Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ನಟರ ಕಿತ್ತಾಟ, ಕಚ್ಚಾಟದ ಬಗ್ಗೆ ಶ್ರೀನಗರ ಕಿಟ್ಟಿ ಏನಂದ್ರು?
ಕನ್ನಡ ಇಂಡಸ್ಟ್ರಿಯಲ್ಲಿ ಸ್ಟಾರ್ ಗಿರಿ, ನಂಬರ್ 1 ಪಟ್ಟ, ಬಾಕ್ಸ್ ಆಫೀಸ್ ಕಿಂಗ್......ಹೀಗೆ ನಟರ ಮಧ್ಯೆ ಕಾಂಪಿಟೇಶನ್ ಇದೆ ಎನ್ನುವುದು ಜಗತ್ ಜಾಹಿರ. ಆದ್ರೆ, ಈ ಪೈಪೋಟಿ ಇತ್ತೀಚೆಗೆ ಹೆಚ್ಚಾಗುತ್ತಿದೆ ಎನ್ನಿಸುತ್ತಿದೆ.
ಆ ನಟನ ಕಂಡ್ರೆ ಇವರಿಗೆ ಆಗಲ್ಲ, ಈ ನಟನ ಕಂಡ್ರೆ ಅವರಿಗೆ ಆಗಲ್ಲ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಆಗಾಗ ಕೇಳಿ ಬರುತ್ತಿರುತ್ತೆ. ಇನ್ನು ಇತ್ತೀಚೆಗೆ ನಡೆದ ವಿದ್ಯಮಾನಗಳನ್ನ ಗಮನಿಸಿದ್ರೆ, ಸ್ಟಾರ್ ನಟರು ಎನಿಸಿಕೊಂಡಿರುವವರೇ ಬಹಿರಂಗವಾಗಿ ಮುನಿಸಿಕೊಂಡು ಜಗಳವಾಡಿಕೊಂಡಿದ್ದರು. ಇನ್ನು ದೊಡ್ಡ ನಟನ ವಿರುದ್ಧ ಮತ್ತೊಬ್ಬ ನಟ ಗ್ರೂಪಿಸಂಗೆ ಕಾರಣ ಎಂಬ ಆಪಾದನೆ ವರಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಟ ಶ್ರೀನಗರ ಕಿಟ್ಟಿ ಮಾತನಾಡಿದ್ದಾರೆ. ನಟರ ಸಮರದ ಬಗ್ಗೆ ಮತ್ತು ಚಿತ್ರರಂಗದ ಪರಿಸ್ಥಿತಿ ಬಗ್ಗೆ ಕಿಟ್ಟಿ ಏನು ಹೇಳಿದ್ರು ಅಂತಾ ಮುಂದೆ ಓದಿ.....
ನಿರ್ಮಾಪಕರ ಬಗ್ಗೆ ಕಾಳಜಿ ವಹಿಸಿ
''ಹೇಳಿಕೆಗಳನ್ನ ಕೊಡುವುದನ್ನ ಬಿಟ್ಟು ಸುಮ್ಮನೆ ಸಿನಿಮಾ ಮಾಡಿದ್ರೆ ಉತ್ತಮ. ಜನರು ನೋಡುವಂತಹ ಸಿನಿಮಾ ಮಾಡಿ. ಜನರ ಮನಸ್ಸಿಗೆ ಹತ್ತಿರವಾಗಿ, ನಿರ್ಮಾಪಕರ ಜೇಬು ತುಂಬಿಸಿ ಸಾಕು'' - ಶ್ರೀನಗರ ಕಿಟ್ಟಿ, ನಟ
ಇದರಿಂದ ದೂರಿವಿದ್ರೆ ಒಳ್ಳೆಯದು
''ಅವರವರ ಬೇಳೆಯನ್ನ ಬೇಯಿಸಿಕೊಳ್ಳಲು ಈ ರೀತಿಯಾದ ಆಟಗಳನ್ನ ಆಡ್ತಾರೆ. ಅದರ ಬಗ್ಗೆ ಮಾತನಾಡುವುದು ಬೇಡ. ಇದರಿಂದ ದೂರುವಿದ್ರೆ ನಮಗೆ ಒಳ್ಳೆದು ಆಗುತ್ತೆ'' - ಶ್ರೀನಗರ ಕಿಟ್ಟಿ, ನಟ
ಪ್ರಾಬಲ್ಯಕ್ಕಿಂತ ಸಿನಿಮಾ ಮುಖ್ಯ!
''ಪ್ರಾಬಲ್ಯಕ್ಕಿಂತ, ಸಿನಿಮಾ ಯಾರು ನೋಡ್ತಿದ್ದಾರೆ, ನಿರ್ಮಾಪಕರು ಎಲ್ಲಿ ಸೇಫ್ ಆಗ್ತಿದ್ದಾರೆ ಎನ್ನುವುದು ಮಾತ್ರ ಮುಖ್ಯವಾಗುತ್ತೆ. ನಮ್ಮ ನಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಮಾತನಾಡಿದ್ರೆ, ನಿರ್ಮಾಪಕರು ನಷ್ಟ ಅನುಭವಿಸುತ್ತಾರೆ. ಇಂಡಸ್ಟ್ರಿ ಹಾಳಾಗುತ್ತೆ'' - ಶ್ರೀನಗರ ಕಿಟ್ಟಿ, ನಟ
ಸಿಲಿಕಾನ್ ಸಿಟಿ ಬಿಡುಗಡೆ
ಶ್ರೀನಗರ ಕಿಟ್ಟಿ ಅವರು 'ಸಿಲಿಕಾನ್ ಸಿಟಿ' ಚಿತ್ರದ ಬಿಡುಗಡೆಯ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ. ಮುಂದಿನ ವಾರ (ಜೂನ್ 16) ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಮುರಳಿ ಗುರಪ್ಪ ನಿರ್ದೇಶನವಿದ್ದು, ಅನೂಪ್ ಸೀಳಿನ್ ಸಂಗೀತವಿದೆ. ಶ್ರೀನಗರ ಕಿಟ್ಟಿ ಜೊತೆ ನಟಿ ಕಾವ್ಯ ಶೆಟ್ಟಿ, ನಟ ಸೂರಜ್ ಗೌಡ, ಚಿಕ್ಕಣ್ಣ ಸೇರಿದಂತೆ ಹಲವರ ತಾರಾಬಳಗ ಚಿತ್ರದಲ್ಲಿದೆ.