'ಹೆಣ್ಣನ್ನು ಹರಾಜು ಹಾಕುವ ಕೆಲಸ ಮಾಡಬಾರದು' - ಜಯಮಾಲ
Recommended Video

ಮೀ ಟೂ ಹಾಗು ಅರ್ಜುನ್ ಸರ್ಜಾ ಬಗ್ಗೆ ಮಾತನಾಡಿದ ನಟಿ ಜಯಮಾಲಾ | FILMIBEAT KANNADA
ಚಿತ್ರರಂಗದಲ್ಲಿ ಈಗ ಮೀ ಟೂ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಸದ್ಯ ಹಿರಿಯ ನಟಿ ಜಯಮಾಲ ಕೂಡ ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
''ಮೀ ಟೂ ಎನ್ನುವುದು ಹೊಸ ಅಭಿಯಾನ. ಈ ಅಭಿಯಾನದಲ್ಲಿ ಹೆಣ್ಣಿಗೆ ಎಷ್ಟು ನ್ಯಾಯ ಸಿಗುತ್ತದೆ ಎನ್ನುವುದು ಬಹಳ ಮುಖ್ಯ. ಹೆಣ್ಣನ್ನು ಹಾರಾಜು ಹಾಕುವ ಕೆಲಸ ಯಾರು ಮಾಡಬಾರದು. ಹೆಣ್ಣು ಮುಕ್ತವಾಗಿ ಬಂದಾಗ ಈ ಸಮಾಜ ಯಾವಾಗಲೂ ಹೇಳುವುದು ಅವಳು ಅಂತವಳು, ಇಂತವಳು ಅಂತ. ಆದರೆ, ಆ ರೀತಿಯ ಕೆಲಸಗಳ ಆಗಬಾರದು.'' ಎಂದು ಜಯಮಾಲ ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಮೀ ಟೂ ಘಟನೆಗಳ ಕುರಿತು ''ಅರ್ಜುನ್ ಸರ್ಜಾ ಒಳ್ಳೆ ಹುಡುಗ. ನನ್ನ ವೃತ್ತಿ ಜೀವನದಲ್ಲಿ ನನಗೆ ಈ ರೀತಿ ಒಂದೇ ಒಂದು ಕಹಿ ಘಟನೆ ನಡೆದಿಲ್ಲ. ಮಿಟೂ ಹೆಣ್ಣಿನ ದೌರ್ಜನ್ಯದ ವಿರುದ್ಧ ಬಲ ತಂದುಕೊಟ್ಟಿದೆ.'' ಎಂದು ತಿಳಿಸಿದ್ದಾರೆ.

ಈಗಾಗಲೇ ತಾರಾ, ಸರೋಜದೇವಿ ಸೇರಿದಂತೆ ಅನೇಕ ಹಿರಿಯ ನಟಿಯರು ಅರ್ಜುನ್ ಸರ್ಜಾ ಮಾತನಾಡಿದ್ದು, ಈಗ ಜಯಮಾಲ ಕೂಡ ಸರ್ಜಾ ಆ ರೀತಿಯ ಹುಡುಗ ಅಲ್ಲ ಎಂದಿದ್ದಾರೆ
More from Filmibeat
English summary
Kannada actress Jayamala supports Me Too campaign.


Click it and Unblock the Notifications











