'ಇದೊಳ್ಳೆ ರಾಮಾಯಣ' ಆಯ್ತಲ್ಲ ಅಂದ್ರಂತೆ..! ಪ್ರಕಾಶ್ ರೈ
ಬಹುಭಾಷಾ ನಟ ಪ್ರಕಾಶ್ ರಾಜ್ ಅವರು 'ಇದೊಳ್ಳೆ ರಾಮಾಯಣ' ಅಂತ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸಾಗುತ್ತಿದ್ದಾರೆ. ಈ ಮೊದಲು ಮಲಯಾಳಂ 'ಶಟರ್' ರಿಮೇಕ್ ಮೂಲಕ ಗಾಂಧಿನಗರಕ್ಕೆ ಬರ್ತಾ ಇದ್ದಾರೆ ಅಂತ ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ಅಲ್ವಾ.
ಇದೀಗ ಮತ್ತೆ ತಮ್ಮ ಸ್ವಂತ ಪ್ರೊಡಕ್ಷನ್ಸ್ ನಲ್ಲಿ 'ಇದೊಳ್ಳೆ ರಾಮಾಯಣ' ಅನ್ನೋ ಹೊಸ ಚಿತ್ರದ ಮೂಲಕ ಹಿಂತಿರುಗಿದ್ದಾರೆ. ಅಂದಹಾಗೆ ಈ ಚಿತ್ರ ಕನ್ನಡ ಹಾಗು ತೆಲುಗು ಭಾಷೆಗಳಲ್ಲಿ ಬರಲಿದೆ. ಕನ್ನಡದಲ್ಲಿ 'ಇದೊಳ್ಳೆ ರಾಮಾಯಣ' ಹಾಗೂ ತೆಲುಗು ವರ್ಷನ್ ನಲ್ಲಿ 'ಮನವೂರಿ ರಾಮಾಯಣ' ಅನ್ನೋ ವಿಭಿನ್ನ ಟೈಟಲ್ ನಲ್ಲಿ ಮೂಡಿಬರಲಿದೆ.[ಪ್ರಕಾಶ್ ರೈ ಶಟರ್ ಎಳೆಯಲು ಪ್ರಿಯಾಮಣಿ ಬರ್ತಾರ?]

ಎಲ್ಲಾ ಹೊಸಬರನ್ನೇ ಹಾಕಿಕೊಂಡು ಈ ವಿಭಿನ್ನ ಪ್ರಯತ್ನಕ್ಕೆ ಬಹುಮುಖ ಪ್ರತಿಭೆ ಪ್ರಕಾಶ್ ರಾಜ್ ಅವರು ಕೈ ಹಾಕಿದ್ದಾರೆ. ಇನ್ನು ಈ ಚಿತ್ರಕ್ಕೆ ಸಂಗೀತ ಮಾಂತ್ರಿಕ ಇಳೆಯರಾಜ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.
ಜೊತೆಗೆ ಈ ವಿಭಿನ್ನ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಇನ್ನು ಹೆಚ್ಚಾಗಿ ಕನ್ನಡಿಗರದ್ದೇ ಗುಂಪು ಈ ಚಿತ್ರತಂಡದಲ್ಲಿರೋದು ವಿಶೇಷ ಆಕರ್ಷಣೆ.[ನಟ ಪ್ರಕಾಶ್ ರಾಜ್ ಗೆ ಶಟರ್ ಪ್ರಾಬ್ಲಂ!]
ಡೈಲಾಗ್ ಗಳ ಸಂಪೂರ್ಣ ಜವಾಬ್ದಾರಿಯನ್ನು ಖ್ಯಾತ ಬರಹಗಾರ ಜೋಗಿ ಅವರು ವಹಿಸಿಕೊಂಡಿದ್ದು, ಒಟ್ನಲ್ಲಿ ಈ ಇಡೀ ತಂಡವನ್ನು ನೋಡುತ್ತಿದ್ದರೆ, 'ಒಗ್ಗರಣೆ'ಯಂತೆ ಇದು ಕೂಡ ಒಂದು ಸದಭಿರುಚಿಯ ಚಿತ್ರ ಅನ್ನೋದು ಪೋಸ್ಟರ್ ನೋಡುತ್ತಿದ್ದಂತೆ ಮನದಟ್ಟಾಗುತ್ತದೆ.['ನಾನು ಮತ್ತು ವರಲಕ್ಷ್ಮಿ' ಸ್ಯಾಂಡಲ್ ವುಡ್ ನ ಮೊದಲ ಬೈಕ್ ರೇಸಿಂಗ್ ಸಿನಿಮಾ..!]
ಸದ್ಯಕ್ಕೆ ನಟ-ನಿರ್ಮಾಪಕ-ನಿರ್ದೇಶಕ ಪ್ರಕಾಶ್ ರಾಜ್ ಅವರು ತಾವು ದತ್ತು ತೆಗೆದುಕೊಂಡ ಹಳ್ಳಿಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಇನ್ನೇನು ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಕೂಡ ಆರಂಭಿಸುವುದಾಗಿ ತಿಳಿಸಿದ್ದಾರೆ.


Click it and Unblock the Notifications











