Don't Miss!
- News ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ & ನೆಲಮಂಗಲ ಹೊಸ ಉಪನಗರ: ಡಾ. ಕೆ. ಸುಧಾಕರ್ ಭರವಸೆ!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಲವು ದಿನಗಳ ಬಳಿಕ ಒಂದೆ ಫ್ರೇಮ್ನಲ್ಲಿ ದರ್ಶನ್, ಸುದೀಪ್: ಪೋಟೋ ವೈರಲ್!
ಕನ್ನಡ ಸಿನಿಮಾರಂಗದಲ್ಲಿ ನಟ ದರ್ಶನ್ ಮತ್ತು ಸುದೀಪ್ ಎನ್ನುವುದು ದೊಡ್ಡ ಹೆಸರುಗಳು. ಇವರ ಬಗ್ಗೆ ಏನೇ ಸುದ್ದಿ ಬಂದರೂ ಕೂಡ ಕುತೂಹಲ ಇದ್ದೇ ಇರುತ್ತೆ. ನಟ ದರ್ಶನ್, ಸುದೀಪ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರ ಸ್ನೇಹದ ಬಗ್ಗೆಯೂ ಎಲ್ಲರಿಗೂ ಗೊತ್ತಿದೆ. ಇವರನ್ನು ಒಂದೇ ಫ್ರೇಮ್ ನಲ್ಲಿ ನೋಡಲು ಇಬ್ಬರ ಅಭಿಮಾನಿಗಳು ಕೂಡ ಬಯಸುತ್ತಾರೆ.
ಆಗಾಗ ಈ ವಿಚಾರದಲ್ಲಿ ಅಭಿಮಾನಿಗಳು ಅಭಿಯಾನ ನಡೆಸುತ್ತಾ ಇರುತ್ತಾರೆ. ಈಗ ದರ್ಶನ್ ಮತ್ತು ಸುದೀಪ್ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಚ್ಚರಿ ಅನಿಸಿದರು ನಿಜ. 'ಕ್ರಾಂತಿ' ಮತ್ತು 'ವಿಕ್ರಾಂತ್ ರೋಣ' ಸಿನಿಮಾ ಪೋಸ್ಟರ್ ಹಿಡಿದು ಇಬ್ಬರು ನಿಂತಿದ್ದಾರೆ.
ದರ್ಶನ್, ಸುದೀಪ್, ಉಪೇಂದ್ರ 'ರೈ' ಸಿನಿಮಾ ಮಾಡಲು ಒಪ್ಪಲಿಲ್ಲ-ರವಿ ಶ್ರೀವತ್
ಸದ್ಯ ಇವರಿಬ್ಬರ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಅಭಿಮಾನಿ ಒಬ್ಬರ ಕೈ ಚಳಕ. ಈ ಫೊಟೋ ಮಾಡಿರುವಾತನಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಒಂದೆ ಫ್ರೇಮ್ ನಲ್ಲಿ ಸುದೀಪ್-ದರ್ಶನ್!
ನಟ ದರ್ಶನ್ ಮತ್ತು ಸುದೀಪ್ ಒಂದೇ ಫ್ರೇಮ್ ನಲ್ಲಿ ಇರುವ ಫೋಟೋ ಇದು. ಹಾಗಂತ ಇವರಿಬ್ಬರೂ ಒಟ್ಟಿಗೆ ಕ್ಲಿಕ್ಕಿಸಿದ ಫೋಟೋ ಅಲ್ಲ. ಇದು ಅಭಿಮಾನಿ ಒಬ್ಬರು ಎಡಿಟ್ ಮಾಡಿ ಹಂಚಿಕೊಂಡಿರುವ ಫೋಟೊ. ಈ ಫೋಟೋದಲ್ಲಿ ನಟ ದರ್ಶನ್ ಮತ್ತು ಸುದೀಪ್ ಒಂದೇ ರೀತಿಯ ಕಾಸ್ಟ್ಯೂಂ ತೊಟ್ಟಿದ್ದಾರೆ. ಅದರಲ್ಲೂ ಅವರ ಕೈಯಲ್ಲಿ ಇರುವ ಫೋಟೋ ವಿಶೇಷವಾಗಿದೆ. 'ವಿಕ್ರಾಂತ್ ರೋಣ' ಮತ್ತು 'ಕ್ರಾಂತಿ' ಚಿತ್ರದ ಲುಕ್ ಇದರಲ್ಲಿ ಇದೆ.
ಪ್ಯಾನ್ ಇಂಡಿಯಾ ರೇಸ್ನಲ್ಲಿ ಕನ್ನಡ ಸ್ಟಾರ್ ನಟರು: ಓಡೋರು ಯಾರು? ಬೀಳೋರು ಯಾರು?
ಫೋಟೊ ಮೆಚ್ಚಿದ ದರ್ಶನ್, ಸುದೀಪ್ ಫ್ಯಾನ್ಸ್!
ಇನ್ನೂ ಈ ಪೋಸ್ಟರ್ ರಿಲೀಸ್ ಆಗುತ್ತಿದ್ದ ಹಾಗೆ ವೈರಲ್ ಆಗಿದೆ. ಸುದೀಪ್, ದರ್ಶನ್ ಅಭಿಮಾನಿಗಳು ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಹೀಗೆ ಇವರನ್ನು ಜೊತೆಯಾಗಿ ನೋಡಲು ಇಚ್ಛಿಸುತ್ತೇವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಈ ಫೊಟೋ ಎಡಿಟ್ ಮಾಡಿದ ಕಲಾವಿದನಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
'ಕ್ರಾಂತಿ' ಚಿತ್ರದಲ್ಲಿ ದರ್ಶನ್ ಬ್ಯುಸಿ!
ನಟ ದರ್ಶನ್ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಸದ್ಯ 'ಕ್ರಾಂತಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಕ್ರಾಂತಿ' ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶೂಟಿಂಗ್ ಮುಗಿಯಲಿದ್ದು, ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಜೊತೆಗೆ ರಿಲೀಸ್ ಯಾವಾಗ ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮಾಡಿದೆ.
'ವಿಕ್ರಾಂತ್ ರೋಣ'ನಾಗಿ ಸುದೀಪ್ ಅಬ್ಬರ!
ಇನ್ನು ನಟ ಸುದೀಪ್ 'ವಿಕ್ರಾಂತ್ ರೋಣ'ನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. 'ವಿಕ್ರಾಂತ್ ರೋಣ' ಜುಲೈ 28ಕ್ಕೆ ರಿಲೀಸ್ ಆಗಲಿದೆ. ಸದ್ಯ ಚಿತ್ರದ ರಕ್ಕಮ್ಮ ಹಾಡು ಹಿಟ್ ಲಿಸ್ಟ್ ಸೇರಿದೆ. ಎಲ್ಲಾ ಭಾಷೆಗಳಲ್ಲೂ ರಕ್ಕಮ್ಮ ಹಾಡು ರಿಲೀಸ್ ಆಗಿದ್ದು, ಎಲ್ಲರೂ ರಕ್ಕಮ್ಮನ ತಾಳಕ್ಕೆ ಕುಣಿಯುತ್ತಿದ್ದಾರೆ. ಸಾಕಷ್ಟು ಸಿನಿಮಾ ತಾರೆಯರು ಕೂಡ ಈ ಹಾಡಿಗೆ ಡಾನ್ಸ್ ಮಾಡಿದ್ದು ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ.