Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರ್ಆರ್ ನಗರದಲ್ಲಿ ಮತದಾನದ ಹಕ್ಕು ಚಲಾಯಿಸಿದ ನಟಿ ಅಮೂಲ್ಯ
ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆ ಇಂದು ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ನಟಿ ಅಮೂಲ್ಯ ಅವರು ಇಂದು ಬೆಳಗ್ಗೆ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.
ಪತಿ ಜಗದೀಶ್ ಹಾಗೂ ಅತ್ತೆ-ಮಾವ ಅವರೊಂದಿಗೆ ಮತಗಟ್ಟೆಗೆ ಆಗಮಿಸಿದ ಅಮೂಲ್ಯ ಕುಟುಂಬ ಸಮೇತ ಮತದಾನ ಮಾಡಿದ್ದಾರೆ. ನಂತರ ಮಾಧ್ಯಮದವರ ಬಳಿ ಮಾತನಾಡಿದ ಅಮೂಲ್ಯ ''ಎಲ್ಲರೂ ಮತದಾನ ಹಕ್ಕನ್ನು ಚಲಾಯಿಸಿ'' ಎಂದು ವಿನಂತಿಸಿದರು.
ಹೆಸರು ಗಳಿಸಿದರೆ ನಿಮ್ಮಂತೆ ಗಳಿಸಬೇಕು; ದರ್ಶನ್ ಬಗ್ಗೆ ನಟಿ ಅಮೂಲ್ಯ ಹೀಗೆ ಹೇಳಿದ್ದೇಕೆ?
''ಕೊರೊನಾ ವೈರಸ್ ಭೀತಿಯಿಂದ ಮತದಾನ ಮಾಡುವುದು ಕಳೆದುಕೊಳ್ಳಬೇಡಿ. ಚುನಾವಣ ಆಯೋಗ ಎಲ್ಲ ರೀತಿಯ ಮುಂಜಾಗೃತೆ ವಹಿಸಿದೆ, ಧೈರ್ಯವಾಗಿ ಬಂದ ಮತದಾನ ಮಾಡಬಹುದು'' ಎಂದು ಸಲಹೆ ನೀಡಿದ್ದಾರೆ.
''ನಮ್ಮ ಬಗ್ಗೆ ನಾವು ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಇರುವುದರಿಂದ, ನಾವು ಸಹ ಸ್ಯಾನಿಟೈಸರ್ ತಂದಿದ್ವಿ, ಮಾಸ್ಕ್ ಧರಿಸಿದ್ದೇವೆ'' ಎಂದ ಅಮೂಲ್ಯ ತಿಳಿಸಿದರು.
ಅಂದ್ಹಾಗೆ, ಅಮೂಲ್ಯ ಅವರು ಬಿಜೆಪಿ ಕಾರ್ಯಕರ್ತೆ. ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಪ್ರಚಾರ ಸಹ ಕೈಗೊಂಡಿದ್ದರು. ನಟ ದರ್ಶನ್ ಪ್ರಚಾರ ಮಾಡಿದ ವೇಳೆ ಅಮೂಲ್ಯ ಸಹ ಜೊತೆಯಲ್ಲಿ ಮತಯಾಚನೆ ಮಾಡಿದ್ದರು.
Recommended Video