twitter
    For Quick Alerts
    ALLOW NOTIFICATIONS  
    For Daily Alerts

    ಕೊಡಗಿಗಾಗಿ ಮಿಡಿದ ಪ್ರಕಾಶ್ ರೈ: ಹಣದ ಜೊತೆ ವಿಶೇಷ ಯೋಜನೆಗಳ ಭರವಸೆ

    By Bharath Kumar
    |

    ಭಾರಿ ಮಳೆಯಿಂದ ತತ್ತರಗೊಂಡಿರುವ ಕೊಡಗು ಜಿಲ್ಲೆಯನ್ನ ಮತ್ತೆ ಮೊದಲಿನಂತೆ ಮಾಡಲು ಕರ್ನಾಟಕದ ವಿವಿಧ ಭಾಗದ ಜನತೆ ನೆರವು ನೀಡುತ್ತಿದ್ದಾರೆ. ತಿನ್ನಲು ಆಹಾರ, ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನ ಕೊಡಗು ಜನತೆಗೆ ಕಳುಹಿಸಿ ಸಹಾಯ ಮಾಡುತ್ತಿದ್ದಾರೆ.

    ಕನ್ನಡ ಸಿನಿಮಾ ನಟರು ಹಾಗೂ ಅವರ ಅಭಿಮಾನಿ ಸಂಘಗಳು ಕೂಡ ಮಲೆನಾಡಿನ ಮಕ್ಕಳ ಸಹಾಯಕ್ಕೆ ನಿಂತಿದ್ದಾರೆ. ಇದೀಗ, ಬಹುಭಾಷಾ ನಟ ಪ್ರಕಾಶ್ ರೈ ಕೊಡಗು ಜನತೆ ಹಣದ ನೆರವು ನೀಡಿದ್ದಾರೆ.

    actor prakash rai donate 5 lakh to kodagu flood

    ಸದ್ಯಕ್ಕೆ 5 ಲಕ್ಷ ಹಣ ನೀಡುತ್ತಿರುವುದಾಗಿ ಖುದ್ದು ಪ್ರಕಾಶ್ ರೈ ಅವರೇ ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಕೊಡಗು ಜಲ್ಲೆಯ ಏಳಿಗಿಗೆ ಎಲ್ಲ ರೀತಿಯಲ್ಲೂ ಬೆಂಬಲವಾಗಿರುತ್ತೇನೆ ಎಂದು ಹೇಳಿದ್ದಾರೆ.

    ಕೊಡಗಿನವರ ನೆರವಿಗೆ ಧಾವಿಸಿದ ಕನ್ನಡ ಚಿತ್ರರಂಗದ ತಾರೆಯರು ಕೊಡಗಿನವರ ನೆರವಿಗೆ ಧಾವಿಸಿದ ಕನ್ನಡ ಚಿತ್ರರಂಗದ ತಾರೆಯರು

    ಜೊತೆಗೆ #justaskingfiundation ಮತ್ತು #prakashrajfiundation ಮೂಲಕ ಕೊಡಗನ್ನ ಕಟ್ಟುವ ಹಲವು ಯೋಜನೆಗಳನ್ನ ಮುಂದೆ ರೂಪಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ.

    ಕೊಡಗು ಜಿಲ್ಲೆಯ ಪ್ರವಾಹ ಪೀಡಿತರ ನೆರವಿಗೆ ಮುಂದಾದ ಚಂದನ್ ಶೆಟ್ಟಿ ಕೊಡಗು ಜಿಲ್ಲೆಯ ಪ್ರವಾಹ ಪೀಡಿತರ ನೆರವಿಗೆ ಮುಂದಾದ ಚಂದನ್ ಶೆಟ್ಟಿ

    ಪ್ರಕಾಶ್ ರೈ ಅವರಂತೆ ನಟ ದರ್ಶನ್, ಸುದೀಪ್, ಗಣೇಶ್, ಶಿವರಾಜ್ ಕುಮಾರ್ ಹೀಗೆ ಕನ್ನಡದ ಹಲವು ಸಿನಿತಾರೆಯರು ಕೊಡಗಿನ ಜನತೆಗೆ ನೆರವಾಗುವಂತೆ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡು ಬೆಂಬಲ ನೀಡುತ್ತಿದ್ದಾರೆ.

    English summary
    Kannada Actor prakash rai donate 5 lakh for kodagu flood. and he told ''we have some of good plans about kodagu district'' in my foundation.
    Monday, August 20, 2018, 13:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X