Don't Miss!
- News Big Offer for Bengaluru Voters: ಮತದಾರರಿಗೆ ಗುಡ್ ನ್ಯೂಸ್.. ರಿಯಾಯಿತಿ ದರದಲ್ಲಿ ತಿಂಡಿ ವ್ಯವಸ್ಥೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಚಿವರ ನೆರವಿನಿಂದ ಲಾಕ್ಡೌನ್ ನಡುವೆ ಬೆಂಗಳೂರು ತಲುಪಿದ ಹಿರಿಯ ನಟಿ ಭಾರತಿ
ಕೊರೊನಾ ಲಾಕ್ಡೌನ್ ಬಿಸಿ ಯಾರನ್ನೂ ಬಿಟ್ಟಿಲ್ಲ. ಲಕ್ಷಾಂತರ ಮಂದಿ ಸ್ವಂತ ಮನೆಗಳನ್ನು ತಲುಪಲಾಗಿಲ್ಲ. ಹಲವು ನಟ-ನಟಿಯರೂ ತಮ್ಮ ಮನೆಗಳಿಗೆ ತಲುಪಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರೂ ಸಹ ಕೊರೊನಾ ಲಾಕ್ಡೌನ್ನಿಂದಾಗಿ ತೀವ್ರ ಸಮಸ್ಯೆ ಎದುರಿಸಿದ್ದಾರೆ. ಬೆಂಗಳೂರಿಗೆ ಬರಲಾಗದೆ ಸಮಸ್ಯೆಗೆ ಸಿಲುಕಿಕೊಂಡಿದ್ದರು.
ಲಾಕ್ಡೌನ್ ನಿಂದಾಗಿ ಹೋಟೆಲ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ನಟಿ ಜಯಂತಿ
ಆದರೆ ಈ ಸಮಯದಲ್ಲಿ ನೆರವಿಗೆ ಬಂದ ಸಚಿವ ಎಸ್.ಟಿ.ಸೋಮಶೇಖರ್ ಭಾರತಿ ಅವರು ಕ್ಷೇಮವಾಗಿ ಬೆಂಗಳೂರಿಗೆ ತಲುಪುವ ವ್ಯವಸ್ಥೆ ಮಾಡಿದ್ದಾರೆ.
ಲಾಕ್ಡೌನ್ ಮುನ್ನಾ ಮೈಸೂರಿಗೆ ತೆರಳಿದ್ದರು
ನಟಿ ಭಾರತಿ ಅವರು ಲಾಕ್ಡೌನ್ ಆಗುವ ಮುನ್ನಾ ಮೈಸೂರಿಗೆ ತೆರಳಿದ್ದರು. ಲಾಕ್ಡೌನ್ ಘೋಷಣೆ ಆದಾಗ ಅವರು ಅಲ್ಲಿಯೇ ಸಿಕ್ಕಿ ಹಾಕಿಕೊಂಡರು. ವಾಹನ ಬೆಂಗಳೂರಿನಲ್ಲಿ ಬಿಟ್ಟು ಬಂದಿದ್ದರಿಂದ ಬೆಂಗಳೂರಿಗೆ ಬರಲಾಗಿರಲಿಲ್ಲ.
ಅಗತ್ಯ ಔಷಧಗಳು ಖಾಲಿ ಆದವು
ಲಾಕ್ಡೌನ್ ಘೋಷಣೆ ಆದಾಗಿನಿಂದಲೂ ಅವರು ಮೈಸೂರಿನಲ್ಲಿ ಉಳಿದುಬಿಟ್ಟಿದ್ದರು. ಹಾಗೋ-ಹೀಗೊ ಪರಿಸ್ಥಿತಿಯನ್ನು ಭಾರತಿ ಅವರು ನಿಭಾಯಿಸಿದ್ದರು. ಆದರೆ ಅಗತ್ಯ ಔಷಧಿಗಳು ಖಾಲಿಯಾಗುತ್ತಾ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಮನೆಗೆ ಹೋಗುವುದು ಅವರಿಗೆ ಅನಿವಾರ್ಯವಾಗಿತ್ತು.
'ನಾಗರಹಾವು' ಸಿನಿಮಾವನ್ನು ಕಲ್ಪನಾ ರಿಜೆಕ್ಟ್ ಮಾಡಿದ್ದರು!
ನೆರವಿಗೆ ಬಂದ ಸಚಿವ ಎಸ್.ಟಿ.ಸೋಮಶೇಖರ್
ಭಾರತಿ ಅವರು ಎದುರಿಸುತ್ತಿದ್ದ ಸಮಸ್ಯೆ ಸಚಿವ ಎಸ್.ಟಿ.ಸೋಮಶೇಖರ್ ಅವರ ಗಮನಕ್ಕೆ ಬಂತು. ಕೂಡಲೇ ಜಿಲ್ಲಾಡಳಿತದಿಂದ ಸೂಕ್ತ ಪಾಸ್ ವ್ಯವಸ್ಥೆ ಮಾಡಿಸಿ, ಭಾರತಿ ಅವರು ಕ್ಷೇಮವಾಗಿ ಬೆಂಗಳೂರು ತಲುಪುವಂತೆ ನೋಡಿಕೊಂಡಿದ್ದಾರೆ.
ಜಯಂತಿ ಅವರು ಹೊಸಪೇಟೆಯಲ್ಲಿ ಸಿಲುಕಿಕೊಂಡಿದ್ದಾರೆ
ಮತ್ತೊಬ್ಬ ಹಿರಿಯ ನಟಿ ಜಯಂತಿ ಅವರು ಲಾಕ್ಡೌನ್ ಗೆ ಮುನ್ನಾ ಹಂಪಿ ಪ್ರವಾಸಕ್ಕೆ ತೆರಳಿದ್ದವರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಲಾಕ್ಡೌನ್ ಆದಾಗಿನಿಂದಲೂ ಹೊಸಪೇಟೆಯ ಖಾಸಗಿ ಹೋಟೆಲ್ ಒಂದರಲ್ಲಿ ಅವರು ವಾಸ್ತವ್ಯ ಹೂಡಿದ್ದಾರೆ. ಅಲ್ಲಿಯೇ ಅವರು ಕ್ಷೇಮವಾಗಿದ್ದಾರೆ.
ಲಾಕ್ಡೌನ್ನಲ್ಲಿಯೇ ವಿಶಿಷ್ಟ ಪ್ರಯೋಗದ ಸಿನಿಮಾ ಮಾಡಲಿದ್ದಾರೆ 'ಮಠ' ಗುರುಪ್ರಸಾದ್