ಹೈದರಾಬಾದ್ ನಲ್ಲಿ 'ಪೈಲ್ವಾನ್'ನನ್ನು ಭೇಟಿ ಮಾಡಿದ ಶ್ರೀಮುರಳಿ
Recommended Video

ಹೈದರಾಬಾದ್ ನಲ್ಲಿ 'ಪೈಲ್ವಾನ್'ನನ್ನು ಭೇಟಿ ಮಾಡಿದ ಶ್ರೀಮುರಳಿ | FILMIBEAT KANNAD
ನಟ ಕಿಚ್ಚ ಸುದೀಪ್ ಹಾಗೂ ಶ್ರೀಮುರಳಿ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ನಿನ್ನೆ ಹೈದರಾಬಾದ್ ನಲ್ಲಿ ಈ ಇಬ್ಬರು ನಟರು ಭೇಟಿ ಮಾಡಿದ್ದಾರೆ.
ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಒಂದು ಕಡೆ ಸುದೀಪ್ ನಟನೆಯ 'ಪೈಲ್ವಾನ್' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಮತ್ತೊಂದು ಕಡೆ ಅಲ್ಲಿಯೇ 'ಭರಾಟೆ' ಶೂಟಿಂಗ್ ಕೂಡ ಸಾಗುತ್ತಿತ್ತು. ತಮ್ಮ ತಮ್ಮ ಸಿನಿಮಾಗಳ ಚಿತ್ರೀಕರಣದ ಬಿಡುವಿನ ವೇಳೆ ಶ್ರೀಮುರಳಿ ಹಾಗೂ ಕಿಚ್ಚ ಕೆಲಕಾಲ ಕಳೆದಿದ್ದಾರೆ.

'ಭರಾಟೆ', 'ಪೈಲ್ವಾನ್' ಹಾಗೂ 'ಪೊಗರು' ಈ ಮೂರು ಕನ್ನಡ ಸಿನಿಮಾಗಳ ಶೂಟಿಂಗ್ ಸದ್ಯ ರಾಮೋಜಿ ಫಿಲ್ಮ್ ಸಿಟಿಯಲ್ಲಿಯೇ ನಡೆಯುತ್ತಿದೆ. ತೆಲುಗಿನ ಮಹೇಶ್ ಬಾಬು ನಟನೆ 'ಮಹರ್ಷಿ' ಚಿತ್ರದ ಶೂಟಿಂಗ್ ಸಹ ಅಲ್ಲಿಯೇ ಆಗುತ್ತಿದೆ.

ನಿನ್ನೆ ಶ್ರೀಮುರಳಿ ಮಹೇಶ್ ಬಾಬು ಅವರನ್ನು ಭೇಟಿ ಮಾಡಿದ್ದರು. ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ ಇಬ್ಬರು ನಟರು ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ಕನ್ನಡ ಚಿತ್ರರಂಗದ ಬೆಳವಣಿಗೆಯ ಬಗ್ಗೆ ಪ್ರಿನ್ಸ್ ಸಂತಸ ವ್ಯಕ್ತ ಪಡಿಸಿದರು.
More from Filmibeat
English summary
Kannada actor Sri Murali met Mahesh Baabu Sudeep in Ramoji film city Hyderabad.


Click it and Unblock the Notifications











