Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾ ಸಮಯದಲ್ಲಿ ಮೆಚ್ಚುಗೆ ಪಡೆದ ಅಮೂಲ್ಯ ದಂಪತಿ ಸಮಾಜಸೇವೆ
ಕೊರೊನಾ ಸಂಕಷ್ಟಕ್ಕೆ ಹಲವರು ಮಿಡಿಯುತ್ತಿದ್ದಾರೆ. ಸ್ಯಾಂಡಲ್ವುಡ್ ನಟ-ನಟಿಯರು ಸಹ ಕೊರೊನಾ ಸಂಕಷ್ಟದಲ್ಲಿ ಸಮಾಜಸೇವೆಗೆ ಮುಂದಾಗಿದ್ದಾರೆ.
Recommended Video
ಈ ನಡುವೆ ನಟಿ ಅಮೂಲ್ಯ ಮತ್ತು ದಂಪತಿ ಮಾಡುತ್ತಿರುವ ಸಮಾಜಿಕ ಕಾರ್ಯ ಗಮನಸೆಳೆದಿದೆ. ಅವರು ಆಹಾರ ವಿತರಣೆ, ದಿನಸಿ ವಿತರಣೆ, ತರಕಾರಿ, ಮಾಸ್ಕ್ ವಿತರಣೆ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ.
ಸಾಮಾಜಿಕ ಕಾರ್ಯದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ದಂಪತಿಗಳ ಕಾರ್ಯ ಸಾಕಷ್ಟು ಮೆಚ್ಚುಗೆಗೂ ಕಾರಣವಾಗಿದೆ.
10,000 ಮಾಸ್ಕ್ ವಿತರಣೆ ಮಾಡಿದ್ದರು
ಕೆಲವು ದಿನಗಳ ಹಿಂದಷ್ಟೆ ನಟಿ ಅಮೂಲ್ಯ ಮತ್ತು ಜಗದೀಶ್ ಅವರು ಕೊರೊನಾ ವಿರುದ್ಧ ಹೋರಾಡುತ್ತಿರುವ ಈ ಯೋಧರ ಆರೋಗ್ಯದ ದೃಷ್ಟಿಯಿಂದ 10,000 ಮಾಸ್ಕ್ ವಿತರಿಸುವ ಕಾರ್ಯ ಮಾಡಿದ್ದರು. ಆ ಮಾಸ್ಕ್ಗಳನ್ನು ಸ್ಥಳೀಯ ಮಹಿಳೆಯರಿಂದಲೇ ಹೊಲಿಸಿಕೊಟ್ಟು ಅವರಿಗೆ ಹಣ ಸಂದಾಯ ಮಾಡಿದ್ದರು.
ದಿನಸಿಯನ್ನು ಉಚಿತವಾಗಿ ವಿತರಿಸಿದ್ದರು
ಆ ನಂತರ ದಿನಸಿಯನ್ನು ಉಚಿತವಾಗಿ ವಿತರಿಸುವ ಕಾರ್ಯವನ್ನು ಜಗದೀಶ್ -ಅಮೂಲ್ಯ ದಂಪತಿ ತಂಡದೊಂದಿಗೆ ಸೇರಿ ಮಾಡಿದ್ದರು. ಪೌಷ್ಟಿಕಾಂಶ ಯುಕ್ತ ಆಹಾರ ಪದಾರ್ಥಗಳನ್ನು ಅವಶ್ಯಕತೆ ಇದ್ದವರ ಮನೆಗೆ ತಲುಪಸಿದ್ದರು.
ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಪದಾರ್ಥ
ನಂತರ ಗರ್ಭಿಣಿ ಮಹಿಳೆಯರನ್ನು ಆರೋಗ್ಯ ಇಲಾಖೆ ಸಹಾಯದಿಂದ ಗುರುತಿಸಿ ಹಾರ್ಲಿಕ್ಸ್, ಹಣ್ಣು, ಪೌಷ್ಟಿಕಾಂಶಯುಕ್ತ ತರಕಾರಿ, ಒಣ ಹಣ್ಣುಗಳು, ಹಾಲು ಇತರೆ ಪೌಷ್ಟಿಕಾಂಶ ಯುಕ್ತ ಆಹಾರವನ್ನು ಜಗದೀಶ್ ಮತ್ತು ತಂಡ ವಿತರಣೆ ಮಾಡಿದ್ದರು. ಇದು ಬಹು ಮೆಚ್ಚುಗೆಗೆ ಪಾತ್ರವಾಗಿತ್ತು.
ಮಾನವೀಯತೆ ಜಾತಿಗಿಂತಲೂ ದೊಡ್ಡದು
ಇದೀಗ ಮಾನವೀಯತೆ ಜಾತಿಗಿಂತ ದೊಡ್ಡದು ಎಂಬ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಮೂಲ್ಯ-ಜಗದೀಶ್, ಮಳೆಯಲ್ಲಿಯೇ ಆಹಾರ ಪಾಕೆಟ್ಗಳನ್ನು ವಿತರಿಸುತ್ತಿರುವ ಚಿತ್ರ ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದಾರೆ.