Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿನೋದ್ ರಾಜ್ ಬಳಿ 1 ಲಕ್ಷ ಹಣ ಕದ್ದು ಪರಾರಿಯಾದ ಕಳ್ಳರು
Recommended Video
ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಇಂಡಸ್ ಇಂಡ್ ಬ್ಯಾಂಕ್ ಎದುರುಗಡೆ ನಟ ವಿನೋದ್ ರಾಜ್ ಬಳಿ ಕಳ್ಳರ ಕೈಚಳಕ ತೋರಿಸಿದ್ದಾರೆ.
ವಿನೋದ್ ರಾಜ್ ಅವರು ಶುಕ್ರವಾರ ತಮ್ಮ ತೋಟದ ಸಿಬ್ಬಂಧಿಗಳಿಗೆ ಸಂಬಳ ನೀಡಲು, ಬ್ಯಾಂಕ್ ನಿಂದ ಒಂದು ಲಕ್ಷ ಹಣ ಡ್ರಾ ಮಾಡಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಹಣ ಕದ್ದು ಪರಾರಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ವಿನೋದ್ ರಾಜ್ ''ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿಕೊಂಡು ಬಂದೆ. ರಸ್ತೆಯ ಮಧ್ಯೆದಲ್ಲಿ ಕಾರು ಪಂಚರ್ ಆಯ್ತು. ಆ ವೇಳೆ ಇಬ್ಬರು ಹುಡುಗರು ಬಂದರು. ಮೊದಲು 16 ವರ್ಷದ ಹುಡುಗ ಬಂದ. ನಾನು ನಿಮ್ಮ ಅಭಿಮಾನಿ ಅಂತ ಮಾತಾಡಿಕೊಂಡು ಇದ್ದ. ಕಾರಿನ ಟೈರ್ ಬದಲಾವಣೆ ಮಾಡುವ ಅಂತರದಲ್ಲಿ ಹಣ ತಗೊಂಡು ಹೋಗಿದ್ದಾನೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಟಿ -ನಿರ್ಮಾಪಕಿ ಅನಿತಾ ರಾಣಿ ಪರ್ಸ್ ಗೆ ಕನ್ನ ಹಾಕಿದ ಕಳ್ಳರು
ಈ ಘಟನೆಯಿಂದ ಸಹಜವಾಗಿ ಆತಂಕಕ್ಕೆ ಒಳಗಾದ ನಟ ವಿನೋದ್ ರಾಜ್ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆ ನಡೆದಾಗ ವಿನೋದ್ ರಾಜ್ ಜೊತೆ ರಾಮಾನುಜ ಎಂಬುವರು ಇದ್ದರು. ಮತ್ತು ಕಾರು ಪಂಚರ್ ಆದಮೇಲೆ ಮತ್ತೊಬ್ಬರನ್ನ ಫೋನ್ ಮಾಡಿ ಕರೆಸಿಕೊಂಡಿದ್ದರು. ಈ ವೇಳೆ ಟೈರ್ ಬದಲಾಯಿಸಲು ಮೂವರು ವಾಹನದಿಂದ ಕೆಳಗೆ ಇಳಿದಾಗ, ಕಳ್ಳರು ಈ ಕೃತ್ಯವೆಸಗಿದ್ದಾರೆ.