Don't Miss!
- News Bank Holidays in April: ಏಪ್ರಿಲ್ನಲ್ಲಿ 14 ದಿನಗಳ ಕಾಲ ಬ್ಯಾಂಕ್ ರಜೆ, ಪಟ್ಟಿ ಇಲ್ಲಿದೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಟೋ ಚಾಲಕರ ಜೊತೆ ಕನ್ನಡ ರಾಜ್ಯೋತ್ಸವ ಆಚರಿಸಿದ ಸತೀಶ್ ನೀನಾಸಂ
ಆಟೋ ಚಾಲಕರು ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿಗೂ ಒಂದು ರೀತಿ ಅವಿನಾಭಾವ ಸಂಬಂಧ. ಸ್ಯಾಂಡಲ್ ವುಡ್ ಚಿತ್ರಗಳನ್ನು ಮೊದಲ ದಿನ ಮೊದಲ ಶೋ ನೋಡುವ ಪ್ರೇಕ್ಷಕರಲ್ಲಿ ಆಟೋ ಚಾಲಕರೇ ಹೆಚ್ಚಿರ್ತಾರೆ ಎನ್ನುವುದನ್ನು ಮರೆಯುವಂತಿಲ್ಲ.
ಶಂಕರ್ ನಾಗ್, ವಿಷ್ಣುವರ್ಧನ್, ದರ್ಶನ್, ಸುದೀಪ್, ಗಣೇಶ್ ಸೇರಿದಂತೆ ಅನೇಕ ಕಲಾವಿದರು ಆಟೋ ಡ್ರೈವರ್ಗಳ ಪಾತ್ರ ಮಾಡಿದ್ದಾರೆ. ಅದೇಷ್ಟೋ ಆಟೋ ಚಾಲಕರ ಪಾಲಿಗೆ ಈ ಕಲಾವಿದರು ಆರಾಧ್ಯ ದೈವವೇ ಆಗಿದ್ದಾರೆ.
ಸತೀಶ್ ನೀನಾಸಂ ವೃತ್ತಿ ಜೀವನದಲ್ಲಿ ಇಂದು ಮರೆಯಲಾಗದ ದಿನ
ಇಂತಹ ಆಟೋ ಚಾಲಕರ ಜೊತೆ ನಟ ಸತೀಶ್ ನೀನಾಸಂ ಅವರು ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಪೀಸ್ ಆಟೋ ಸಂಘದ ವತಿಯಿಂದ ಆಯೋಜಿಸಲಾಗಿದ್ದ, ಆಟೋ ಚಾಲಕರ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸತೀಶ್ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು.
ಈ ಕುರಿತು ಟ್ವಿಟ್ಟರ್ನಲ್ಲಿ ಸಂತಸ ಹಂಚಿಕೊಂಡಿರುವ ಸತೀಶ್ ''ನಮ್ಮ ಆಟೋ ಚಾಲಕರಿಂದ ಕನ್ನಡದ ಸಿನಿಮಾ, ಭಾಷೆ, ಎಲ್ಲದಕ್ಕು ದೊಡ್ಡ ಕೊಡುಗೆ ಇದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಅತ್ಯಂತ ಸಂತಸದ ಕ್ಷಣ, ಜೈ ಕರ್ನಾಟಕ. ಜೈ ಆಟೋ ಚಾಲಕ...'' ಎಂದು ವಿಡಿಯೋ ಹಂಚಿಕೊಂಡಿದ್ದಾರೆ.
Recommended Video
ಅಂದ್ಹಾಗೆ, ಸತೀಶ್ ನೀನಾಸಂ ಅವರು ಸತತ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಸದ್ಯ, ಪೆಟ್ರೋಮ್ಯಾಕ್ಸ್, ದಸರಾ ಹಾಗೂ ಮ್ಯಾಟ್ನಿ ಎಂಬ ಚಿತ್ರಗಳಲ್ಲಿ ನಟಿಸುತ್ತಿದ್ದು, ಈ ಮೂರು ಸಿನಿಮಾ ಚಿತ್ರೀಕರಣ ಮಾಡ್ತಿವೆ.