Don't Miss!
- Finance ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ ಸೇವೆ ಆರಂಭ, ದಿನಾಂಕ ವಿವರ
- News ವಿ ಸೋಮಣ್ಣಗೆ ಎದುರಾಯ್ತು ಸಂಕಷ್ಟ: ಕೈ ನಾಯಕರ ಸಂಪರ್ಕದಲ್ಲಿರುವ ಮಾಧುಸ್ವಾಮಿ: ಕಾಂಗ್ರೆಸ್ ಸೇರ್ಪಡೆ?
- Automobiles ರಾಂಗ್ ರೂಟ್ನಲ್ಲಿ ಬಂದು ಪ್ರಶ್ನಿಸಿದ ಬೈಕ್ ಸವಾರನಿಗೆ ಥಳಿಸಿದ ಕಾರು ಚಾಲಕ: ವಿಡಿಯೋ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Sports IPL 2024: ಮುಂಬೈ ನಾಯಕನಿಗೆ ಪತ್ರಕರ್ತರಿಂದ ಬೌನ್ಸರ್: ಉತ್ತರಿಸದೆ ಮೌನಕ್ಕೆ ಶರಣಾದ ಹಾರ್ದಿಕ್ ಪಾಂಡ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರೀಮುರಳಿ ಜೊತೆ ಮಹೇಶ್ ಬಾಬು : ಯಾವ್ ಸಿನಿಮಾ, ಏನ್ ವಿಶೇಷ?
Recommended Video
ನಟ ಶ್ರೀಮುರಳಿ ಹಾಗೂ ಮಹೇಶ್ ಬಾಬು ಇಬ್ಬರು ಎರಡು ಬೇರೆ ಬೇರೆ ಚಿತ್ರರಂಗದ ದೊಡ್ಡ ನಟರು. ಟಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನ ದೊಡ್ಡ ನಟರು ಇದೀಗ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರೀ ಮುರಳಿ ಹಾಗೂ ಪ್ರಿನ್ಸ್ ಮಹೇಶ್ ಬಾಬು ಫೋಟೋ ನೋಡಿದ ತಕ್ಷಣ ಈ ಇಬ್ಬರು ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರ? ಎನ್ನುವ ಕುತೂಹಲ ಕೆಲವರಿಗೆ ಬರಬಹುದು. ಅಲ್ಲದೆ, ಈ ಇಬ್ಬರು ನಟರು ಎಲ್ಲಿ ಯಾವ ವಿಚಾರವಾಗಿ ಭೇಟಿ ಮಾಡಿದ್ದಾರೆ ಎನ್ನುವ ಪ್ರಶ್ನೆ ಕೂಡ ಹುಟ್ಟಬಹುದು. ಅಂತಹ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.
ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ರೀಮುರಳಿ
ಶ್ರೀ ಮುರಳಿ ಹಾಗೂ ಮಹೇಶ್ ಬಾಬು ಅವರ ಫೋಟೋ 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿದೆ. ಈ ಫೋಟೋದ ಕೆಲ ವಿವರ ಮುಂದಿದೆ ಓದಿ..
ರಾಮೋಜಿ ಫಿಲಂ ಸಿಟಿಯಲ್ಲಿ ಭೇಟಿ
ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ನಟ ಶ್ರೀ ಮುರಳಿ ಹಾಗೂ ಮಹೇಶ್ ಬಾಬು ಭೇಟಿ ಮಾಡಿದ್ದಾರೆ. ಚೇತನ್ ಕುಮಾರ್ ನಿರ್ದೇಶನದ 'ಭರಾಟೆ' ಸಿನಿಮಾದ ಚಿತ್ರೀಕರಣಕ್ಕಾಗಿ ಶ್ರೀಮುರಳಿ ಅಲ್ಲಿಗೆ ಹೋಗಿದ್ದರು. ಮಹೇಶ್ ಬಾಬು ಕೂಡ 'ಮಹರ್ಷಿ' ಸಿನಿಮಾದ ಶೂಟಿಂಗ್ ನಲ್ಲಿ ಇದ್ದರು. ಈ ವೇಳೆ ಈ ಇಬ್ಬರು ನಟರು ಭೇಟಿ ಮಾಡಿದ್ದಾರೆ.
ಆಡೋ ಮಾತ್ಮೇಲೆ ಜವಾಬ್ದಾರಿ ಇರಬೇಕು: ಶ್ರೀಮುರಳಿ ಹೇಳಿದ್ದು ಯಾರಿಗೆ?
'ಉಗ್ರಂ' ಮೆಚ್ಚಿದ ಮಹೇಶ್ ಬಾಬು
ಶ್ರೀ ಮುರಳಿ ಹಾಗೂ ಮಹೇಶ್ ಬಾಬು ನಡುವೆ ಹಿಂದೆಯಿಂದ ಪರಿಚಯ ಇದೆಯಂತೆ. ಈ ಹಿಂದೆ ಕೆಲವು ಬಾರಿ ಈ ನಟರು ಭೇಟಿ ಮಾಡಿದ್ದರು. ಈ ಬಾರಿ ಭೇಟಿ ಮಾಡಿದ ಸಮಯದಲ್ಲಿ ಶ್ರೀ ಮುರಳಿ ನಟನೆಯ 'ಉಗ್ರಂ' ಬಗ್ಗೆ ಮಹೇಶ್ ಬಾಬು ಮೆಚ್ಚುಗೆ ಸೂಚಿಸಿದ್ದರಂತೆ.
ಕನ್ನಡ ಚಿತ್ರಗಳನ್ನು ಕೊಂಡಾಡಿದ ಪ್ರಿನ್ಸ್
ಸುಮಾರು ಒಂದು ಗಂಟೆಗಳ ಕಾಲ ಶ್ರೀ ಮುರಳಿ ಹಾಗೂ ಮಹೇಶ್ ಬಾಬು ನಡುವೆ ಮಾತುಕತೆ ನಡೆದಿದೆ. ಈ ವೇಳೆ ಕನ್ನಡ ಚಿತ್ರರಂಗದ ಬಗ್ಗೆ ಕೂಡ ಮಹೇಶ್ ಬಾಬು ಮಾತನಾಡಿದ್ದಾರೆ. ಕನ್ನಡ ಸಿನಿಮಾಗಳ ಟ್ರೆಂಡ್ ಬದಲಾಗುತ್ತಿದೆ ನಿಜಕ್ಕೂ ಇದು ಖುಷಿಯ ಸಂಗತಿ ಎಂದಿದ್ದಾರೆ.
ಮೂರು ಕನ್ನಡ ಚಿತ್ರಗಳ ಶೂಟಿಂಗ್
ಸದ್ಯ ರಾಮೋಜಿ ಫಿಲಂ ಸಿಟಿಯಲ್ಲಿ ಕನ್ನಡದ ಮೂರು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಸುದೀಪ್ ಅವರ 'ಪೈಲ್ವಾನ್', ಧ್ರುವ ಸರ್ಜಾ ನಟನೆಯ 'ಪೊಗರು' ಹಾಗೂ ಶ್ರೀಮುರಳಿ ಅವರ 'ಭರಾಟೆ' ಚಿತ್ರೀಕರಣ ಸಾಗುತ್ತಿದೆ. ಈ ಬಗ್ಗೆ ಕೂಡ ಮಹೇಶ್ ಬಾಬು ಮಾತನಾಡಿದ್ದು, ನಮ್ಮ ಒಂದು ಸಿನಿಮಾ ಇಲ್ಲಿ ಶೂಟಿಂಗ್ ಆಗುತ್ತಿದ್ದರೆ, ಕನ್ನಡದ ಮೂರು ಚಿತ್ರಗಳ ಕೆಲಸಗಳು ನಡೆಯುತ್ತಿದೆ ಎಂದು ಪ್ರೋತ್ಸಾಹದ ಮಾತುಗಳನ್ನು ಆಡಿದ್ದಾರೆ.