'ಆ ಕರಾಳ ರಾತ್ರಿ' ಹಾಡುಗಳನ್ನು ಲಾಂಚ್ ಮಾಡಿದ ಉಪೇಂದ್ರ
ಬಿಗ್ ಬಾಸ್ ನಲ್ಲಿ ಒಟ್ಟಿಗೆ ಇದ್ದ ನಿರ್ದೇಶಕ ದಯಾಳ್ ಪದ್ಮನಾಭನ್, ನಟ ಜೆಕೆ ಹಾಗೂ ಅನುಪಮ ಈಗ ಒಂದು ಸಿನಿಮಾ ಮಾಡಿದ್ದಾರೆ. ಅವರ 'ಆ ಕರಾಳ ರಾತ್ರಿ' ಚಿತ್ರದ ಆಡಿಯೋ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ನಟ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾದ ಹಾಡುಗಳನ್ನು ಲಾಂಚ್ ಮಾಡಿದ್ದಾರೆ.
'ಆ ಕರಾಳ ರಾತ್ರಿ' ಸಾಹಿತಿ ಮೋಹನ್ ಹಬ್ಬು ಅವರ 'ಕರಾಳ ರಾತ್ರಿ' ನಾಟಕ ಆಧಾರಿತ ಸಿನಿಮಾವಾಗಿದೆ. ಸಿನಿಮಾ ಥ್ರಿಲ್ಲರ್ ಎಮೋಷನಲ್ ಆಗಿರಲಿದ್ದು, ಯಾವುದೇ ಹಾರರ್ ಅಂಶಗಳು ಚಿತ್ರದಲ್ಲಿ ಇಲ್ಲವಂತೆ. ರಂಗಾಯಣ ರಘು ಹಾಗೂ ವೀಣಾಸುಂದರ್ 'ಆ ಕರಾಳ ರಾತ್ರಿ'ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದ 'ಅರಿವು' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಅವಿನಾಶ್ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಗಣೇಶ್ ನಾರಾಯಣ್ ಸಂಗೀತ ನೀಡಿದ್ದಾರೆ.
ದಯಾಳ್ ಅವರ ಹಳೆಯ ಸಿನಿಮಾಗೆ ಸಾಥ್ ನೀಡಿದ್ದ ನಟ ನವೀನ್ ಕೃಷ್ಣ ಇಲ್ಲಿ ಚಿತ್ರಕಥೆ, ಸಂಭಾಷಣೆಯಲ್ಲಿ ಸಹಾಯ ಮಾಡಿದ್ದಾರೆ. ಜೊತೆಗೆ ಒಂದು ಪಾತ್ರವನ್ನು ಕೂಡ ನಿರ್ವಹಿಸಲಿದ್ದಾರೆ. 1980ರ ಕಾಲಮಾನದಲ್ಲಿ ಚಿತ್ರದ ಕಥೆ ಸಾಗುತ್ತದೆ.

ಅಂದಹಾಗೆ, ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕ ಕೆ.ಮಂಜು, ಬಿಗ್ ಬಾಸ್ ಪ್ರಥಮ್, ನಿರ್ದೇಶಕ ಆರ್ ಚಂದ್ರು, ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸ್ ಹಾಜರಿದ್ದರು.


Click it and Unblock the Notifications











