'ಕನ್ನಡ್ ಗೊತ್ತಿಲ್ಲ' ಎನ್ನುತ್ತಿದ್ದಾರೆ ಕನ್ನಡ ಹುಡುಗಿ ಹರಿಪ್ರಿಯಾ
Recommended Video

ಉತ್ತರ ಭಾರತದಿಂದ ಬೆಂಗಳೂರಿಗೆ ಬಂದು ಜೀವನ ಮಾಡುವ ಅನೇಕರು ಹೇಳುವ ಪದ 'ಕನ್ನಡ್ ಗೊತ್ತಿಲ್ಲ' ಎಂದು. ನಾವು ನೀವು ಎಲ್ಲರೂ ಈ ಪದವನ್ನು ಕೇಳಿರುತ್ತವೆ. 'ಕನ್ನಡ್ ಅಲ್ಲ ಕನ್ನಡ' ಎಂದು ಅವರಿಗೆ ಬುದ್ದಿ ಹೇಳಿರುತ್ತೇವೆ. ಆದ್ರೆ ವಿಶೇಷ ಅಂದರೆ, ಈಗ ಇದೇ ಹೆಸರಿನಲ್ಲಿ ಸಿನಿಮಾ ಬರುತ್ತಿದೆ.
ನಟಿ ಹರಿಪ್ರಿಯಾ 'ಕನ್ನಡ್ ಗೊತ್ತಿಲ್ಲ' ಎಂಬ ಹೊಸ ಸಿನಿಮಾವನ್ನು ಮಾಡುತ್ತಿದ್ದಾರೆ. ಒಂದರ ನಂತರ ಒಂದು ಸಿನಿಮಾಗಳ ಅವಕಾಶಗಳು ಹರಿಪ್ರಿಯಾ ಪಾಲಾಗುತ್ತಿವೆ. ಈ ಚಿತ್ರವನ್ನು ಆರ್ ಜೆ ಮಯೂರ್ ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ.

ಆರ್ ಜೆ ಮಯೂರ್ ಈಗಾಗಲೇ ರಚಿತಾ ರಾಮ್ ನಿರ್ಮಾಣದಲ್ಲಿ ಬಂದ 'ರಿಷಭಪ್ರಿಯಾ' ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಕಿರುಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಈಗ ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ.

ಹಾರರ್ ಜಾನರ್ ನಲ್ಲಿ ಸಿನಿಮಾ ಇರಲಿದ್ದು, ಇಂದಿನ ದಿನಕ್ಕೆ ತುಂಬ ಹತ್ತಿರ ಆಗಲಿದೆಯಂತೆ. ಕನ್ನಡ ಹಾಗೂ ಕರ್ನಾಟಕದ ಸುತ್ತ ಸುತ್ತುವ ಭಾವನಾತ್ಮಕ ಸಿನಿಮಾ ಇದಾಗಲಿದೆಯಂತೆ. ಉಳಿದಂತೆ, ಅಭಯ್ ಶಂಕರ್ ಸಂಗೀತ, ಗಿರಿಧರ್ ದಿವಾನ್ ಕ್ಯಾಮೆರಾ ಈ ಚಿತ್ರಕ್ಕಿದೆ.


Click it and Unblock the Notifications











