Don't Miss!
- News ಲೋಕಸಭಾ ಚುನಾವಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಮೇಕೆದಾಟು ಅಸ್ತ್ರ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ನಟಿ ಚೈತ್ರಾ
Recommended Video
ಖುಷಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಭರವಸೆ ನಾಯಕಿ ಎಂದೇ ಹೆಸರು ಪಡೆದುಕೊಂಡಿದ್ದ ನಟ ಚೈತ್ರಾ ಪೋತ್ ರಾಜ್ ಮದುವೆ ಆಗಿ ಸಿನಿಮಾರಂಗದಿಂದ ದೂರ ಸರಿದಿದ್ದರು. ಬೆರೆಳೆಣಿಕೆ ಸಿನಿಮಾಗಳಲ್ಲಿ ಅಭಿನಯಿಸಿದ ನಂತರ ಲಿಕ್ಕರ್ ಬ್ಯುಸಿನೆಸ್ ಮ್ಯಾನ್ ಬಾಲಾಜಿ ಅವರನ್ನ ಚೈತ್ರಾ ಮದುವೆ ಆಗಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು.
ಮದುವೆ ನಂತರ ಸಿನಿಮಾ ಲೈಫ್ ಗೆ ಗುಡ್ ಬಾಯ್ ಹೇಳಿ ನಮ್ಮ ಸಂಸಾರ ಆನಂದ ಸಾಗರ ಎನ್ನುವಂತೆ ಜೀವನದ ಸೆಕೆಂಡ್ ಆಫ್ ಅನ್ನು ಸುಂದರವಾಗಿ ಕಟ್ಟಿಕೊಂಡಿದ್ದರು ಚೈತ್ರ ಮತ್ತು ಬಾಲಾಜಿ. ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ ಒಂದು ಗಂಡು ಮತ್ತೊಂದು ಹೆಣ್ಣು ಮಗು ಕೂಡ ಇದೆ. ಮಕ್ಕಳು ದೊಡ್ಡವರಾದ ನಂತರ ಚೈತ್ರ ತಮ್ಮ ಸೆಕೆಂಡ್ ಇನ್ನಿಂಗ್ಸ್ ಅನ್ನು ಕಿರುತೆರೆಯಲ್ಲಿ ಆರಂಭ ಮಾಡಿದ್ದರು.
2017ರಲ್ಲಿ ಒಂದಾದ ಮತ್ತು ಬೇರ್ಪಟ್ಟ ಸಿನಿಮಾ ತಾರೆಯರು
ಕಿಚ್ಚನ ಮಡದಿಯ ನಿರ್ಮಾಣ ಸಂಸ್ಥೆಯಲ್ಲಿ ಅಡುಗೆ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು .ಎಲ್ಲವೂ ಚೆನ್ನಾಗಿದೆ ಎನ್ನುವಾಗ ಒಮ್ಮೆಲೆ ಚೈತ್ರಾ ನನಗೆ ವಿಚ್ಛೇದನ ಬೇಕು ಎಂದು ಕೋರ್ಟ್ ಮೆಟ್ಟಿಲು ತುಳಿಯಲು ಸಿದ್ದರಾಗಿದ್ದಾರೆ. ತನ್ನ ಪತಿಯಿಂದ ನಿತ್ಯ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ಪೋಲಿಸರಿಗೆ ದೂರು ಕೊಟ್ಟಿದ್ದಾರೆ. ಹಾಗಾದ್ರೆ ಚೈತ್ರ ವಿಚ್ಛೇದನ ಕೇಳಲು ಕಾರಣವೇನು? ದೂರನಲ್ಲಿದಾಖಲು ಮಾಡಿರುವ ಅಂಧಗಳು ಯಾವುದು ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ
ಖುಷಿ ನಟಿಯ ಬಾಳಲ್ಲಿ ಇಲ್ಲವಾಯ್ತು ಸಂತೋಷ
'ಖುಷಿ' ಹಾಗೂ 'ಶಿಷ್ಯ' ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಸಿನಿಮಾ ಪ್ರೇಕ್ಷಕರ ಮಧ್ಯೆ ಗುರುತಿಸಿಕೊಂಡಿದ್ದ ನಟಿ ಚೈತ್ರಾ ಪೋತರಾಜ್ ತಮ್ಮ ಐದು ವರ್ಷದ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಡಲು ಮುಂದಾಗಿದ್ದಾರೆ. ಪತಿ ಬಾಲಾಜಿ ವಿರುದ್ದ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದಾರೆ.
ಅನುಮಾನದಿಂದ ಬೇಸತ್ತ ನಟಿ
2006ರಲ್ಲಿ ಚೈತ್ರಾ ಲಿಕ್ಕರ್ ಬ್ಯುಸಿನೆಸ್ ಮ್ಯಾನ್ ಬಾಲಾಜಿ ಪೋತರಾಜ್ ನನ್ನ ಪ್ರೀತಿಸಿ ಮದುವೆಯಾಗಿದ್ರು. ಈ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಆದರೆ ಬಾಲಾಜಿಗೆ ಪತ್ನಿ ಸಿನಿಮಾ ನಟಿಯಾಗಿದ್ರಿಂದ ಸಿಕ್ಕಾಪಟ್ಟೆ ಅನುಮಾನವಿತ್ತಂತೆ. ಎಲ್ಲಿಗೆ ಹೋದರು ಆಕೆಯೊಂದಿಗೆ ಗನ್ ಮ್ಯಾನ್ ನನ್ನ ಕಳುಹಿಸ್ತಿದ್ದರಂತೆ. ಹೀಗಾಗಿ ಪತಿಯ ಕಾಟದಿಂದ ಬೇಸತ್ತಿದ್ದಾರಂತೆ ನಟಿ ಚೈತ್ರಾ.
ಅಮೂಲ್ಯ ಎನ್ನುವವರ ಜೊತೆ ಸಂಬಂಧ
ಅಷ್ಟೇ ಅಲ್ಲದೆ ಅಮೂಲ್ಯ ಅನ್ನೋ ಯುವತಿಯೊಂದಿಗೆ ಪತಿ ಬಾಲಾಜಿ ಅಕ್ರಮ ಸಂಬಂಧ ಇಟ್ಕೊಂಡಿದ್ದಾರೆ ಎಂದು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಚೈತ್ರಾ. ಪತಿ ನನ್ನ ಸಂಪಾದನೆಯ ಹಣವನ್ನೂ ಪಡೆದು ಅಕ್ರಮಸಂಬಂಧ ಇರುವ ಯುವತಿಗೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರತಿನಿತ್ಯ ಹೊಡೆಯುತ್ತಿದ್ದ ಪತಿ ಬಾಲಾಜಿ
ಚೈತ್ರಾ ಮದುವೆ ಆಗುವ ಸಂದರ್ಭದಲ್ಲಿಯೇ ಸಿನಿಮಾಗಳಲ್ಲಿ ಅಭಿನಯಿಸಬಾರದು ಎಂದು ಮಾತಾಗಿರುತ್ತದೆ. ಅದರಂತೆ ಚೈತ್ರಾ ಅಭಿನಯಕ್ಕೆ ವಿದಾಯ ಹೇಳಿದ್ದರು. ಇತ್ತೀಚಿನ ದಿನಗಳಲ್ಲಿ ತವರು ಮನೆಯವರ ಸಹಾಯದಿಂದ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದರು ಅಂದಿನಿಂದ ಬಾಲಾಜಿ ಅವರು ಮಾನಸಿಕ ಹಾಗೂ ದೈಹಿಕವಾಗಿ ಚೈತ್ರಾ ಅವರಿಗೆ ಹಿಂಸೆ ನೀಡಲು ಶುರು ಮಾಡಿದ್ದಾರೆ. ಸಾಕಷ್ಟು ಸಲ ಚೈತ್ರಾ ಅವರ ಮೇಲೆ ಕೈ ಮಾಡಿದ್ದು ಹಲವು ಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ.