Don't Miss!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರರಂಗದಲ್ಲಿ ಸುದೀಪ್, ದರ್ಶನ್, ಅಪ್ಪು, ಯಶ್ ಮಾತ್ರ ಹೀರೋಗಳಲ್ಲ: ಶಿವರಾಜ್ ಕುಮಾರ್
'ಚಂದನವನ ಫಿಲ್ಮ್ ಕ್ರಿಟಿಕ್ಸ್' ಅವಾರ್ಡ್ ಇದು ಸಿನಿಮಾ ಪತ್ರಕರ್ತರಿಂದ ಪ್ರಾರಂಭವಾದ ಅವಾರ್ಡ್ ಅಕಾಡೆಮಿ. ಸಿನಿಮಾ ವಿಮರ್ಶಕರಿಂದನೆ ಉತ್ತಮ ಸಿನಿಮಾಗಳಿಗೆ ಪ್ರಶಸ್ತಿ ನೀಡುವ ಅಕಾಡೆಮಿ. ದಕ್ಷಿಣ ಭಾರತದಲ್ಲೆ ಮೊದಲ ಬಾರಿಗೆ ಇಂತಹ ಒಂದು ಅವಾರ್ಡ್ ಅಕಾಡೆಮಿ ಪ್ರಾರಂಭವಾಗಿದೆ.
ಇಂದು ಅಕಾಡೆಮಿಯ ಲೋಗೊವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಉದ್ಘಾಟನೆ ಮಾಡಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಶಿವರಾಜ್ ಕುಮಾರ್ "ಚಿತ್ರರಂಗದಲ್ಲಿ ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಅಪ್ಪು, ಯಶ್ ಮಾತ್ರ ಹೀರೋಗಳಲ್ಲ. ಸಾಕಷ್ಟು ಹೀರೋಗಳಿದ್ದಾರೆ. ಯುವ ನಟರಿದ್ದಾರೆ ಎಲ್ಲರಿಗೂ ಸಹಕಾರ ಕೊಡಿ" ಎಂದು ಹೇಳಿದ್ದಾರೆ.
Recommended Video
ಪಿ ಆರ್ ಕೆ ಆಡಿಯೋದಲ್ಲಿ ಅತಿ ವೀಕ್ಷಣೆ ಪಡೆದ ಹಾಡು 'ಟಗರು ಬಂತು ಟಗರು'
"ನನ್ನನ್ನು ಇಂಡಸ್ಟ್ರಿಯ ಪಿಲ್ಲರ್ ಎಂದು ಕರೆಯಬೇಡಿ. ಹಿರಿಯ ನಟರಿದ್ದಾರೆ. ಅನಂತ್ ನಾಗ್, ರವಿಚಂದ್ರನ್ ಸೇರಿದಂತೆ ಅನೇಕ ಹಿರಿಯ ನಟರೆಲ್ಲ ಇದ್ದಾರೆ ಇಂದಿಗೂ ಸಕ್ರೀಯರಾಗಿದ್ದಾರೆ. ಅವರೆಲ್ಲ ಪಿಲ್ಲರ್ಸ್ ನಾನು ಇಟ್ಟಿಗೆ ಆಗಿ ಇರಲು ಇಷ್ಟಪಡುತ್ತೇನೆ" ಎಂದು 'ಚಂದನವನದ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ' ಲೋಗೊ ಉದ್ಘಾಟನೆ ಮಾಡಿ ಮಾತನಾಡಿದರು.
"ಸುಮಾರು 33 ವರ್ಷಗಳಿಂದನೂ ನನಗೆ ಪತ್ರಕರ್ತರ ಗೊತ್ತಿದ್ದಾರೆ ಈಗ ಎರಡು ಮೂರು ವರ್ಷದ ಹಿಂದೆ ಬಂದ ಕಿರಿಯ ಪತ್ರಕರ್ತರು ಗೊತ್ತಿದ್ದಾರೆ. ಸಾಕಷ್ಟು ಬಾರಿ ಪತ್ರಕರ್ತರ ಜೊತೆ ಜಗಳ ಆಡಿದ್ದೀನಿ, ಆದ್ರೆ ತುಂಬಾ ತಿದ್ದುಕೊಂಡಿದ್ದೇನೆ, ಕಲಿಸಿದ್ದೀನಿ, ಇವತ್ತು 'ಚಂದನವನದ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್' ಅಕಾಡೆಮಿ ಮಾಡಿರುವುದು ಸಂತಸ" ಎಂದು ಹೇಳಿದ್ದಾರೆ.
'ಚಂದನವನದ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್' ಅಕಾಡೆಮಿಯಿಂದ ಪ್ರತೀ ವರ್ಷ 20 ವಿಭಾಗಗಳಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತೆ. ಯಾವುದೆ ಲಾಬಿಯಿಲ್ಲದೇ, ಸಿನಿಮಾ ವಿಮರ್ಶೆಗಾಗಿ ಸಿನಿಮಾ ಪತ್ರಕರ್ತರಿಂದಲೆ ಈ ಪ್ರಶಸ್ತಿ ನೀಡಲಾಗುತ್ತೆ.