Don't Miss!
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹನಿಟ್ರ್ಯಾಪ್ ಮಾಡಿ 14 ಲಕ್ಷ ಹಣ ವಸೂಲಿ ಮಾಡಿದ್ದ ನಟನ ಬಂಧನ
ಸಿನಿಮಾ ಮಾಡಿ ಹೆಸರು ಮಾಡಬೇಕೆಂದು ಉದಯೋನ್ಮುಖ ನಟನೊಬ್ಬ ಮಾಡಬಾರದ ಕೆಲಸ ಮಾಡಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾನೆ.
'ಮಿಸ್ಟರ್.ಭೀಮ್ರಾವ್' ಹೆಸರಿನ ಹೊಸ ಸಿನಿಮಾಕ್ಕೆ ನಾಯಕನಾಗಿ ಆಯ್ಕೆ ಆಗಿದ್ದ ನಟ ಯುವರಾಜ್ ಅಲಿಯಾಸ್ ಯುವನನ್ನು ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಯೊಬ್ಬರಿಗೆ ಯುವತಿಯ ಹೆಸರು ಹೇಳಿಕೊಂಡು ವಾಟ್ಸ್ಆಪ್ ಚಾಟ್ ಮಾಡಿದ್ದ ನಟ ಯುವರಾಜ್, ಆತನೊಟ್ಟಿಗೆ ಅಶ್ಲೀಲವಾಗಿ ಮಾತನಾಡಿ, ಆತನ ಕೆಲವು ಚಿತ್ರಗಳನ್ನು ತರಿಸಿಕೊಂಡಿದ್ದ. ಆ ನಂತರ ತಾನು ಪೊಲೀಸ್ ಅಧಿಕಾರಿಯೆಂದು ಸುಳ್ಳು ಹೇಳಿಕೊಂಡು ಉದ್ಯಮಿಗೆ ಕರೆ ಮಾಡಿ ನಿಮ್ಮ ವಿರುದ್ಧ ಯುವತಿಗೆ ಅಶ್ಲೀಲವಾಗಿ ಸಂದೇಶ ಮಾಡಿದ ದೂರು ದಾಖಲಾಗಿದೆ ಎಂದು ಹೇಳಿಕೊಂಡಿದ್ದ.
ಅಲ್ಲದೆ ಕೇಸು ಮುಚ್ಚಿಹಾಕಬೇಕೆಂದರೆ ಹಣ ನೀಡಬೇಕೆಂದು ಹೇಳಿ ಮೊದಲಿಗೆ ಐವತ್ತು ಸಾವಿರ ಪಡೆದುಕೊಂಡು ಬಳಿಕ ಮೂರು ಲಕ್ಷ ಹಣ ಪಡೆದುಕೊಂಡಿದ್ದಾನೆ. ಹೀಗೆ ಪದೇ ಪದೇ ಆತನಿಗೆ ಕರೆ ಮಾಡಿ ಸುಮಾರು ಹದಿನಾಲ್ಕು ಹಣ ಪೀಕಿಸಿಕೊಂಡಿದ್ದಾನೆ. ಕೊನೆಗೆ ಅನುಮಾನ ಬಂದು ಉದ್ಯಮಿ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಯುವರಾಜ್ ಅನ್ನು ಬಂಧಿಸಿದ್ದಾರೆ.
ಹನಿಟ್ರ್ಯಾಪ್ ಮಾಡಲು ನಟಿಯರನ್ನು ಬಳಸಿಕೊಳ್ಳುವ ಜಾಲವೊಂದು ಎರಡು ವರ್ಷದ ಹಿಂದೆ ಪತ್ತೆಯಾಗಿತ್ತು. ನಟಿಯರನ್ನು ಬಳಸಿಕೊಂಡು ಹಲವು ರಾಜಕಾರಣಿಗಳನ್ನು ಹನಿಟ್ರ್ಯಾಪ್ಗೆ ಬೀಳಿಸಿದ್ದ ಜಾಲ ಅದಾಗಿತ್ತು. ಇದೀಗ ನಟ ತಾನೇ ಯುವತಿಯ ಹೆಸರು ಹೇಳಿಕೊಂಡು ಉದ್ಯಮಿಗೆ ವಂಚಿಸಿದ್ದಾನೆ.