Don't Miss!
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- News ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳ ಜನರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ-ಇವರ ಬೇಡಿಕೆ ಏನು ಗೊತ್ತಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂತೂ ಕನ್ನಡಕ್ಕೆ ಕಾಲಿಟ್ಟರು ನಟ ರಾಣಾ ದಗ್ಗುಬಾಟಿ
Recommended Video
ನಟ ರಾಣಾ ದಗ್ಗುಬಾಟಿ ಸೌತ್ ಸಿನಿರಂಗದ ಸ್ಟಾರ್ ನಟ. 'ಬಾಹುಬಲಿ' ಸಿನಿಮಾದ ನಂತರವಂತೂ ರಾಣಾ ಇಡೀ ಭಾರತದಲ್ಲಿ ಹೆಸರು ಮಾಡಿದರು. ಇಂತಹ ನಟ ಈಗ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ.
ಮತ್ತೊಂದು ಸ್ಪೋಟಕ ಕಥೆಯೊಂದಿಗೆ ಬಂದ 'ಅಟ್ಟಹಾಸ'ದ ನಿರ್ದೇಶಕ
ರಾಣಾ ಕನ್ನಡ ಸಿನಿಮಾ ಮಾಡುತ್ತಿದ್ದಾರೆ ಎಂದಾಗಲೇ ಅದು ಯಾವ ಚಿತ್ರ ಎಂಬ ಕುತೂಹಲ ಮೂಡುತ್ತದೆ. ಅಂತಹ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ನಿರ್ದೇಶಕ ಎ ಎಂ ಆರ್ ರಮೇಶ್ ಅವರ ಹೊಸ ಸಿನಿಮಾದಲ್ಲಿ ರಾಣಾ ನಾಯಕನಾಗಿದ್ದಾರೆ. ಎಂ ಆರ್ ರಮೇಶ್ ಅವರ ಕಥೆಯನ್ನು ಇಷ್ಟ ಪಟ್ಟಿರುವ ರಾಣಾ ಚಿತ್ರದಲ್ಲಿ ನಟಿಸಲು ಓಕೆ ಹೇಳಿದ್ದಾರೆ.
ಸಾಮಾನ್ಯವಾಗಿ ಎ ಎಂ ಆರ್ ರಮೇಶ್ ಅಂತ ಹೇಳಿದ ತಕ್ಷಣ ಅವರ ರಿಯಲ್ ಕಥೆಯ ಸಿನಿಮಾಗಳು ಕಣ್ಣು ಮುಂದೆ ಬರುತ್ತದೆ. 'ಸೈನೈಡ್', 'ಅಟ್ಟಹಾಸ' ಸೇರಿದಂತೆ ಈ ಹಿಂದೆ ಅನೇಕ ನೈಜ ಕಥೆಯ ಸಿನಿಮಾ ಮಾಡಿದ್ದ ಅವರು ಈಗ ಮತ್ತೆ ಅದನ್ನು ಮುಂದುವರೆಸಿದ್ದಾರೆ. ಈ ಬಾರಿ ಎಲ್ ಟಿ ಟಿ ಉಗ್ರ ಸಂಘಟನೆಯ ಬಗ್ಗೆ ಎ ಎಂ ಆರ್ ಸಿನಿಮಾ ಮಾಡಲಿದ್ದಾರೆ.
ಅಂದಹಾಗೆ, ನಿರ್ದೇಶಕ ಎ ಎಂ ಆರ್ ರಮೇಶ್ ಅವರ ಈ ಹೊಸ ಸಿನಿಮಾ ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ಪ್ರಾರಂಭ ಆಗಲಿದೆ.