Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶ್ರೀಮನ್ನಾರಾಯಣ'ನನ್ನು ನೋಡಿ ದೀರ್ಘ ವಿಮರ್ಶೆ ಮಾಡಿದ ನಟಿ ಆಶಿಕಾ ರಂಗನಾಥ್
ಅವನೇ ಶ್ರೀಮನ್ನಾರಾಯಣ' ಇವತ್ತು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ಬಂದಿದೆ. 'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನು ಕನ್ನಡ ಸಿನಿ ಪ್ರಿಯರು ಕಣ್ತುಂಬಿಕೊಳ್ಳುವ ಮುನ್ನ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗಾಗಿ ನಿನ್ನೆ ರಾತ್ರಿ ಪ್ರೀಮಿಯರ್ ಶೋ ಆಯೋಜಿಸಿತ್ತು ಚಿತ್ರತಂಡ. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋಗೆ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಹಾಜರಾಗಿದ್ದರು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ಅನೀಶ್ ತೇಜೇಶ್ವರ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ರಿಷಬ್ ಶೆಟ್ಟಿ, ವಿನಯ್ ರಾಜ್ ಕುಮಾರ್, ಆಶಿಕಾ ರಂಗನಾಥ್, ತರುಣ್ ಸುಧೀರ್, ಶರಣ್, ಶ್ರೀಲೀಲಾ, ಅಕುಲ್ ಬಾಲಾಜಿ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಪಾಲ್ಗೊಂಡು ಸಿನಿಮಾ ವೀಕ್ಷಿಸಿ ಖುಷಿ ಪಟ್ಟಿದ್ದಾರೆ.
'ಅವನೇ ಶ್ರೀಮನ್ನಾರಾಯಣ' ಅರ್ಥ ಮಾಡ್ಕೊಳ್ಳೋಕೆ ಬ್ರೇನ್ ಚುರುಕಾಗಿ ಇರ್ಬೇಕು.!
ಅನೇಕರು ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಅವತಾರಕ್ಕೆ ದಂಗ್ ಆಗಿದ್ದಾರೆ. ನಿನ್ನ ಸಿನಿಮಾ ವೀಕ್ಷಿಸಿದ ನಟಿ ಆಶಿಕಾ ರಂಗನಾಥ್ ತನ್ನದೆ ಶೈಲಿಯಲ್ಲಿ ವಿಮರ್ಶೆ ಮಾಡಿದ್ದಾರೆ. ಸಿನಿಮಾ ಬಗ್ಗೆ ದೀರ್ಘವಾಗಿ ವಿಮರ್ಶೆ ಮಾಡಿಸಿರುವ ಆಶಿಕಾ ಅವನೇ ಶ್ರೀಮನ್ನಾರಾಯಣ ಅವತಾರಕ್ಕೆ ಮನಸೋತಿದ್ದಾರೆ.
"ನನಗೆ ನಿಜಕ್ಕು ಅಮರಾವತಿ ಎನ್ನುವ ಮತ್ತೊಂದು ಪ್ರಪಂಚಕ್ಕೆ ಹೋದಹಾಗೆ ಆಗಿತ್ತು. ಎಂಥ ದೃಷ್ಟಿಕೋನ, ಎಂಥ ಸ್ಕ್ರೀನ್ ಪ್ಲೇ, ಅದ್ಭುತವಾದ ಕ್ಯಾಮರಾ ವರ್ಕ್, ಮೇಕಿಂಗ್ ಮತ್ತೊಂದು ಲೆವೆಲ್ ಗೆ ಕೊಂಡೊಯ್ದಿದೆ. ನನಗೆ ಅನೇಕ ದೃಶ್ಯಗಳನ್ನು ನೋಡುವಾಗ ರೋಮಾಂಚನವಯಿತು. ಅಜನೀಶ್ ಲೋಕನಾಥ್ ಅವರ ಬಿಜಿಎಂ ಮತ್ತು ಸಂಗೀತ ಸಮ್ಮೋಹನಗೊಂಡಿದೆ" ಎಂದು ಹೇಳಿದ್ದಾರೆ.
ಇನ್ನು "ಇಂಟಲಿಜೆಂಟ್ ಸ್ಮಾರ್ಟ್ ಪೊಲೀಸ್ ಆಗಿ ರಕ್ಷಿತ್ ಶೆಟ್ಟಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ಅಚ್ಯುತ್ ಸರ್ ಅತ್ಯುತ್ತಮ. ಶಾನ್ವಿ ಕ್ಯೂಟ್ ಆಗಿ ಕಾಣಿಸುತ್ತಾರೆ ಮತ್ತು ಅದ್ಭುತವಾಗಿ ಅಭಿನಯಿಸಿದ್ದಾರೆ. ಜಯರಾಮ್ ಮತ್ತು ತುಕಾರಾಮ್ ಇಬ್ಬರು ಮಂತ್ರಮುಗ್ದಗೊಳಿಸುತ್ತೆ. ಪ್ರತಿಯೊಂದು ಪಾತ್ರ ಮತ್ತು ತಂತ್ರಜ್ಞರ ಶ್ರಮ ತೆರೆ ಮೇಲೆ ಕಾಣಿಸುತ್ತಿದೆ. ಖಂಡಿತವಾಗಿಯು ಈ ಸಿನಿಮಾ ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರವಾಗಲಿದೆ. ಪುಷ್ಕರ್ ಮಲ್ಲಿಕಾರ್ಜುನ್ ಪ್ರತಿಯೊಂದನ್ನು ಅಚ್ಚುಕಟ್ಟಾಗಿ ಮಾಡಿ ಹೆಚ್ಚು ಶ್ರಮ ವಹಿಸಿದ್ದಾರೆ. ಹ್ಯಾಟ್ಸಾಫ್ ಸರ್ ನಿಮಗೆ" ಎಂದು ಹೇಳಿದ್ದಾರೆ.