Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದೇ ವರ್ಷ ಚಿತ್ರರಂಗದಲ್ಲಿ ಸದ್ದು ಮಾಡಲಿದ್ದಾನೆ ಆರುಮುಘ ಪುತ್ರ!
Recommended Video
ನಟ ರವಿಶಂಕರ್ ಈಗಾಗಲೇ ಕನ್ನಡದಲ್ಲಿ 50ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಆಫ್ ಸೆಂಚುರಿ ಬಾರಿಸಿದ ನಂತರ ಈಗ ಜೂನಿಯರ್ ಆರುಮುಘ ಅಂದರೆ ರವಿಶಂಕರ್ ಅವರ ಪುತ್ರ ಸಿನಿಮಾರಂಗಕ್ಕೆ ಕಾಲಿಡುವ ಸಮಯ ಬಂದಿದೆ.
ವರ್ಷಗಳಿಂದ ರವಿಶಂಕರ್ ಪುತ್ರ ಅದ್ವೆಯ್ ಪುದಿಪೆಡ್ಡಿ ಚಿತ್ರರಂಗಕ್ಕೆ ಬರುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಇದೇ ವರ್ಷವೇ ತಮ್ಮ ಮಗನನ್ನು ಲಾಂಚ್ ಮಾಡುವುದಾಗಿ ರವಿಶಂಕರ್ ಹೇಳಿದ್ದಾರೆ. ವಿಶೇಷ ಅಂದರೆ ರವಿಶಂಕರ್ ತಮ್ಮ ಮಗನಿಗೆ ತಾವೇ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ 16 ವರ್ಷಗಳ ಬಳಿಕ ಅವರು ನಿರ್ದೇಶಕರಾಗಿ ಕಮ್ ಬ್ಯಾಕ್ ಮಾಡಲಿದ್ದಾರೆ. 'ದುರ್ಗಿ' ರವಿಶಂಕರ್ ಕಡೆಯದಾಗಿ ನಿರ್ದೇಶಕ ಮಾಡಿದ್ದ ಸಿನಿಮಾ.
ಮಂಡ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷನಾದ ಖಳನಟ ರವಿಶಂಕರ್
ಕನ್ನಡ ಮತ್ತು ತೆಲುಗು ಎರಡು ಚಿತ್ರರಂಗವೂ ರವಿಶಂಕರ್ ಅವರಿಗೆ ಪರಿಚಿತ ಇದೆ. ಹೀಗಿದ್ದರು ತಮ್ಮ ಪ್ರತಿಭೆಗೆ ಸರಿಯಾದ ಬೆಲೆ ಸಿಕ್ಕ ಕನ್ನಡ ಚಿತ್ರರಂಗದಲ್ಲಿಯೇ ಮಗನನ್ನು ಪರಿಚಯ ಮಾಡುವ ನಿರ್ಧಾರ ಮಾಡಿದ್ದಾರೆ. ಅದ್ವೆಯ್ ಪುದಿಪೆಡ್ಡಿ ನ್ಯೂಯಾರ್ಕ್ ನ ಲೀ ಸ್ಟ್ರಾಸ್ಬರ್ಗ್ ಥಿಯೇಟರ್ ಅಂಡ್ ಫಿಲ್ಮ್ ಇನ್ಸ್ಟ್ ಟ್ಯೂಟ್ ನಲ್ಲಿ ಒಂದು ವರ್ಷದ ಕೋರ್ಸ್ ಮುಗಿಸಿಕೊಂಡು ಬಂದಿದ್ದಾರೆ. ಒಬ್ಬ ಹೀರೋಗೆ ಬೇಕಾದ ಎಲ್ಲ ತರಬೇತಿಯನ್ನು ಪಡೆದುಕೊಂಡಿದ್ದಾರೆ.
ಅಂದಹಾಗೆ, ರವಿಶಂಕರ್ ಸದ್ಯ ತಮ್ಮ ಸಿನಿಮಾದ ನಟನೆ ಜೊತೆ ಜೊತೆಗೆ ಮಗನ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಬಿಜಿ ಇದ್ದಾರೆ. ಅದಷ್ಟು ಬೇಗ ಕಥೆ, ಚಿತ್ರಕಥೆ ಮುಗಿಸಿ ಮಗನ ಸಿನಿಮಾ ಶುರು ಮಾಡುವ ಉತ್ಸಾಹದಲ್ಲಿದ್ದಾರೆ. ಸದ್ಯ ರವಿಶಂಕರ್ ದರ್ಶನ್ ಅವರ 'ಯಜಮಾನ' ಮತ್ತು 'ಅಯೋಗ್ಯ' ಚಿತ್ರದಲ್ಲಿ ನಟಿಸುತ್ತಿದ್ದಾರೆ.