Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ನಟ ಸುದೀಪ್
ಕಿಚ್ಚ ಸುದೀಪ್ ನಟನೆ ಮಾಡ್ತಾರೆ, ಕ್ರಿಕೆಟ್ ಆಡ್ತಾರೆ, ಕಷ್ಟ ಎಂದು ಬಂದವರಿಗೆ ಸಹಾಯ ಮಾಡ್ತಾರೆ, ಹೊಸ ಚಿತ್ರಗಳಿಗೆ, ಹೊಸ ಕಲಾವಿದರಿಗೆ ಪ್ರೋತ್ಸಾಹನೂ ಕೊಡ್ತಾರೆ. ಜೊತೆಗೆ ನಿರಂತರವಾಗಿ ತಮ್ಮ ಅಭಿಮಾನಿಗಳ ಜೊತೆ ಟ್ವಿಟ್ಟರ್ ನಲ್ಲಿ ಮಾತುಕತೆ ನಡೆಸ್ತಾರೆ.
ಹೀಗೆ, ಸದಾ ಸಿನಿಮಾ, ಸಿನಿಮಾ ಎಂದು ಬಿಜಿ ಇರುವ ಸುದೀಪ್ ಅವರು, ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೊಂದು ಪತ್ರ ಬರೆದಿದ್ದಾರೆ. ''ಒಬ್ಬ ನಟನಾಗಿ ನಾನು ಈ ಪತ್ರ ಬರೆಯುತ್ತಿಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ಈ ಪತ್ರ ಬರೆಯುತ್ತಿದ್ದೇನೆ'' ಎಂದು ಹೇಳುವ ಮೂಲಕ ಸುದೀಪ್ ಗಮನ ಸೆಳೆದಿದ್ದಾರೆ.
ಹಾಗಿದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುದೀಪ್ ಬರೆದಿರುವ ಪತ್ರದಲ್ಲಿ ಏನಿದೆ? ಯಾವ ಅಂಶಗಳ ಬಗ್ಗೆ ಸುದೀಪ್ ಚರ್ಚೆ ಮಾಡಿದ್ದಾರೆ ಎಂದು ಮುಂದೆ ಓದಿ......
ಕೆರೆಗಳನ್ನ ಸಂರಕ್ಷಿಸಿ...
''ನಮ್ಮ ಕೆರೆಗಳು ನಮ್ಮ ಜೀವನಾಡಿ. ಅವುಗಳಿಗೆ ಜೀವ ತುಂಬುವುದೆಂದರೆ ಪ್ರಕೃತಿಗೇ ಜೀವ ತುಂಬಿದಂತೆ. ಇಲ್ಲಿರುವ ಪ್ರತಿ ಗಿಡ, ಮರ, ಹಕ್ಕಿಗಳು, ಪ್ರಾಣಿಗಳು, ಮನುಷ್ಯರು... ಪ್ರತಿಯೊಂದೂ ಪ್ರಕೃತಿಯ ಭಾಗವೆ. ಕೆರೆಗಳನ್ನು ಕೊಲ್ಲುವುದೆಂದರೆ ನಮ್ಮ ತಾಯಿ ಪ್ರಕೃತಿಯನ್ನು ಹತ್ಯೆಗೈದಂತೆ'' - ಸುದೀಪ್, ನಟ
ಕೆರೆಗಳ ಡಿನೋಟಿಫೀಕೇಶನ್ ವಿರುದ್ಧ ರಾಜ್ಯಪಾಲರಿಗೆ ಎಚ್.ಡಿ.ಕೆ ಪತ್ರ
ಡಿನೋಟಿಫಿಕೇಷನ್ ತಡೆಯಬೇಕು
''ನಿಮಗೆ ಅತ್ಯಂತ ವಿನಮ್ರತೆಯಿಂದ ವಿನಂತಿಸಿಕೊಳ್ಳುತ್ತೇನೆ. ದಯವಿಟ್ಟು ಒಣಗಿ ಹೋಗಿರುವ ಕೆರೆಗಳ ಡಿನೋಟಿಫಿಕೇಷನ್ ಮಾಡುವುದನ್ನು ಮರುಪರಿಶೀಲಿಸಬೇಕು. ಪ್ರಕೃತಿ ಮಾತೆ ಕೆರಳುವುದಕ್ಕೆ ನಾವು ಕಾರಣರಾಗುವುದನ್ನು ತಡೆಯಬೇಕಿದೆ. ನಾವೀಗ ಸಾಕಷ್ಟು ಕಳೆದುಕೊಂಡಿದ್ದೇವೆ. ಆದರೆ, ಉಳಿದಿರುವುದನ್ನಾದರೂ ನಾವು ಉಳಿಸಿಕೊಳ್ಳಬಹುದಲ್ಲವೆ?'' - ಸುದೀಪ್, ನಟ
ಕೆರೆಗಳ ಡಿನೋಟಿಫಿಕೇಶನ್ ಕೈಬಿಡುವಂತೆ ಸಿಎಂಗೆ ಸದಾನಂದ ಗೌಡ ಪತ್ರ
ನಾನೊಬ್ಬ ಸಾಮಾನ್ಯನಾಗಿ ಪತ್ರ ಬರೆಯುತ್ತಿದ್ದೇನೆ
''ನಾನು ಒಬ್ಬ ನಟನಾಗಿ ಈ ಪತ್ರವನ್ನು ನಿಮಗೆ ಬರೆಯುತ್ತಿಲ್ಲ. ಈ ಪತ್ರವನ್ನು ಎಲ್ಲ ಶ್ರೀಸಾಮಾನ್ಯರ ಪರವಾಗಿ ಬರೆದಿದ್ದೇನೆ. ಈ ರಾಜ್ಯದೆಡೆಗೆ, ನಗರದೆಡೆಗೆ, ಇಲ್ಲಿ ವಾಸಿಸುವ ಜನರು ಮತ್ತು ಪ್ರಕೃತಿಯ ಮೇಲಿರುವ ಪ್ರೀತಿಯಿಂದ ಈ ಪತ್ರವನ್ನು ಕಳಕಳಿಯಿಂದ ಬರೆದಿದ್ದೇನೆ'' - ಸುದೀಪ್, ನಟ
ಸುದೀಪ್ ಪತ್ರಕ್ಕೆ ಜನ ಬೆಂಬಲ
ಮುಖ್ಯಮಂತ್ರಿ ಅವರಿಗೆ ನಟ ಸುದೀಪ್ ಪತ್ರ ಬರೆದಿರುವ ಬಗ್ಗೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸುದೀಪ್ ಅವರ ಅಭಿಮತಕ್ಕೆ ಜನ ಬೆಂಬಲ ಸಿಕ್ಕಿದೆ.