Don't Miss!
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಜಕೀಯದಿಂದ ಹಣ ಕಿತ್ತಾಕಿ, ಎಲ್ಲವೂ ಉತ್ತಮವಾಗುತ್ತದೆ - ಉಪೇಂದ್ರ
'ರಾಜಕೀಯದಲ್ಲಿ ಬಿಸಿನೆಸ್ ಹೆಚ್ಚಾದ ಕಾರಣ ತೊಂದರೆಗಳು ಎದುರಾಗಿದೆ. ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಅಭಿವೃದ್ದಿ ಸಾಧ್ಯ' ಎಂದು ನಟ-ರಾಜಕಾರಣಿ ಉಪೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.
ಉಪೇಂದ್ರ ಅಭಿನಯದ 'ಲಗಾಮು' ಚಿತ್ರದ ಮೂಹೂರ್ತ ಬೆಂಗಳೂರಿನಲ್ಲಿ ನಡೆದಿದ್ದು, ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಉಪೇಂದ್ರ ಪ್ರಸ್ತುತ ಕೊರೊನಾ ವೈರಸ್ ಪರಿಸ್ಥಿತಿಗೆ ಏನು ಕಾರಣ ಹಿಂದೆ ತಿಳಿಸಿದರು.
'ಟೀಕಿಸುವುದು, ದೂಷಿಸುವುದು ಬಿಡಿ, ಜನರು ಜವಾಬ್ದಾರಿಯಿಂದ ವರ್ತಿಸಿ'
'ಚುನಾವಣೆ ಬಂದಾಗ ತಪ್ಪು ಮಾಡಿಬಿಟ್ಟು ಆಮೇಲೆ ಹೋರಾಟ ಪ್ರತಿಭಟನೆ ಮಾಡ್ತೀವಿ. ಜನರು ವಿಚಾರವಂತರಾಗಬೇಕು. ಸೂಕ್ತ ಶಿಕ್ಷಣ ಮತ್ತು ಆರೋಗ್ಯ ಇದ್ದರೆ ಮಾತ್ರ ಅಭಿವೃದ್ದಿ ಸಾಧ್ಯ. ಆದರೆ ಪ್ರಸ್ತುತ ಎಲ್ಲದರಲ್ಲೂ ಬಿಸಿನೆಸ್ ಆಗಿದೆ. ಹಾಗಾಗಿ, ಇಂತಹ ಸ್ಥಿತಿ ಇದೆ. ರಾಜಕೀಯ ಎಂಬ ವ್ಯವಸ್ಥೆಯಿಂದ ಹಣ ಅನ್ನುವುದನ್ನು ಕಿತ್ತಾಕಬೇಕಿದೆ' ಎಂದು ಉಪ್ಪಿ ಹೇಳಿದ್ದಾರೆ.
'ಜನರನ್ನು ಪಾಲನೆ ಮಾಡಿ ಅಂತ ಹೇಳುವವರು ಅವರು ಮಾರ್ಗದರ್ಶಕರಾಗಬೇಕು ಅಲ್ಲವೇ. ರಾಜಕೀಯ ಸಭೆ, ಸಮಾರಂಭದಲ್ಲಿ ಸಾವಿರಾರು ಜನ ಸರ್ತಾರೆ. ಈ ಕಡೆ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತಾರೆ. ಆಗಲೇ ಜನ ಗೊಂದಲಕ್ಕೆ ಒಳಗಾಗುವುದು. ಅಲ್ಲಿ ಕೊರೊನಾ ಬರಲ್ಲ, ಇಲ್ಲಿ ಬಂದು ಬಿಡುತ್ತಾ ಎಂಬ ಮನಸ್ಥಿತಿ ಬೆಳಸಿಕೊಳ್ಳುತ್ತಾರೆ. ಜನನಾಯಕರು ಸರಿ ಇದ್ದಿದ್ದರೆ ಎಲ್ಲವೂ ಸರಿಹೋಗ್ತಿತ್ತು'' ಎಂದು ರಾಜಕಾರಣಿಗಳ ನಡೆ ಖಂಡಿಸಿದ್ದಾರೆ ಉಪೇಂದ್ರ.
'ಮೊದಲು ಮನಸ್ಸಿಗೆ ಕಾಯಿಲೆ ಬರುತ್ತೆ, ಆಮೇಲೆ ದೇಹಕ್ಕೆ ಬರುತ್ತೆ. ಹಾಗಾಗಿ, ಧೈರ್ಯವಾಗಿರಬೇಕು, ಧೈರ್ಯ ಕಳೆದುಕೊಳ್ಳಬಾರದು. ಧೈರ್ಯ ಇದೆ ಅಂತ ಸಾಮಾಜಿಕ ಜವಾಬ್ದಾರಿ ಮರೆಯಬೇಡಿ. ಅಗತ್ಯ ಮುನ್ನೆಚ್ಚರಿಕೆ ವಹಿಸಿ'' ಎಂದು ಮನವಿ ಮಾಡಿದ್ದಾರೆ.
Recommended Video
'ಲಗಾಮು' ಸಿನಿಮಾ ಬಗ್ಗೆ ಹೇಳುವುದಾದರೆ ಕೆ ಮಾದೇಶ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಾಧು ಕೋಕಿಲಾ, ರಂಗಾಯಣ ರಘು ಸೇರಿದಂತೆ ಹಲವರು ತಾರಬಳಗದಲ್ಲಿದ್ದಾರೆ. ಇದರ ಜೊತೆಗೆ 'ಕಬ್ಜ' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.