'ರಾಜೇಂದ್ರ ಪೊನ್ನಪ್ಪ' ಸಿನಿಮಾ ಕಥೆ ಏನು ? ರವಿಚಂದ್ರನ್ ಕೊಟ್ಟ ಉತ್ತರ
ನಟ ರವಿಚಂದ್ರನ್ ಅವರ 'ರಾಜೇಂದ್ರ ಪೊನ್ನಪ್ಪ' ಸಿನಿಮಾದ ಪೋಸ್ಟರ್ ಗಳು ಇತ್ತೀಚಿಗಷ್ಟೆ ರಿಲೀಸ್ ಆಗಿತ್ತು. ಚಿತ್ರದ ಪೋಸ್ಟರ್ ಮೇಲೆ ಬರೆದ ಡೈಲಾಗ್ ಗಳು ದೊಡ್ಡ ಸುದ್ದಿ ಮಾಡಿದ್ದವು. ಆದರೆ ಈಗ ಸಿನಿಮಾದ ಮತ್ತೊಂದು ಮುಖ್ಯ ಸಂಗತಿ ಬಹಿರಂಗವಾಗಿದೆ.
ಇಂದು ತಮ್ಮ ಹುಟ್ಟುಹಬ್ಬದ ವಿಶೇಷವಾಗಿ ಮಾತನಾಡಿದ ರವಿಚಂದ್ರನ್ 'ರಾಜೇಂದ್ರ ಪೊನ್ನಪ್ಪ' ಸಿನಿಮಾದ ಕೆಲ ವಿಷಯವನ್ನು ಹೇಳಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಒಂದು ಸಂದೇಶವನ್ನು ಇದ್ದು, ಅತ್ಯಾಚಾರ ವಿರುದ್ಧ ಈ ಮೂಲಕ ಕ್ರೇಜಿಸ್ಟಾರ್ ಸಮರ ಸಾರಿದ್ದಾರೆ. ಇಂದು ಚಿಕ್ಕ ಮಕ್ಕಳ ಮೇಲೆಯೂ ಅತ್ಯಾಚಾರ ಆಗುತ್ತಿದೆ. ಇಂತಹ ಸಮಯದಲ್ಲಿ ಸಮಾಜಕ್ಕೆ ಈ ಸಿನಿಮಾ ಸಂದೇಶ ನೀಡಲಿದೆ ಎಂದರು ರವಿಚಂದ್ರನ್.

ಮಾಸ್ ಸಿನಿಮಾ ಮಾಡಿದರೆ ಕ್ಲಾಸ್ ಜನರಿಗೆ ಇಷ್ಟ ಆಗೋದಿಲ್ಲ, ಕ್ಲಾಸ್ ಸಿನಿಮಾ ಮಾಡಿದರೆ ಮಾಸ್ ಜನರಿಗೆ ಇಷ್ಟ ಆಗೋದಿಲ್ಲ ಆ ಕಾರಣದಿಂದ 'ರಾಜೇಂದ್ರ ಪೊನ್ನಪ್ಪ' ಸಿನಿಮಾದಲ್ಲಿ ಮಾಸ್ ಮತ್ತು ಕ್ಲಾಸ್ ಎರಡು ರೀತಿಯ ಅಂಶಗಳು ಇವೆಯಂತೆ. ವಿಶೇಷ ಅಂದರೆ, 'ಅಪೂರ್ವ' ನಂತರ ಮತ್ತೆ 'ರಾಜೇಂದ್ರ ಪೊನ್ನಪ್ಪ' ಚಿತ್ರದ ಮೂಲಕ ರವಿಚಂದ್ರನ್ ನಿರ್ದೇಶನಕ್ಕೆ ಮರಳಿದ್ದಾರೆ.


Click it and Unblock the Notifications











