Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಮರಾಜ್ಯ'ದೆಡೆಗೆ ಲವ್ಲಿ ಸ್ಟಾರ್ ಪ್ರೇಮ್ ಮಗನ ಪಯಣ
ಕನ್ನಡ ನಟ ಲವ್ಲಿ ಸ್ಟಾರ್ ಪ್ರೇಮ್ ಅವರ ಮಗ ಮಾಸ್ಟರ್ ಏಕಾಂತ್ ಅವರು ಇದೀಗ 'ರಾಮರಾಜ್ಯ-ಗಾಂಧಿ ತಾತನ ಕನಸು' ಎಂಬ ಸಿನಿಮಾದಲ್ಲಿ ಮಿಂಚಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ.
ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಅವರ ಮಗ ಏಕಾಂತ್ ಅವರು ಇತ್ತೀಚೆಗಷ್ಟೇ 'ಹೆಬ್ಬುಲಿ' ಹೇರ್ ಸ್ಟೈಲ್ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ 'ರಾಮರಾಜ್ಯ-ಗಾಂಧಿ ತಾತನ ಕನಸು' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ತಂದೆಯ ಹಾದಿಯಲ್ಲೇ ಸಾಗುತ್ತಿರುವ ಏಕಾಂತ್ ಅವರಿಗೆ ನಟನೆ ಅಂದ್ರೆ ಬಲು ಸುಲಭವಂತೆ. ಓದು ಮತ್ತು ನಟನೆ ಎರಡನ್ನು ಸಮಾನವಾಗಿ ನಿಭಾಯಿಸುವ ಏಕಾಂತ್ ಗೆ, ಕ್ಯಾಮೆರಾ ಎದುರಿಸೋದು ಹೊಸದೇನಲ್ಲಾ.['ಹೆಬ್ಬುಲಿ' ಸ್ಟೈಲ್ ಮಾಡಿಕೊಂಡ 'ಈ' ಪೋರ ಖ್ಯಾತ ನಟರೊಬ್ಬರ ಮಗ]
'ರಾಮರಾಜ್ಯ-ಗಾಂಧಿ ತಾತಾನ ಕನಸು' ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದ್ದು, ಖುದ್ದು ನಟ ಲವ್ಲಿ ಸ್ಟಾರ್ ಪ್ರೇಮ್ ಅವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಅವರ ಪತ್ನಿ ಕೂಡ ಹಾಜರಿದ್ದು, ತಮ್ಮ ಮಗನ ಮೂರನೇ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಇನ್ನು ಏಕಾಂತ್ ಪ್ರೇಮ್ ಕುಮಾರ್ ಅವರಿಗೆ ಇದು ಮೊದಲ ಸಿನಿಮಾ ಏನೂ ಅಲ್ಲ. ಈ ಮೊದಲು, ಪರಮೇಶ್ ಅವರ 'ಮಾಮು ಟೀ ಅಂಗಡಿ' ಚಿತ್ರದಲ್ಲಿ ನಟಿಸಿದ್ದರು. ಅದಾದ ನಂತರ ಇನ್ನಷ್ಟೇ ತೆರೆ ಕಾಣಬೇಕಿರುವ, ಮನೋರಂಜನ್ ಮತ್ತು ಶಾನ್ವಿ ಶ್ರೀವಾಸ್ತವ ನಟನೆಯ 'ಸಾಹೇಬ' ಚಿತ್ರದಲ್ಲೂ ಪಾತ್ರ ವಹಿಸಿದ್ದು, ಸದ್ದಿಲ್ಲದೇ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ.
ಇದೀಗ ಮೂರನೇ ಚಿತ್ರಕ್ಕೆ ಸಹಿ ಹಾಕಿದ್ದು, ಈ ಚಿತ್ರದಲ್ಲಿ ಏಕಾಂತ್ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ. ನಿರ್ಮಾಪಕ ಆರ್ ಗೌಡ ಅವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ನೀಲ್ ಕೆಂಗಾಪುರ ಅವರು ನಿರ್ದೇಶನದ ಜೊತೆಗೆ ಕಥೆ ಕೂಡ ಬರೆದಿದ್ದಾರೆ.
ಮಾಸ್ಟರ್ ಏಕಾಂತ್ ಪ್ರೇಮ್ ಕುಮಾರ್ ಜೊತೆ ಮಾಸ್ಟರ್ ಹೇಮಂತ್, ಮಾಸ್ಟರ್ ಕಾರ್ತಿಕ್ ಮತ್ತು ಮಾಸ್ಟರ್ ಸೋಹೈಬ್ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಎಲ್ಲಾ ಬಾಲ ನಟರನ್ನೇ ಸೇರಿಸಿಕೊಂಡು 'ಪುನೀತ್' ಚಿತ್ರದ ಖ್ಯಾತಿಯ ನಿರ್ದೇಶಕ ನೀಲ್ ಕೆಂಗಾಪುರ ಅವರು ಮಕ್ಕಳ ಸಿನಿಮಾ ಮಾಡುತ್ತಿದ್ದಾರೆ.
ಮುಹೂರ್ತ ನೆರವೇರಿರುವುದರಿಂದ ದೇವನಹಳ್ಳಿ ಸುತ್ತ-ಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.