Don't Miss!
- News Rain Alert: ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಗ್ಯಾರಂಟಿ!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ 'ತೂಗುದೀಪ ಶ್ರೀನಿವಾಸ್'
ನಟ ತೂಗುದೀಪ ಶ್ರೀನಿವಾಸ್, ಅಭಿಮಾನಿಗಳನ್ನ ಅಗಲಿ ಸಾಕಷ್ಟು ವರ್ಷಗಳೇ ಕಳೆದರೂ ಕೂಡ ಇಂದಿಗೂ ಅದೆಷ್ಟೋ ಜನರ ಮನಸ್ಸಿನಲ್ಲಿ ಹಚ್ಚೆಯಾಗಿ ಅಚ್ಚಳಿಯದೇ ಉಳಿದು ಬಿಟ್ಟಿದ್ದಾರೆ. ತೂಗುದೀಪ ಶ್ರೀನಿವಾಸ್ ಅವರ ಸ್ಥಾನದಲ್ಲಿ ಅಭಿಮಾನಿಗಳು ಅವರ ಮಗನಾದ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ರನ್ನ ನೋಡುತ್ತಿದ್ದಾರೆ. ನಮ್ಮಿಂದ ಮರೆಯಾಗಿರುವ ನಟನ ಚಿತ್ತಾರವನ್ನ ಮೈಮೇಲೆ ಹಚ್ಚೆ ಹಾಕಿಸಿಕೊಳ್ಳೊ ಮೂಲಕ ಇಂದಿಗೂ ತೂಗುದೀಪ ಶ್ರೀನಿವಾಸರನ್ನ ನೆನಪಿನಲ್ಲಿರಿಸಿದ್ದಾರೆ.
ಇತ್ತೀಚಿಗಷ್ಟೆ ಅಭಿಮಾನಿಯೊಬ್ಬರು ನಟ ದಿವಂಗತ ತೂಗುದೀಪ ಶ್ರೀನಿವಾಸ್ ರ ಟ್ಯಾಟೂ ವನ್ನ ಹಾಕಿಸಿಕೊಂಡಿದ್ದಾರೆ. ಆ ಪೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಷ್ಟೇ ಅಲ್ಲದೇ ಟ್ಯಾಟೂ ಮತ್ತು ಹಾಕಿಸಿಕೊಂಡಿರೋ ಅಭಿಮಾನಿಯ ಭಾವಚಿತ್ರ ವಾಟ್ಸ್ ಆಪ್ ಗಳ ಪ್ರೊಫೈಲ್ ಪೋಟೋಗಳಾಗಿ ಬದಲಾಗಿದೆ.
ಸಾಮಾನ್ಯವಾಗಿ ಈಗ ಬಂದಿರೋ ಹಾಗೂ ಸ್ಯಾಂಡಲ್ ವುಡ್ ನಲ್ಲಿ ನಂಬರ್ ಒನ್ ಪಟ್ಟದಲ್ಲಿರೋ ಸ್ಟಾರ್ ಗಳ ಫೋಟೋ ಗಳನ್ನ ಟ್ಯಾಟೂ ಹಾಕಿಸಿಕೊಳ್ಳೊದು ಕಾಮನ್ ವಿಚಾರ, ಆದರೆ ಈ ಅಭಿಮಾನಿ ತೂಗುದೀಪ ಶ್ರೀನಿವಾಸರ ಅಪ್ಪಟ ಅಭಿಮಾನಿ, ಆದ್ದರಿಂದ ಓಲ್ಡ್ ಇಸ್ ಗೋಲ್ಡ್ ಅನ್ನೋ ರೀತಿಯಲ್ಲಿ ತೂಗುದೀಪ ಅವರ ಮುಖವನ್ನ ತಮ್ಮ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ಅಭಿಮಾನಿ ಆಗಿರೋ ಈ ವ್ಯಕ್ತಿ ಎಲ್ಲರಿಗಿಂದಲೂ ವಿಭಿನ್ನವಾಗಿ ಯೋಚನೆ ಮಾಡಬೇಕು ಅನ್ನೂ ಉದ್ದೇಶದಿಂದ ಈ ರೀತಿ ಮಾಡಿದ್ದಾರಂತೆ. ದರ್ಶನ್ ಫೋಟೋ ಹಾಕಿಸಿಕೊಳ್ಳೊದು ಮಾಮೂಲಿ ಆದರೆ ಮಗನಿಗೆ ಮತ್ತು ತಂದೆಗೆ ಇಬ್ಬರಿಗೂ ಅಭಿಮಾನಿ ಆಗೋದೇ ಸ್ಪೆಷಲ್ ಅನ್ನೋ ರೀತಿ ಬಿಂಬಿತವಾಗ್ತಿದೆ ಈ ಟ್ಯಾಟೂ ಫೋಟೋ.