ಶರಣ್ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆ
ನಿನ್ನೆ (ಶನಿವಾರ) ಚಿತ್ರೀಕರಣದ ವೇಳೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಶರಣ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅವರಿಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
'ಅವತಾರ ಪುರುಷ' ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಶರಣ್ ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಶರಣ್ ಅವರು ನಿನ್ನೆ ಮಲ್ಲಿಗೆ ಆಸ್ಪತ್ರೆಗೆ ಶರಣ್ ದಾಖಲಾಗಿದ್ದರು.
ತಪಾಸಣೆ ನಡೆಸಿದ ವೈದ್ಯರು ಶರಣ್ ಗೆ ಕಿಡ್ನಿ ಸ್ಟೋನ್ ಆಗಿರುವುದಾಗಿ ಹೇಳಿದ್ದರು. ವೈದ್ಯರ ಸಲಹೆಯಂತೆ ಒಂದು ದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶರಣ್, ಇಂದು ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕಾರಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Recommended Video
ನಾನು, ವೇಣು ಲವ್ ಮಾಡೋವಾಗ SPB ನಂಗೆ ಒಂದು ಗಿಫ್ಟ್ ಕೊಟ್ಟಿದ್ರು | Tara | SPB | Filmibeat kannada
ಶರಣ್ ಸಹೋದರಿ ಶೃತಿ ಅವರು ನಿನ್ನೆ ಆಸ್ಪತ್ರೆಯಲ್ಲಿದ್ದು ಸಹೋದರನ ಆರೈಕೆ ಮಾಡಿದ್ದಾರೆ. ಇದರ ಕುಟುಂಬ ಸದಸ್ಯರು ಸಹ ಆಸ್ಪತ್ರೆಯಲ್ಲಿದ್ದರು. ಇಂದು ಶರಣ್ ಮನೆಗೆ ತೆರಳಿದ್ದು, ಮನೆಯಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಕೆಲ ದಿನದ ನಂತರ ಚಿತ್ರೀಕರಣಕ್ಕೆ ಪುನಃ ಹಾಜರಾಗಲಿದ್ದಾರೆ.
More from Filmibeat
English summary
Actor Sharan's health recovered well and he discharged from hospital. He admitted to Mallige hospital yesterday.


Click it and Unblock the Notifications











