Don't Miss!
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- News BMRCL: ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಬಳಿ ಪಾದಚಾರಿ ಸೇತುವೆ ನಿರ್ಮಾಣ-ಪ್ರಯೋಜನೆಗಳೇನು ಹಾಗೂ ವೆಚ್ಚ ಎಷ್ಟು?
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜಯನಗರ 4th ಬ್ಲಾಕ್' ವೆಂಕಿ ಅಜ್ಜ ನಿಧನ, ಧನಂಜಯ್ ಕಂಬನಿ
ನಿರ್ದೇಶಕ ಸತ್ಯ ಅವರ ಪ್ರೀತಿಯ ಅಜ್ಜ, ಗುರು ಸುಬ್ಬರಾವ್ ಅವರು ಇಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ನಟ ಧನಂಜಯ್ ಸಹ ಕಂಬನಿ ಮಿಡಿದಿದ್ದಾರೆ.
ರಂಗಕರ್ಮಿಯೂ ಆಗಿದ್ದ ಸುಬ್ಬರಾವ್ ಅವರು ನಟ ಧನಂಜಯ್ ಜೊತೆಗೆ ಕಿರುಚಿತ್ರ 'ಜಯನಗರ 4th ಬ್ಲಾಕ್' ಕಿರು ಚಿತ್ರದಲ್ಲಿ ನಟಿಸಿದ್ದರು. ಕಿರುಚಿತ್ರದಲ್ಲಿ ವೆಂಕಿ ಎಂಬ ಪಾತ್ರದಲ್ಲಿ ನಟಿಸಿದ್ದರು ಸುಬ್ಬರಾವ್.
ಸುಬ್ಬರಾವ್ ಕುರಿತು ಭಾವುಕ ಪೋಸ್ಟ್ ಹಾಕಿರುವ ನಿರ್ದೇಶಕ ಸತ್ಯ, 'ನನ್ನ ಅಜ್ಜ, ನನ್ನ ಕ್ರಿಯಾಶೀಲತೆಯ ಗುರು, ಅನೇಕ ಪೌರಾಣಿಕ ಪಾತ್ರಗಳನ್ನು ನನಗೆ ಪರಿಚಯಿಸಿದ ಮೇಷ್ಟರು, ರಾಷ್ಟ್ರಪ್ರಶಸ್ತಿ ವಿಜೇತ ಸುಬ್ಬಾರಾವ್ 96 ವಸಂತಗಳ ತುಂಬು ಜೀವನ ಪೂರೈಸಿ ನಿರ್ಗಮಿಸಿದ್ದಾರೆ, ಅವರಿತ್ತ ಸ್ಪೂರ್ತಿಗೆ ಕೊನೆ ಎಂಬುದಿಲ್ಲ' ಎಂದಿದ್ದಾರೆ ಸತ್ಯ.
ನಟ ಧನಂಜಯ್ ಸಹ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದು, 'ಜಯನಗರ 4th ಬ್ಲಾಕ್ ನಲ್ಲಿ ಜೊತೆಯಾದ ಜೀವ, ಸ್ಫೂರ್ತಿಯಾದ ಜೀವ, ನನ್ನ ಪಾಲಿನ ವೆಂಕಿ, ಸುಬ್ಬರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ' ಎಂದಿದ್ದಾರೆ.
Recommended Video
ಜಯನಗರ 4th ಬ್ಲಾಕ್ ಸಿನಿಮಾದಲ್ಲಿ ಧನಂಜಯ್ ಅವರ ಹಿರಿಯ ಸ್ನೇಹಿತನಾಗಿ ಅದ್ಭುತವಾಗಿ ನಟಿಸಿದ್ದರು ಸುಬ್ಬಾರಾವ್. ಅವರ ವೆಂಕಿ ಪಾತ್ರ ಬಹಳ ಚೆನ್ನಾಗಿತ್ತು.