Don't Miss!
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಸುದೀಪ್ ಗೆ ನೊಟೀಸ್ ನೀಡಿದ ಮದ್ರಾಸ್ ಹೈಕೋರ್ಟ್
ನಟ ಸುದೀಪ್ ಗೆ ಕಂಟಕ ಎದುರಾಗಿದೆ. ಮದ್ರಾಸ್ ಹೈಕೋರ್ಟ್ನಿಂದ ನಟ ಸುದೀಪ್ಗೆ ನೊಟೀಸ್ ಒಂದು ಬಂದಿದೆ. ನೊಟೀಸ್ಗೆ ಸುದೀಪ್ ಉತ್ತರ ನೀಡಬೇಕಿದೆ.
ಸುದೀಪ್ ಅವರು ರಮ್ಮಿ ಸರ್ಕಲ್ ಆನ್ಲೈನ್ ಜೂಜನ್ನು ಪ್ರಚಾರ ಮಾಡುತ್ತಿರುವ ಕಾರಣ ಮದ್ರಾಸ್ ಹೈಕೋರ್ಟ್ ಈ ನೊಟೀಸ್ ಅನ್ನು ನೀಡಿದೆ. ಸುದೀಪ್ ಮಾತ್ರವಲ್ಲದೆ, ರಮ್ಮಿ ಸರ್ಕಲ್ ಜಾಹೀರಾತಿನಲ್ಲಿ ನಟಿಸಿರುವ ರಾಣಾ ದಗ್ಗುಬಾಟಿ, ನಟಿ ತಮನ್ನಾ, ಪ್ರಕಾಶ್ ರೈ ಇನ್ನೂ ಕೆಲವರಿಗೆ ನೊಟೀಸ್ ಜಾರಿ ಮಾಡಲಾಗಿದೆ.
ಅಭಿನಯ ಚಕ್ರವರ್ತಿಯ 'ರಾಕ್ ಸ್ಟಾರ್' ಲುಕ್ ಕಂಡು ಥ್ರಿಲ್ ಆದ ಅಭಿಮಾನಿಗಳು
ನಟ ಸುದೀಪ್ ಅವರು, ರಮ್ಮಿ ಸರ್ಕಲ್ ಎಂಬ ಆನ್ಲೈನ್ ಜೂಜು ಆಪ್ ನ ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ. ಈ ಜಾಹೀರಾತು ಜನರು ಆನ್ಲೈನ್ ನಲ್ಲಿ ಹಣ ತೊಡಗಿಸಿ ರಮ್ಮಿ ಆಟವಾಡಲು ಪ್ರಚೋದನೆ ನೀಡುತ್ತದೆ.
ಸೂರ್ಯಪ್ರಕಾಶ್ ಎಂಬುವರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ
ಜನರು ಹಣ ಕಳೆದುಕೊಳ್ಳಲು, ಆತ್ಮಹತ್ಯೆಗೆ ಕಾರಣವಾಗಬಹುದಾದಂತಹಾ ಇಂಥಹಾ ಜೂಜಿಗೆ ಪ್ರಚಾರ ಮಾಡುತ್ತಿರುವುದು ಸರಿಯಲ್ಲವೆಂದು ಸೂರ್ಯಪ್ರಕಾಶ್ ಎಂಬ ವಕೀಲರು ಮದ್ರಾಸ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಇದೇ ಕಾರಣಕ್ಕೆ ನ್ಯಾಯಾಲವು ನೊಟೀಸ್ ಜಾರಿ ಮಾಡಿದೆ.
ಕ್ರಿಕೆಟಿಗರಿಗೂ ನೊಟೀಸ್ ಜಾರಿ
ಸಿನಿಮಾ ನಟರು ಮಾತ್ರವಲ್ಲದೆ, ಜೂಜಿನ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ ಹಾಗೂ ಇತರರಿಗೂ ನೊಟೀಸ್ ಜಾರಿ ಆಗಿದೆ. ಐಪಿಎಲ್ ಪ್ರಾರಂಭವಾದಮೇಲೆ ಕ್ರಿಕೆಟ್ ಜೂಜಿನ ಜಾಹೀರಾತುಗಳ ಸಹ ಹೆಚ್ಚಾಗಿವೆ.
ಸುದೀಪ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ
ಕೆಲವು ತಿಂಗಳುಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಹ ಸುದೀಪ್ ಅವರ ವಿರುದ್ಧ ಇದೇ ಕಾರಣಕ್ಕೆ ವಿರೋಧ ವ್ಯಕ್ತವಾಗಿತ್ತು. ಅಹೋರಾತ್ರಾ ಎಂಬುವರು ಹಾಗೂ ಇನ್ನೂ ಕೆಲವರು ಸುದೀಪ್ ಅವರು ಆನ್ಲೈನ್ ಜೂಜಿನ ಪ್ರಚಾರ ಮಾಡುತ್ತಿರುವುದನ್ನು ತೀವ್ರವಾಗಿ ವಿರೋಧಿಸಿದ್ದರು.
Recommended Video
ಅಹೋರಾತ್ರಗೆ ಬೆದರಿಕೆ ಕರೆಗಳು
ಸುದೀಪ್ ಅವರು ಆನ್ಲೈನ್ ಜೂಜನ್ನು ಪ್ರಚಾರ ಮಾಡುತ್ತಿರುವುದನ್ನು ವಿರೋಧಿಸಿದ್ದಕ್ಕಾಗಿ ಆಧ್ಯಾತ್ಮಿಕ ಚಿಂತಕ ಅಹೋರಾತ್ರಾಗೆ ಸುದೀಪ್ ಅಭಿಮಾನಿಗಳು ಸಾಕಷ್ಟು ಬೆದರಿಕೆ ಕರೆಗಳನ್ನು ಮಾಡಿದ್ದರು. ನಿರ್ಮಾಪಕ ಜಾಕ್ ಮಂಜು ಸಹ ಅಹೋರಾತ್ರ ಅವರೊಟ್ಟಿಗೆ ಇದೇ ವಿಷಯವಾಗಿ ಕರೆ ಮಾಡಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.