ಹಂಪಿ ಉತ್ಸವದಲ್ಲಿ ಮಿಂಚಿದ ಅಣ್ತಮ್ಮ ಯಶ್
2020ರ ಹಂಪಿ ಉತ್ಸವ ಕಾರ್ಯಕ್ರಮ ನಿನ್ನೆ (ಜನವರಿ 10) ಬಳ್ಳಾರಿಯಲ್ಲಿ ಅದ್ದೂರಿಯಾಗಿ ಉದ್ಘಾಟನೆಯಾಗಿದೆ. ನಟ ಯಶ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಮುಖ್ಯ ಆಕರ್ಷಣೆ ಆಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್ ಐತಿಹಾಸಿಕ ಸ್ಥಳವನ್ನು ಕಾಪಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು. ಜೊತೆಗೆ ಇತಿಹಾಸ ಎನ್ನುವುದು ಹಾಗೆ ಸುಮ್ಮನೆ ಸೃಷ್ಠಿ ಆಗುವುದಿಲ್ಲ. ಈ ಮಣ್ಣಿನಲ್ಲಿ ಒಂದು ಪವರ್ ಇದೆ. ಅದಕ್ಕೆ ಇಲ್ಲಿ ದೇಶದ ಅತ್ಯಂತ ಉನ್ನತ ಇತಿಹಾಸ ನಿರ್ಮಾಣ ಆಗಿದೆ.'' ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯಶ್ ರನ್ನು ನೋಡಿದ ಅಭಿಮಾನಿಗಳು ತುಂಬ ಖುಷಿಯಾದರು. ಹಂಪಿಯ ಗಾಯತ್ರಿ ಪೀಠದ ಬಳಿ ಹಾಕಿರುವ ಶ್ರೀ ಕೃಷ್ಣದೇವರಾಯ ವೇದಿಕೆ ಮೇಲೆ ರಾಕಿ ಬರುತ್ತಿದ್ದ ಹಾಗೆ ಜೈಕಾರ ಜೋರಾಗಿತ್ತು. ಕನ್ನಡ ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿಟಿ ರವಿ ನಟ ಯಶ್ ರಿಗೆ ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಂಪಿ ಉತ್ಸವಕ್ಕೆ ಚಾಲನೆ ನೀಡಿದರು. ಮೈಸೂರು ದಸರಾ ಮಾದರಿಯಲ್ಲಿ ಹಂಪಿ ಉತ್ಸವ ಮಾಡುವುದಾಗಿ ಸಚಿವ ಸಿ ಟಿ ರವಿ ತಿಳಿಸಿದ್ದಾರೆ. ವಿಜಯನಗರದ ಗತ ವೈಭವವನ್ನು ತೋರಿಸುವುದು ಹಂಪಿ ಉತ್ಸವದ ಮೂಲ ಉದ್ದೇಶವಾಗಿದೆ.


Click it and Unblock the Notifications











