Don't Miss!
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- News ಮತ ಹಾಕದಿದ್ದರೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ. ಮಲ್ಲಿಕಾರ್ಜುನ್ ಖರ್ಗೆ ಭಾವನಾತ್ಮಕ ಮಾತು
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿದೇಶಿ ಯುವತಿ ಜೊತೆ ನಟ ರಾಮಕೃಷ್ಣ ಮಗನ ಅದ್ಧೂರಿ ಮದುವೆ..
ಪ್ರೀತಿಗೆ ಭಾಷೆಯ ಹಂಗಿಲ್ಲ, ಜಾತಿ ಧರ್ಮಗಳ ಹಂಗಿಲ್ಲ. ಅದ್ರಲ್ಲೂ ಕನ್ನಡದವ್ರು ಎಲ್ಲರನ್ನೂ ಪ್ರೀತಿಸೋ ಮನೋಭಾವದವ್ರು. ಮತ್ತೊಮ್ಮೆ ಇದು ಸಿನಿಮಾದವ್ರ ವಿಚಾರದಲ್ಲಿ ಸಾಬೀತಾಗಿದೆ. ಈ ಹಿಂದೆ ನವರಸನಾಯಕ ಜಗ್ಗೇಶ್ ಪುತ್ರ ಗುರು ಅವ್ರ ವಿವಾಹ ಕೂಡ ವಿದೇಶಿ ಯುವತಿಯ ಜೊತೆ ನಡೆದಿತ್ತು.
ಈಗ ಈ ನವಜೋಡಿಗೆ ಪುತ್ರನ ಜನನ ಕೂಡ ಆಗಿದೆ. ಜಗ್ಗೇಶ್ ಅಜ್ಜನಾಗಿದ್ದಾರೆ. ಮೊಮ್ಮಗನ ಪ್ರೀತಿಯನ್ನೂ ಸವಿದಿದ್ದಾರೆ. ಕನ್ನಡದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಗಳು ಕೂಡ ಇತ್ತೀಚೆಗೆ ವಿದೇಶಿ ವರನನ್ನ ಇಷ್ಟಪಟ್ಟು ಪ್ರೀತಿಸಿ ಮದುವೆಯಾಗಿದ್ದು ಸುದ್ದಿಯಾಗಿತ್ತು.
ಈಗ, ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಪಳಗಿ, ನಾಯಕ ನಟನಿಂದ ಹಿಡಿದು, ಹಾಸ್ಯ, ಪೋಷಕ ಪಾತ್ರಗಳು ಸೇರಿದಂತೆ ನಾನಾ ಪಾತ್ರಗಳನ್ನು ಪೋಷಿಸಿರುವ ಕನ್ನಡದ ಹಿರಿಯ ನಟ, ರಾಮಕೃಷ್ಣ ಪುತ್ರ ಕೂಡ ವಿದೇಶಿ ಹೆಣ್ಣನ್ನ ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆಗೆ ಸ್ಯಾಂಡಲ್ವುಡ್ನ ಹಿರಿಯ ತಾರೆಯರು ಆಗಮಿಸಿ ಶುಭಕೋರಿದ್ದಾರೆ.
ಅವರಿಬ್ಬರ ನಡುವೆ ಪ್ರೀತಿ ಚಿಗುರಿದ್ದು ಹೇಗೆ, ಮದುವೆ ಜರುಗಿದ್ದು ಯಾವ ಸಂಪ್ರದಾಯದಂತೆ, ಯಾರ್ಯಾರು ಬಂದು ವಧುವರರನ್ನು ಹಾರೈಸಿದರು... ಮುಂತಾದ ವಿವರಗಳು ಮುಂದಿನ ಸ್ಲೈಡುಗಳಲ್ಲಿ...
ಅಕ್ಷತ್ ವೆಡ್ಸ್ ಎಮ್ಮಾ
ರಂಗನಾಯಕಿ, ಪಡುವಾರಹಳ್ಳಿ ಪಾಂಡವರು, ಮಾನಸ ಸರೋವರ ಮುಂತಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿರುವ ರಾಮಕೃಷ್ಣ ಹಿರಿಯ ಪುತ್ರ ಅಕ್ಷತ್ ಫ್ರಾನ್ಸ್ ನಲ್ಲಿ ಇಂಟರ್ಪೋಲ್ ಆಫೀಸರ್. ಅಕ್ಷತ್ ವಿವಾಹವಾಗಿರೋ ವಿದೇಶಿ ಹುಡುಗಿ ಎಮ್ಮಾ ಫ್ರಾನ್ಸ್ ನವ್ರು.
ಲವ್ ಶುರುವಾಗಿದ್ದೂ ಫ್ರಾನ್ಸ್ ನಲ್ಲೇ
ಇವ್ರಿಬ್ಬರ ಪ್ರೀತಿ ಶುರುವಾಗಿದ್ದು ಫ್ರಾನ್ಸ್ ನಲ್ಲೇ. ಇಬ್ಬರೂ ಇಂಟರ್ಪೋಲಿಂಗ್ ಆಫೀಸರ್ ಅಗಿದ್ದರಿಂದ ಇಬ್ಬರ ನಡುವೆ ಸ್ನೇಹ ಪ್ರೇಮಕ್ಕೆ ತಿರುಗಿದೆ.
ಇಬ್ಬರ ಮದುವೆಗೆ ರಾಮಕೃಷ್ಣ ಗ್ರೀನ್ ಸಿಗ್ನಲ್
ನಟ ರಾಮಕೃಷ್ಣ ಕೂಡ ಮಗ ವಿದೇಶಿ ಹುಡುಗಿಯನ್ನ ಪ್ರೀತಿಸಿರೋದಕ್ಕೆ ಸಮ್ಮತಿಸಿ ಮದುವೆ ಮಾಡಿದ್ದಾರೆ. ಮದುವೆ ಇತ್ತೀಚೆಗೆ ಬೆಂಗಳೂರಿನ ಆರ್ ಟಿ ನಗರದ ತರಳಬಾಳು ಸಮುದಾಯ ಭವನದಲ್ಲಿ ನಡೆದಿದೆ.
ನವಜೋಡಿಗಳನ್ನು ಹಾರೈಸಿದ ನಟನಟಿಯರು
ಮದುವೆಗೆ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಷ್, ನಟಿ ತಾರಾ, ಜಯಮಾಲಾ ಸೇರಿದಂತೆ ಹಲವು ಸಿನಿರಂಗದ ತಾರೆಯರು ಆಗಮಿಸಿ ಶುಭಕೋರಿದ್ದಾರೆ.
ಹಿಂದೂ ಸಂಪ್ರದಾಯದಂತೆ ಲಗ್ನ
ಇನ್ನು ಮದುವೆ ಸಂಪೂರ್ಣವಾಗಿ ಹಿಂದೂ ಸಂಪ್ರದಾಯದಂತೆ ನಡೆದಿರೋದು ವಿಶೇಷ. ವಿದೇಶಿಯರಾದ್ರೂ ಕೂಡ ಹಿಂದೂ ಸಂಪ್ರದಾಯವನ್ನ ಮೆಚ್ಚಿ ಎಮ್ಮಾ ಮತ್ತು ಕುಟುಂಬದವ್ರು ಭಾರತೀಯರಂತೆ ಬೆರೆತು ಅದ್ಧೂರಿ ಮದುವೆ ಸಂಭ್ರಮವನ್ನ ಸಾರ್ಥಕಗೊಳಿಸಿದ್ದಾರೆ.
ಲಂಡನ್ನಲ್ಲಿ ಸೆಟ್ಲ್ ಆಗಲಿದ್ದಾರೆ
ಮದುವೆ ನಂತ್ರ ನವಜೋಡಿ ಲಂಡನ್ನಲ್ಲಿ ಸೆಟ್ಲ್ ಆಗಲಿದ್ದಾರಂತೆ. ಎಲ್ಲಾದರೂ ಇರಲಿ, ಹೇಗಾದರೂ ಇರಲಿ ಎಮ್ಮಾಗೆ ನಾಲ್ಕಕ್ಷರವಾದರೂ ಕನ್ನಡ ಕಲಿಸಲಿ. ಹಾಗೆಯೆ, ಹೊಸಬಾಳಿನ ಹೊಸಿಲಲಿ ನಿಂತಿರುವ ಹೊಸಜೋಡಿಗೆ ಶುಭವಾಗಲಿ.