Don't Miss!
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- News Samsung: ಮಾರುಕಟ್ಟೆ ಗ್ರ್ಯಾಂಡ್ ಎಂಟ್ರಿ ನೀಡಿದೆ ನ್ಯೂ ಫೋನ್
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸಿಲಿಕಾನ್ ಸಿಟಿ'ಯಲ್ಲಿ ಕ್ರೈಮ್ ಮಾಡುತ್ತಿದ್ದಾರೆ ಶ್ರೀನಗರ ಕಿಟ್ಟಿ
'ನಮಸ್ತೇ ಮೇಡಂ' ಚಿತ್ರದ ನಂತರ ನಟ ಶ್ರೀನಗರ ಕಿಟ್ಟಿ ಅವರು ಪೂರ್ಣ ಪ್ರಮಾಣದ ನಾಯಕನಾಗಿ ಸ್ಯಾಂಡಲ್ ವುಡ್ ನಿಂದ ಬಹುತೇಕ ನಾಪತ್ತೆಯಾಗಿದ್ದರು. ತದನಂತರ 'ಅಭಿನೇತ್ರಿ', 'ರಿಂಗ್ ರೋಡ್', 'ವ್ಯಾಟ್ಸಾಪ್ ಲವ್', 'ಹ್ಯಾಪಿ ಬರ್ತ್ ಡೇ' ಚಿತ್ರಗಳಲ್ಲಿ ಅತಿಥಿ ಪಾತ್ರ ನಿಭಾಯಿಸಿದ್ದರು.
'ಬಹುಪರಾಕ್' ಚಿತ್ರದ ಸೋಲಿನ ನಂತರ ಮತ್ತೆ ಹೊಸ ಚಿತ್ರದ ಮೂಲಕ, ಕಿಟ್ಟಿ ಅವರು ನಾಯಕನಾಗಿ ತೆರೆಯ ಮೇಲೆ ಮಿಂಚಲಿದ್ದಾರೆ. ಚಿತ್ರರಂಗದಿಂದ ಕೊಂಚ ದಿನಗಳ ಕಾಲ ದೂರವಿದ್ದ ಕಿಟ್ಟಿ ಅವರು ಹೊಸ ಚಿತ್ರಕ್ಕೆ ಸಹಿ ಮಾಡಿ, ಮತ್ತೆ ಸುದ್ದಿಯಲ್ಲಿದ್ದಾರೆ.[ಗಣೇಶ್ ಜೊತೆ 'ಬುಗುರಿ' ಆಟ ಆಡಿದ ಶ್ರೀನಗರ ಕಿಟ್ಟಿ]
ಕಳೆದ ಎರಡು ವರ್ಷಗಳಿಂದ ದೂರವಿದ್ದ ಕಿಟ್ಟಿ ಅವರು ಯಾವ ಚಿತ್ರದ ಮೂಲಕ ಇದೀಗ ಬಣ್ಣ ಹಚ್ಚಲು ತಯಾರಾಗಿದ್ದಾರೆ, ಅನ್ನೋ ಮಾಹಿತಿಯನ್ನು ನೋಡೋಣ, ಮುಂದೆ ಓದಿ....
ಸಿಲಿಕಾನ್ ಸಿಟಿಯಲ್ಲಿ ಕಿಟ್ಟಿ
ಬಹಳ ಲಾಂಗ್ ಗ್ಯಾಪ್ ತೆಗೆದುಕೊಂಡಿದ್ದ ಶ್ರೀನಗರ ಕಿಟ್ಟಿ ಅವರು ಇದೀಗ 'ಸಿಲಿಕಾನ್ ಸಿಟಿ' ಎಂಬ ಹೊಸ ಸಿನಿಮಾದ ಮೂಲಕ, ಮತ್ತೆ ಬಣ್ಣ ಹಚ್ಚಲು ತಯಾರಿ ನಡೆಸಿದ್ದಾರೆ. ನವ ನಿರ್ದೇಶಕ, ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಬಹು ತಾರಾಗಣ ಇದೆ.[ಹೇ..ರಾಮ್..! ಮತ್ತೊಮ್ಮೆ ವಿವಾದ ಭುಗಿಲೇಳುತ್ತಾ.?]
ನಿರ್ದೇಶಕ ಯಾರು?
ಮುರಳಿ ಗುರಪ್ಪ ಎಂಬುವವರು 'ಸಿಲಿಕಾನ್ ಸಿಟಿ' ಚಿತ್ರಕ್ಕೆ ಕಥೆ ಬರೆದು, ನಿರ್ದೇಶನದ ಜವಾಬ್ದಾರಿಯನ್ನು ಕೂಡ ಹೊತ್ತಿದ್ದಾರೆ.[ಪತ್ನಿಯಿಲ್ಲದೆ 'ತುಳಸಿ ಹಬ್ಬ' ಆಚರಿಸಿದ ಶ್ರೀನಗರ ಕಿಟ್ಟಿ]
ಸಿನಿಮಾದಲ್ಲಿ ಯಾರ್ಯಾರಿದ್ದಾರೆ?
ಚಿತ್ರದಲ್ಲಿ 'ಮದುವೆಯ ಮಮತೆಯ ಕರೆಯೋಲೆ' ಖ್ಯಾತಿಯ ನಟ ಸೂರಜ್ ಗೌಡ, ಕಾಮಿಡಿ ನಟ ಚಿಕ್ಕಣ್ಣ, ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಅಣ್ಣ-ತಮ್ಮಂದಿರಿಬ್ಬರ ಕ್ರೈಮ್ ನ ಜಾಡು ಹಿಡಿಯೋದೇ 'ಸಿಲಿಕಾನ್ ಸಿಟಿ' ಚಿತ್ರದ ಪ್ರಮುಖ ಕಥಾಹಂದರ.
ಮೊದಲ ಬಾರಿಗೆ ಅಣ್ಣ-ತಮ್ಮನಾದ ಸೂರಜ್-ಕಿಟ್ಟಿ
ಈ ಚಿತ್ರದಲ್ಲಿ 'ಮಮತೆಯ' ಹುಡುಗ ಸೂರಜ್ ಗೌಡ ಅವರು ಶ್ರೀನಗರ ಕಿಟ್ಟಿ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ನಟಿ ಏಕ್ತಾ ರಾಥೋಡ್ ಅವರು ಡ್ಯುಯೆಟ್ ಹಾಡಲಿದ್ದಾರೆ.
ಕಿಟ್ಟಿಗೆ ನಾಯಕಿ ಯಾರು?
'ಇಷ್ಟಕಾಮ್ಯ' ಚಿತ್ರದ ಖ್ಯಾತಿಯ ನಟಿ ಕಾವ್ಯ ಶೆಟ್ಟಿ ಅವರು, ಶ್ರೀನಗರ ಕಿಟ್ಟಿ ಅವರ ಜೊತೆ ಈ ಚಿತ್ರದಲ್ಲಿ ರೋಮ್ಯಾನ್ಸ್ ಮಾಡಲಿದ್ದಾರೆ. 'ಇಷ್ಟಕಾಮ್ಯ' ಚಿತ್ರದಲ್ಲಿ ಕಾವ್ಯ ಶೆಟ್ಟಿ ಅವರ ಪ್ರಬುದ್ಧ ನಟನೆಯಿಂದ ಅವರಿಗೆ ಅವಕಾಶಗಳ ಸುರಿಮಳೆ ಸುರಿಯುತ್ತಿದೆ.
ಮುಹೂರ್ತ ಯಾವಾಗ?
ಅಂದಹಾಗೆ 'ಸಿಲಿಕಾನ್ ಸಿಟಿ' ಚಿತ್ರದ ಮುಹೂರ್ತ ಇದೇ ಬುಧವಾರ (ಅಕ್ಟೋಬರ್ 19), ಬೆಳಗ್ಗೆ 11 ಗಂಟೆಗೆ ಕಂಠೀರವ ಸ್ಟುಡಿಯೋದಲ್ಲಿ ಜರುಗಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಭಾಗವಹಿಸಲಿದ್ದಾರೆ. ಶಿವಣ್ಣ ಅವರು ಫಸ್ಟ್ ಕ್ಲ್ಯಾಪ್ ಮಾಡಲಿದ್ದು, ರವಿಚಂದ್ರನ್ ಅವರು ಮೊದಲ ದೃಶ್ಯಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ.