Don't Miss!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ 'ತೂಗುದೀಪ ಶ್ರೀನಿವಾಸ್'
ನಟ ತೂಗುದೀಪ ಶ್ರೀನಿವಾಸ್, ಅಭಿಮಾನಿಗಳನ್ನ ಅಗಲಿ ಸಾಕಷ್ಟು ವರ್ಷಗಳೇ ಕಳೆದರೂ ಕೂಡ ಇಂದಿಗೂ ಅದೆಷ್ಟೋ ಜನರ ಮನಸ್ಸಿನಲ್ಲಿ ಹಚ್ಚೆಯಾಗಿ ಅಚ್ಚಳಿಯದೇ ಉಳಿದು ಬಿಟ್ಟಿದ್ದಾರೆ. ತೂಗುದೀಪ ಶ್ರೀನಿವಾಸ್ ಅವರ ಸ್ಥಾನದಲ್ಲಿ ಅಭಿಮಾನಿಗಳು ಅವರ ಮಗನಾದ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ರನ್ನ ನೋಡುತ್ತಿದ್ದಾರೆ. ನಮ್ಮಿಂದ ಮರೆಯಾಗಿರುವ ನಟನ ಚಿತ್ತಾರವನ್ನ ಮೈಮೇಲೆ ಹಚ್ಚೆ ಹಾಕಿಸಿಕೊಳ್ಳೊ ಮೂಲಕ ಇಂದಿಗೂ ತೂಗುದೀಪ ಶ್ರೀನಿವಾಸರನ್ನ ನೆನಪಿನಲ್ಲಿರಿಸಿದ್ದಾರೆ.
ಇತ್ತೀಚಿಗಷ್ಟೆ ಅಭಿಮಾನಿಯೊಬ್ಬರು ನಟ ದಿವಂಗತ ತೂಗುದೀಪ ಶ್ರೀನಿವಾಸ್ ರ ಟ್ಯಾಟೂ ವನ್ನ ಹಾಕಿಸಿಕೊಂಡಿದ್ದಾರೆ. ಆ ಪೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಷ್ಟೇ ಅಲ್ಲದೇ ಟ್ಯಾಟೂ ಮತ್ತು ಹಾಕಿಸಿಕೊಂಡಿರೋ ಅಭಿಮಾನಿಯ ಭಾವಚಿತ್ರ ವಾಟ್ಸ್ ಆಪ್ ಗಳ ಪ್ರೊಫೈಲ್ ಪೋಟೋಗಳಾಗಿ ಬದಲಾಗಿದೆ.
ಸಾಮಾನ್ಯವಾಗಿ ಈಗ ಬಂದಿರೋ ಹಾಗೂ ಸ್ಯಾಂಡಲ್ ವುಡ್ ನಲ್ಲಿ ನಂಬರ್ ಒನ್ ಪಟ್ಟದಲ್ಲಿರೋ ಸ್ಟಾರ್ ಗಳ ಫೋಟೋ ಗಳನ್ನ ಟ್ಯಾಟೂ ಹಾಕಿಸಿಕೊಳ್ಳೊದು ಕಾಮನ್ ವಿಚಾರ, ಆದರೆ ಈ ಅಭಿಮಾನಿ ತೂಗುದೀಪ ಶ್ರೀನಿವಾಸರ ಅಪ್ಪಟ ಅಭಿಮಾನಿ, ಆದ್ದರಿಂದ ಓಲ್ಡ್ ಇಸ್ ಗೋಲ್ಡ್ ಅನ್ನೋ ರೀತಿಯಲ್ಲಿ ತೂಗುದೀಪ ಅವರ ಮುಖವನ್ನ ತಮ್ಮ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ಅಭಿಮಾನಿ ಆಗಿರೋ ಈ ವ್ಯಕ್ತಿ ಎಲ್ಲರಿಗಿಂದಲೂ ವಿಭಿನ್ನವಾಗಿ ಯೋಚನೆ ಮಾಡಬೇಕು ಅನ್ನೂ ಉದ್ದೇಶದಿಂದ ಈ ರೀತಿ ಮಾಡಿದ್ದಾರಂತೆ. ದರ್ಶನ್ ಫೋಟೋ ಹಾಕಿಸಿಕೊಳ್ಳೊದು ಮಾಮೂಲಿ ಆದರೆ ಮಗನಿಗೆ ಮತ್ತು ತಂದೆಗೆ ಇಬ್ಬರಿಗೂ ಅಭಿಮಾನಿ ಆಗೋದೇ ಸ್ಪೆಷಲ್ ಅನ್ನೋ ರೀತಿ ಬಿಂಬಿತವಾಗ್ತಿದೆ ಈ ಟ್ಯಾಟೂ ಫೋಟೋ.