Don't Miss!
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Sports IPL 2024: RCB ವಿರುದ್ಧ ಪಂದ್ಯಕ್ಕೆ KKRನ ಆಡುವ 11ರ ಬಳಗ ಮರೆತ ಶ್ರೇಯಸ್ ಅಯ್ಯರ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರರಂಗದಲ್ಲಿ ಸುದೀಪ್, ದರ್ಶನ್, ಅಪ್ಪು, ಯಶ್ ಮಾತ್ರ ಹೀರೋಗಳಲ್ಲ: ಶಿವರಾಜ್ ಕುಮಾರ್
'ಚಂದನವನ ಫಿಲ್ಮ್ ಕ್ರಿಟಿಕ್ಸ್' ಅವಾರ್ಡ್ ಇದು ಸಿನಿಮಾ ಪತ್ರಕರ್ತರಿಂದ ಪ್ರಾರಂಭವಾದ ಅವಾರ್ಡ್ ಅಕಾಡೆಮಿ. ಸಿನಿಮಾ ವಿಮರ್ಶಕರಿಂದನೆ ಉತ್ತಮ ಸಿನಿಮಾಗಳಿಗೆ ಪ್ರಶಸ್ತಿ ನೀಡುವ ಅಕಾಡೆಮಿ. ದಕ್ಷಿಣ ಭಾರತದಲ್ಲೆ ಮೊದಲ ಬಾರಿಗೆ ಇಂತಹ ಒಂದು ಅವಾರ್ಡ್ ಅಕಾಡೆಮಿ ಪ್ರಾರಂಭವಾಗಿದೆ.
ಇಂದು ಅಕಾಡೆಮಿಯ ಲೋಗೊವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಉದ್ಘಾಟನೆ ಮಾಡಿದ್ದಾರೆ. ಈ ಸಮಯದಲ್ಲಿ ಮಾತನಾಡಿದ ಶಿವರಾಜ್ ಕುಮಾರ್ "ಚಿತ್ರರಂಗದಲ್ಲಿ ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಅಪ್ಪು, ಯಶ್ ಮಾತ್ರ ಹೀರೋಗಳಲ್ಲ. ಸಾಕಷ್ಟು ಹೀರೋಗಳಿದ್ದಾರೆ. ಯುವ ನಟರಿದ್ದಾರೆ ಎಲ್ಲರಿಗೂ ಸಹಕಾರ ಕೊಡಿ" ಎಂದು ಹೇಳಿದ್ದಾರೆ.
Recommended Video
ಪಿ ಆರ್ ಕೆ ಆಡಿಯೋದಲ್ಲಿ ಅತಿ ವೀಕ್ಷಣೆ ಪಡೆದ ಹಾಡು 'ಟಗರು ಬಂತು ಟಗರು'
"ನನ್ನನ್ನು ಇಂಡಸ್ಟ್ರಿಯ ಪಿಲ್ಲರ್ ಎಂದು ಕರೆಯಬೇಡಿ. ಹಿರಿಯ ನಟರಿದ್ದಾರೆ. ಅನಂತ್ ನಾಗ್, ರವಿಚಂದ್ರನ್ ಸೇರಿದಂತೆ ಅನೇಕ ಹಿರಿಯ ನಟರೆಲ್ಲ ಇದ್ದಾರೆ ಇಂದಿಗೂ ಸಕ್ರೀಯರಾಗಿದ್ದಾರೆ. ಅವರೆಲ್ಲ ಪಿಲ್ಲರ್ಸ್ ನಾನು ಇಟ್ಟಿಗೆ ಆಗಿ ಇರಲು ಇಷ್ಟಪಡುತ್ತೇನೆ" ಎಂದು 'ಚಂದನವನದ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ' ಲೋಗೊ ಉದ್ಘಾಟನೆ ಮಾಡಿ ಮಾತನಾಡಿದರು.
"ಸುಮಾರು 33 ವರ್ಷಗಳಿಂದನೂ ನನಗೆ ಪತ್ರಕರ್ತರ ಗೊತ್ತಿದ್ದಾರೆ ಈಗ ಎರಡು ಮೂರು ವರ್ಷದ ಹಿಂದೆ ಬಂದ ಕಿರಿಯ ಪತ್ರಕರ್ತರು ಗೊತ್ತಿದ್ದಾರೆ. ಸಾಕಷ್ಟು ಬಾರಿ ಪತ್ರಕರ್ತರ ಜೊತೆ ಜಗಳ ಆಡಿದ್ದೀನಿ, ಆದ್ರೆ ತುಂಬಾ ತಿದ್ದುಕೊಂಡಿದ್ದೇನೆ, ಕಲಿಸಿದ್ದೀನಿ, ಇವತ್ತು 'ಚಂದನವನದ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್' ಅಕಾಡೆಮಿ ಮಾಡಿರುವುದು ಸಂತಸ" ಎಂದು ಹೇಳಿದ್ದಾರೆ.
'ಚಂದನವನದ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್' ಅಕಾಡೆಮಿಯಿಂದ ಪ್ರತೀ ವರ್ಷ 20 ವಿಭಾಗಗಳಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತೆ. ಯಾವುದೆ ಲಾಬಿಯಿಲ್ಲದೇ, ಸಿನಿಮಾ ವಿಮರ್ಶೆಗಾಗಿ ಸಿನಿಮಾ ಪತ್ರಕರ್ತರಿಂದಲೆ ಈ ಪ್ರಶಸ್ತಿ ನೀಡಲಾಗುತ್ತೆ.