ಗೌರಿ ಗಣೇಶ ಹಬ್ಬಕ್ಕೆ ಈ ರೀತಿ ವಿಶ್ ಮಾಡಿದ್ರು ದರ್ಶನ್, ಸುದೀಪ್
ನಟ ಸುದೀಪ್ ಹಾಗೂ ದರ್ಶನ್ ತಮ್ಮ ಅಭಿಮಾನಿಗಳಿಗೆ ಗಣೇಶ ಹಬ್ಬಕ್ಕೆ ವಿಶ್ ಮಾಡಿದ್ದಾರೆ. ಇಬ್ಬರು ನಟರು ತಮ್ಮ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಶುಭಾಶಯ ತಿಳಿಸಿದ್ದಾರೆ.
ನಟ ದರ್ಶನ್ ಗಣಪನಿಗೆ ಕೈ ಮುಗಿಯುತ್ತಿರುವ ಒಂದು ಫೋಟೋ ಹಾಕಿ ''ಸಮಸ್ತ ಕರುನಾಡ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ಧಿಕ ಶುಭಾಷಯಗಳು ನಿಮ್ಮೆಲ್ಲಾ ಸಂಕಷ್ಟಗಳು ದೂರವಾಗಿ ಜೀವನದ ಎಲ್ಲಾ ಸುಖ ಸಂತೋಷ ನಿಮ್ಮದಾಗಲಿ'' ಎಂದು ಟ್ವೀಟ್ ಮಾಡಿದ್ದಾರೆ.

ನಟ ಸುದೀಪ್ ಸುಂದರವಾದ ಗಣೇಶನ ಫೋಟೋ ಹಾಕಿ ''ಸಮಸ್ತ ಕನ್ನಡ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು. Stay blessed, Stay happy, Spread happiness. Mch luv to all'' ಎಂದು ತಮ್ಮ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.
ಉಳಿದಂತೆ, ಗಣೇಶ ಹಬ್ಬಕ್ಕೆ ಕನ್ನಡದ ಹೊಸ ಹೊಸ ಸಿನಿಮಾಗಳ ಪೋಸ್ಟರ್ ಗಳು ಅಭಿಮಾನಿಗಳಿಗಾಗಿ ಬಂದಿದೆ. 'ದಿ ವಿಲನ್' 'ಭರಾಟೆ', 'ಕವಚ' 'ಸೀತಾರಾಮ ಕಲ್ಯಾಣ', 'ನಾತಿಚರಾಮಿ' 'ಟಕ್ಕರ್' ಹಾಗೂ 'ಪಡ್ಡೆಹುಲಿ' ಸಿನಿಮಾದ ಪೋಸ್ಟರ್ ಗಳು ಹಬ್ಬದ ದಿನ ಹೊರ ಬಂದಿವೆ.
More from Filmibeat
English summary
Kannada actor Sudeep and Darshan's wishes for Dowri Danesha festival.


Click it and Unblock the Notifications











