Don't Miss!
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್-ಪವನ್ ಜೋಡಿಯ 'ದ್ವಿತ್ವ' ಬಗ್ಗೆ ತಮಿಳು ನಟ ಸಿದ್ಧಾರ್ಥ್ ಹೇಳಿದ್ದೇನು?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ಜೋಡಿಯ ಚಿತ್ರಕ್ಕೆ 'ದ್ವಿತ್ವ' ಎಂದು ಹೆಸರಿಡಲಾಗಿದೆ. ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಆರಂಭಿಕ ಹಂತದಲ್ಲೇ ಕುತೂಹಲ ಹೆಚ್ಚಿಸಿದೆ.
ಟಲ್ ಹಾಗೂ ಪೋಸ್ಟರ್ನಿಂದ ವಿಶೇಷವಾಗಿ ಗಮನ ಸೆಳೆಯುತ್ತಿರುವ 'ದ್ವಿತ್ವ' ಚಿತ್ರದ ಬಗ್ಗೆ ತಮಿಳು ನಟ ಸಿದ್ಧಾರ್ಥ್ ಸಂತಸ ವ್ಯಕ್ತಪಡಿಸಿದ್ದಾರೆ.
'ದ್ವಿತ್ವ' ಫಸ್ಟ್ ಲುಕ್: ಅಪ್ಪು ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ ವಿಜಯ್ ಕಿರಗಂದೂರ್
''ಪುನೀತ್ ರಾಜ್ ಕುಮಾರ್ ಮತ್ತು ಪವನ್ ಕುಮಾರ್ ಕಾಂಬಿನೇಷನ್ ಮೇಲೆ ನಿರೀಕ್ಷೆ ಹೆಚ್ಚಿದೆ. ಇಬ್ಬರಿಗೂ ಆಲ್ ದಿ ಬೆಸ್ಟ್. ಕನ್ನಡ ಚಿತ್ರರಂಗದಿಂದ ವಿಶೇಷವಾದ ಸಿನಿಮಾಗಳು ಬರ್ತಾನೆ ಇದೆ'' ಎಂದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.
ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ, ಸುರೇಶ್ ಸಂಕಲನವಿದೆ. ಪ್ರೀತಾ ಛಾಯಾಗ್ರಹಣವಿದೆ.
ದ್ವಿತ್ವ ಎಂದರೇನು?
'ದ್ವಿತ್ವ' ಎಂದರೆ ಎರಡು ರೀತಿಯ ವ್ಯಕ್ತಿತ್ವ ಎಂದು ಈ ಸಿನಿಮಾದ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಒಬ್ಬನೇ ವ್ಯಕ್ತಿಯ ಎರಡು ಮುಖ ಅಥವಾ ಒಂದೇ ರೀತಿ ಕಾಣುವ ಇಬ್ಬರು ವ್ಯಕ್ತಿ ಹೀಗೆ ಭಿನ್ನ ಅರ್ಥಗಳನ್ನು ಸೂಸುತ್ತಿದೆ ಈ ಹೆಸರು.
ಹೊಂಬಾಳೆ ಜೊತೆ ಐದನೇ ಚಿತ್ರ
Recommended Video
ಹೊಂಬಾಳೆ ಫಿಲಂಸ್ ಜೊತೆ ನಿನ್ನಿಂದಲೇ ಚಿತ್ರದಿಂದ ಜರ್ನಿ ಶುರು ಮಾಡಿದ ಪುನೀತ್ ರಾಜ್ ಕುಮಾರ್, ರಾಜಕುಮಾರ, ಯುವರತ್ನ ಸಿನಿಮಾ ಮಾಡಿದರು. ಮತ್ತೆ ಸಂತೋಷ್ ಆನಂದ್ ರಾಮ್-ಪುನೀತ್ ಜೋಡಿಯ ಹೊಸ ಚಿತ್ರಕ್ಕೆ ಹೊಂಬಾಳೆ ಬಂಡವಾಳ ಹಾಕುತ್ತಿದೆ. ಈ ನಡುವೆ ಪವನ್-ಪುನೀತ್ ಜೊತೆಗಿನ ಚಿತ್ರಕ್ಕೂ ಹೊಂಬಾಳೆ ನಿರ್ಮಾಪಕರು. ಈ ಮೂಲಕ ಪವರ್ ಸ್ಟಾರ್ ಜೊತೆ ಇದು ಐದನೇ ಪ್ರಾಜೆಕ್ಟ್.