ.
ನಿಖಿಲ್ ಇಡೀ ದೇವಲಯವನ್ನು ಒಂದು ಸುತ್ತು ಸುತ್ತಿ ವೀಕ್ಷಣೆ ಮಾಡಿದರು. ಈ ವೇಳೆ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗಡೆ ಅವರು ಸಹ ಜೊತೆಗಿದ್ದರು. ಮಂಜುನಾಥದ ದರ್ಶನದ ಜೊತೆಗೆ ವಿರೇಂದ್ರ ಹೆಗಡೆ ಅವರನ್ನು ಭೇಟಿ ಮಾಡಿ ಕೆಲ ಕಾಲ ದೇವಲಯದಲ್ಲಿ ನಿಖಿಲ್ ಇದ್ದರು.

ಇಂದು ಶಿವರಾತ್ರಿ ಇರುವ ಕಾರಣ ಭಕ್ತಾಧಿಗಳು ಮಾತ್ರವಲ್ಲದೆ ಕೆಲ ಸಿನಿಮಾತಾರೆಯರು ಸಹ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ನಟಿ ರಚಿತಾ ರಾಮ್ ಸಹ ಮಂಜುನಾಥನ ದರ್ಶನ ಮಾಡಿದರು. ಸಿನಿಮಾದ ಕೆಲಸಗಳ ನಡುವೆ ಇಂದು ಬಿಡುವು ಮಾಡಿಕೊಂಡು ಸ್ಟಾರ್ ಗಳು ದೇವಲಯಕ್ಕೆ ಹೋಗುತ್ತಿದ್ದಾರೆ.
ಅಂದಹಾಗೆ, ನಿಖಿಲ್ ಸಿನಿಮಾಗಳ ಜೊತೆಗೆ ರಾಜಕೀಯದ ಬಗ್ಗೆ ಸಹ ಗಮನ ಹರಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಗೆ ಅವರು ಸ್ಪರ್ಧೆ ಮಾಡುತ್ತಾರೆ ಎನ್ನುವ ಗುಸು ಗುಸು ರಾಜಕೀಯ ವಲಯದಲ್ಲಿ ಇದೆ.

ಕಳೆದ ಜನವರಿಯಲ್ಲಿ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಸಿನಿಮಾ ಬಿಡುಗಡೆಯಾಗಿತ್ತು. ಇದು ಅವರ ಎರಡನೇ ಚಿತ್ರವಾಗಿತ್ತು. ಇದರ ಬಳಿಕ ನಿಖಿಲ್ ಅಭಿನಯ ಕುರುಕ್ಷೇತ್ರ ಚಿತ್ರದ ಬಿಡುಗಡೆ ಸಿದ್ಧವಾಗಿದೆ.


Click it and Unblock the Notifications











