Don't Miss!
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- News ಲೋಕಸಭಾ ಚುನಾವಣೆ 2ನೇ ಹಂತದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ; ಮನೆ ಮನೆ ಪ್ರಚಾರಕ್ಕೆ ಅವಕಾಶ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಸುನಿಲ್ ಶೆಟ್ಟಿ ಕನ್ನಡಕ್ಕೆ ಬರೋದು ಕನ್ಫರ್ಮ್
ನಮ್ಮ ಕರಾವಳಿಯ ಕಂಚಿನ ಕಂಠ ಸುನಿಲ್ ಶೆಟ್ಟಿ ಬಾಲಿವುಡ್ ಸಿನಿಪ್ರೇಮಿಗಳ ಮನಗೆದ್ದಿರೋ ನಟ. ಸುನಿಲ್ ಶೆಟ್ಟಿಯನ್ನ ಕನ್ನಡಕ್ಕೆ ತರೋಕೆ ಅದೆಷ್ಟೋ ಚಿತ್ರತಂಡಗಳು ಪ್ರಯತ್ನಿಸ್ತಾನೇ ಇದ್ದವು. ಆದರೆ ಈಗ ಸುನಿಲ್ ಶೆಟ್ಟಿ ಕನ್ನಡಕ್ಕೆ ಬರೋದು ಪಕ್ಕಾ. ಅದೂ ಹಾರರ್ ಸಿನಿಮಾ ಮೂಲಕ.
ಇತ್ತೀಚೆಗೆ ಮುಹೂರ್ತ ಮುಗಿಸಿದ ಹಾರರ್ ಸಿನಿಮಾ 'ಅಲೋನ್'ನಲ್ಲಿ ಸುನಿಲ್ ಶೆಟ್ಟಿ ಕನ್ನಡಕ್ಕೆ ಎಂಟ್ರಿಕೊಡ್ತಿದ್ದಾರೆ. ಪಾತ್ರ ಏನು ಅನ್ನೋದು ಗೊತ್ತಾಗದಿದ್ರೂ ಈ ಬಾಲಿವುಡ್ ನಟನನ್ನ ಕನ್ನಡದಲ್ಲಿ ನೋಡೋದೆ ಥ್ರಿಲ್ಲಿಂಗ್ ಅನುಭವ. [ತುಂಡುಡುಗೆಯಲ್ಲಿ ಹುಟ್ಟುಮಚ್ಚೆ ಪ್ರದರ್ಶಿಸಿದ ನಿಕೇಶಾ]
ಹಾರರ್ ಸಿನಿಮಾದಲ್ಲೊಂದು ಪವರ್ ಫುಲ್ ಪಾತ್ರ ಮಾಡೋ ಸಾಧ್ಯತೆಯಿದ್ದು ಸುನೀಲ್ ಶೆಟ್ಟಿ ಡೇಟ್ಸ್ ಕೂಡ ಪಕ್ಕಾ ಆಗಿದೆ. ಒಟ್ಟಾರೆ ಬಾಲಿವುಡ್ ನ ಮತ್ತೊಬ್ಬ ನಟ ಕನ್ನಡಕ್ಕೆ ಬರ್ತಿರೋದು ಸಂತಸದ ಸಂಗತಿ.
ಸದ್ಯಕ್ಕೆ ಮಂಗಳೂರಿನ ಮನೆಯೊಂದರಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈ ಚಿತ್ರವನ್ನು ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ಬಿಡುಗಡೆ ಮಾಡಲಾಗುತ್ತದೆ. ಸಮುದ್ರ ತೀರದ ಒಂಟಿ ಮನೆಯಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಚಿತ್ರಕ್ಕಿದೆ. ನಿಕೇಶಾ ಪಟೇಲ್ ಮತ್ತು ಕಾಮ್ನಾ ಜೇಠ್ಮಲಾನಿ ಚಿತ್ರದ ನಾಯಕಿಯರು.
ಸುಜಿತ್ ಶೆಟ್ಟಿ ಸಂಗೀತ ಚಿತ್ರಕ್ಕಿದ್ದು, ಜೈ ಆನಂದ್ ಅವರ ಛಾಯಾಗ್ರಹಣ 'ಅಲೋನ್' ಚಿತ್ರಕ್ಕಿದೆ. ಅನಂತ್ ಮತ್ತು ರಾಮಲಿಂಗಯ್ಯ ಅವರು ಈ ಚಿತ್ರವನ್ನು ಬಹಳ ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ ಎನ್ನುತ್ತಾರೆ ನಿರ್ದೇಶಕ ಜೆಕೆಎಸ್.