GST ಬಗ್ಗೆ ರಿಯಲ್ ಸ್ಟಾರ್ ಉಪ್ಪಿ ಹೇಳಿದ್ದೇನು?
ಕೇಂದ್ರ ಸರ್ಕಾರ ಜಾರಿ ತಂದಿರುವ GST ಬಗ್ಗೆ ಸಾಮಾನ್ಯ ಜನರಿಂದ ಹಿಡಿದು, ವಿಐಪಿ, ವಿವಿಐಪಿಗಳವರೆಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. GSTಯಿಂದ ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬುದರ ಬಗ್ಗೆ ಎಲ್ಲ ದೃಷ್ಟಿಕೋನದ ಮೂಲಕ ಲೆಕ್ಕಾಚಾರ ಹಾಕಿದ್ದರು.
GSTಯಿಂದ ಕನ್ನಡ ಚಿತ್ರರಂಗದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನ ಕೂಡ ನಿರ್ಮಾಪಕರು, ನಿರ್ದೇಶಕರು, ವಾಣಿಜ್ಯ ಮಂಡಳಿ ಮಾತನಾಡಿತ್ತು. ಈಗ ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ GST ಬಗ್ಗೆ ತಮ್ಮ ಅಭಿಪ್ರಾಯವನ್ನ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

''Demonitisation (ನೋಟ್ ಬ್ಯಾನ್) ಮತ್ತು GST ಯಿಂದ ಎಲ್ಲರಿಗೂ ಉಚಿತ ಶಿಕ್ಷಣ ಮತ್ತು ಉಚಿತ ಆರೋಗ್ಯ ಸಿಗಲು ಸಾಧ್ಯವಾಗಲಿದೆ' ಎಂಬ ಮಾತನ್ನ ಉಪ್ಪಿ ಹೇಳಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯವನ್ನ ಶ್ಲಾಘಿಸಿರುವ ಉಪೇಂದ್ರ 'ಅಚ್ಚೇ ದಿನ್' ಎಂಬ ಹ್ಯಾಷ್ ಟ್ಯಾಗ್ ನ್ನ ಬಳಸಿರುವುದು ಕೂಡ ಗಮನ ಸೆಳೆದಿದೆ.
More from Filmibeat
English summary
Real Star Upendra has taken his twitter account to express his opinion About GST


Click it and Unblock the Notifications











