Don't Miss!
- News Namma Metro: 2023-24ರಲ್ಲಿ ಮೆಟ್ರೋ ವಾರ್ಷಿಕ ಆದಾಯದಲ್ಲಿ ಭಾರೀ ಏರಿಕೆ: ಖರ್ಚು-ಆದಾಯದ ಮಾಹಿತಿ?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂತೂ ಕನ್ನಡಕ್ಕೆ ಕಾಲಿಟ್ಟರು ನಟ ರಾಣಾ ದಗ್ಗುಬಾಟಿ
Recommended Video
ನಟ ರಾಣಾ ದಗ್ಗುಬಾಟಿ ಸೌತ್ ಸಿನಿರಂಗದ ಸ್ಟಾರ್ ನಟ. 'ಬಾಹುಬಲಿ' ಸಿನಿಮಾದ ನಂತರವಂತೂ ರಾಣಾ ಇಡೀ ಭಾರತದಲ್ಲಿ ಹೆಸರು ಮಾಡಿದರು. ಇಂತಹ ನಟ ಈಗ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ.
ಮತ್ತೊಂದು ಸ್ಪೋಟಕ ಕಥೆಯೊಂದಿಗೆ ಬಂದ 'ಅಟ್ಟಹಾಸ'ದ ನಿರ್ದೇಶಕ
ರಾಣಾ ಕನ್ನಡ ಸಿನಿಮಾ ಮಾಡುತ್ತಿದ್ದಾರೆ ಎಂದಾಗಲೇ ಅದು ಯಾವ ಚಿತ್ರ ಎಂಬ ಕುತೂಹಲ ಮೂಡುತ್ತದೆ. ಅಂತಹ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ನಿರ್ದೇಶಕ ಎ ಎಂ ಆರ್ ರಮೇಶ್ ಅವರ ಹೊಸ ಸಿನಿಮಾದಲ್ಲಿ ರಾಣಾ ನಾಯಕನಾಗಿದ್ದಾರೆ. ಎಂ ಆರ್ ರಮೇಶ್ ಅವರ ಕಥೆಯನ್ನು ಇಷ್ಟ ಪಟ್ಟಿರುವ ರಾಣಾ ಚಿತ್ರದಲ್ಲಿ ನಟಿಸಲು ಓಕೆ ಹೇಳಿದ್ದಾರೆ.
ಸಾಮಾನ್ಯವಾಗಿ ಎ ಎಂ ಆರ್ ರಮೇಶ್ ಅಂತ ಹೇಳಿದ ತಕ್ಷಣ ಅವರ ರಿಯಲ್ ಕಥೆಯ ಸಿನಿಮಾಗಳು ಕಣ್ಣು ಮುಂದೆ ಬರುತ್ತದೆ. 'ಸೈನೈಡ್', 'ಅಟ್ಟಹಾಸ' ಸೇರಿದಂತೆ ಈ ಹಿಂದೆ ಅನೇಕ ನೈಜ ಕಥೆಯ ಸಿನಿಮಾ ಮಾಡಿದ್ದ ಅವರು ಈಗ ಮತ್ತೆ ಅದನ್ನು ಮುಂದುವರೆಸಿದ್ದಾರೆ. ಈ ಬಾರಿ ಎಲ್ ಟಿ ಟಿ ಉಗ್ರ ಸಂಘಟನೆಯ ಬಗ್ಗೆ ಎ ಎಂ ಆರ್ ಸಿನಿಮಾ ಮಾಡಲಿದ್ದಾರೆ.
ಅಂದಹಾಗೆ, ನಿರ್ದೇಶಕ ಎ ಎಂ ಆರ್ ರಮೇಶ್ ಅವರ ಈ ಹೊಸ ಸಿನಿಮಾ ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ಪ್ರಾರಂಭ ಆಗಲಿದೆ.