ರಂಗಕರ್ಮಿ ಹಾಗೂ ನಟ ಏಣಗಿ ನಟರಾಜ್ ಕಾಲವಶ

By Rajendra

Enagi Nataraj no more
ಪ್ರತಿಭಾನ್ವಿತ ನಟ ಹಾಗೂ ರಂಗಕರ್ಮಿ ಏಣಗಿ ನಟರಾಜ್ ಶನಿವಾರ (ಜೂ.9) ಹುಬ್ಬಳ್ಳಿಯಲ್ಲಿ ನಿಧನರಾಗಿದ್ದಾರೆ. ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಖ್ಯಾತ ನಟ, ರಂಗಕರ್ಮಿ ಹಾಗೂ ಬರಹಗಾರ ಏಣಗಿ ಬಾಳಪ್ಪ ಅವರ ಪುತ್ರರಾಗಿದ್ದರು.

ಏಣಗಿ ನಟರಾಜ್ ಅವರು ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಅಭಿನಯದ ಬಹುತೇಕ ಚಿತ್ರಗಳು ಟಿ.ಎಸ್.ನಾಗಾಭರಣ ಅವರ ನಿರ್ದೇಶನದಲ್ಲಿ ಮೂಡಿಬಂದಿವೆ. ಇದಿಷ್ಟೇ ಅಲ್ಲದೆ ಕಿರುತೆರೆಯಲ್ಲೂ ಏಣಗಿ ನಟರಾಜ್ ತಮ್ಮದೇ ಆದಂತಹ ಛಾಪನ್ನು ಮೂಡಿಸಿದ್ದರು.

ಒಂದು ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಶ್ರೇಯಸ್ಸು ನಟರಾಜ್ ಅವರಿಗೆ ಸಲ್ಲುತ್ತದೆ. ನೀನಾಸಂ ರಂಗಶಾಲೆಯಲ್ಲಿ ತರಬೇತಿ ಪಡೆದಿದ್ದ ನಟರಾಜ್‌ ಅವರಿಗೆ ಅಭಿನಯ ಕಲೆ ರಕ್ತಗತವಾಗಿತ್ತು. ತನ್ನದೇ ಆದ ವಿಶಿಷ್ಟ ಶೈಲಿಯಿಂದ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.

ನೀನಾಸಂ ತಿರುಗಾಟದ ನಾಟಕಗಳ ಮೂಲಕ ತಾನೊಬ್ಬ ಸಶಕ್ತ ನಟ ಎಂಬುದನ್ನು ನಿರೂಪಿಸಿದ್ದರು. ತದ್ರೂಪಿ (ಪ್ರಸನ್ನ ನಿರ್ದೇಶನ), ಬಿರುದಂತೆಂಬರ ಗಂಡ (ಜಂಬೆ ನಿರ್ದೇಶನ), ಕಂಬಾರರ ಸಾಂಬಶಿವ ಪ್ರಹಸನ ಹಾಗೂ ಸಂಕೇತ್ ತಂಡದ ನಾ ತುಕಾರಾಂ ಅಲ್ಲ ನಾಟಕಗಳು ನಟರಾಜ್ ಅವರ ಅಭಿನಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುತ್ತವೆ.

ಮತ್ತೆ ಮುಂಗಾರು, ಅವ್ವ, ಅಭಿ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ಏಣಗಿ ನಟರಾಜ್ ಅಭಿನಯಿಸಿದ್ದಾರೆ. ಕಲೆಯಲ್ಲೇ ಉಸಿರಾಡಿದ ನಟರಾಜ್ ನಿಧನಕ್ಕೆ ಕನ್ನಡ ರಂಗಭೂಮಿ ಹಾಗೂ ಚಲನಚಿತ್ರರಂಗ ಕಂಬನಿ ಮಿಡಿದಿದೆ. (ಏಜೆನ್ಸೀಸ್)

More from Filmibeat

English summary
Renowned theatre personality and Kannada films actor Enagi Nataraj passes away on Saturday (June 9) morning at a Private Hospital in Hubli. He is the son of well known actor and writer Enagi Balappa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X