Don't Miss!
- News ಹಾಸನ ಪೆನ್ಡ್ರೈವ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮಹಿಳಾ ಆಯೋಗ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಜಿಎಫ್ ಬಗ್ಗೆ ಶ್ರೀಮುರಳಿ ಎದೆ ತಟ್ಟಿ ಹೇಳಿದ್ದೇನು?
Recommended Video
ಯಶ್ ಕೆಜಿಎಫ್ ಸಿನಿಮಾ ಗಡಿದಾಟಿ ಹೋಗಿದೆ. ಭಾಷೆಯ ಹಂಗಿಲ್ಲದೇ ಎಲ್ಲ ಭಾಷಿಗರು ಮೆಚ್ಚಿಕೊಳ್ಳುವಂತಾಗಿದೆ. ಕರ್ನಾಟಕದಿಂದ ಹೊರಗೆ, ಕನ್ನಡ ಸಿನಿಮಾ ಭಾರಿ ಸದ್ದು ಮಾಡುತ್ತಿರುವುದು ನಿಜಕ್ಕೂ ಸ್ಯಾಂಡಲ್ ವುಡ್ ಗೆ ಹೆಮ್ಮೆ ತಂದಿದೆ.
ಇದನ್ನ ಬರಿ, ಜನರು ಅಥವಾ ಯಶ್ ಅಭಿಮಾನಿಗಳು ಮಾತ್ರ ಹೇಳುತ್ತಿಲ್ಲ. ಇಡೀ ಸ್ಯಾಂಡಲ್ ವುಡ್ ಇಂಡಸ್ಟ್ರಿ ಹೇಳುತ್ತಿದೆ. ಇದು ಯಶ್ ಸಿನಿಮಾ ಅಲ್ಲ, ಕನ್ನಡ ಸಿನಿಮಾ ಎಂದು ಎದೆ ತಟ್ಟಿ ಕಲಾವಿದರು ಮಾತನಾಡುತ್ತಿದ್ದಾರೆ.
ಹೌದು, 37ನೇ ವರ್ಷ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿರುವ ನಟ ಶ್ರೀಮುರಳಿ, ಯಶ್ ಕೆಜಿಎಫ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ಒಂದೊಳ್ಳೆ ಸಿನಿಮಾ ಬಂದಾಗ, ಬನ್ನಿ ನಮ್ಮ ಕನ್ನಡ ಸಿನಿಮಾ ಬಂದಿದೆ, ಎಲ್ಲರೂ ಹೋಗೋಣ ಅನ್ನಬೇಕು ಅಂತ ಹೇಳಿದ್ದೆ. ಈಗ ಅದೇ ರೀತಿ, 'ಕೆಜಿಎಫ್' ಸಿನಿಮಾ ಬಂದಿದೆ. ಎದೆ ತಟ್ಟಿ ಹೇಳಬೇಕಿದೆ. ಬನ್ನಿ ನಮ್ಮ ಕೆಜಿಎಫ್ ಸಿನಿಮಾಗೆ ಹೋಗೋಣ' ಅಂತ ನಟ ಶ್ರೀಮುರಳಿ ಸಂತಸ ವ್ಯಕ್ತಪಡಿಸಿದ್ದಾರೆ.
ಯಶ್ ಬಿಟ್ರೆ ಬಿ.ಸುರೇಶ್ ಗೆ ಹೆಚ್ಚು ಸಂಭಾವನೆ: ಹಾಗಿದ್ರೆ 'ರಾಕಿ' ಸಂಭಾವನೆ ಎಷ್ಟು?
''ಕೆಜಿಎಫ್ ಎಷ್ಟು ಸದ್ದು ಮಾಡ್ತಿದೆ, ಅಷ್ಟೇ ಯಶಸ್ಸು ಕಾಣುತ್ತೆ. ಅಷ್ಟೇ ಅದ್ಧೂರಿಯಾಗಿರುತ್ತೆ ಇದನ್ನ ನಾವು ಕೂಡ ನೋಡ್ತೀವಿ'' ಎಂದು ಶ್ರೀಮುರಳಿ ಕೆಜಿಎಫ್ ಚಿತ್ರತಂಡಕ್ಕೆ ಶಬ್ಬಾಶ್ ಎಂದಿದ್ದಾರೆ.
ಮತ್ತೊಂದೆಡೆ ಸತೀಶ್ ನೀನಾಸಂ ಕೂಡ ಕೆಜಿಎಫ್ ಚಿತ್ರವನ್ನ ಮೆಚ್ಚಿಕೊಂಡಿದ್ದು, ''ಅದೇ ರೀತಿ ಬೇರೆ ಸಿನಿಮಾಗಳು ಆಗ್ಬೇಕು, ನನ್ನ ಚಿತ್ರಗಳು ಹಾಗೆ ಪ್ರಚಾರ ಮಾಡ್ತೀವಿ, ನಾನು ಕೂಡ ಬೇರೆ ಇಂಡಸ್ಟ್ರಿಯಲ್ಲಿ ಸದ್ದು ಮಾಡಿಯೇ ವಾಪಸ್ ಬರ್ತೀನಿ'' ಎಂದಿದ್ದಾರೆ.
'ಕೆಜಿಎಫ್' ನೋಡೋರಿಗೆ ಲಾಡು, ಅದೃಷ್ಟಶಾಲಿಗಳಿಗೆ ಚಿನ್ನ.!
ಡಿಸೆಂಬರ್ 21 ರಂದು ಕೆಜಿಎಫ್ ಸಿನಿಮಾ ತೆರೆಕಾಣ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ, ಭುವನ್ ಗೌಡ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.