Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಾಕ್ಡೌನ್ ನಿಂದಾಗಿ ಹೋಟೆಲ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ನಟಿ ಜಯಂತಿ
ಕೊರೊನಾ ಲಾಕ್ಡೌನ್ ನಿಂದಾಗಿ ಲಕ್ಷಾಂತರ ಜನಕ್ಕೆ ಮನೆಗಳಿಗೆ ಮರಳಲು ಸಾಧ್ಯವಾಗಿಲ್ಲ. ಪ್ರವಾಸಕ್ಕೆ ಬಂದವರು ಅಲ್ಲಲ್ಲಿಯೇ ಉಳಿದು ಬಿಟ್ಟಿದ್ದಾರೆ.
ಕನ್ನಡದ ಹಿರಿಯ ನಟಿ ಜಯಂತಿ ಸಹ ಇದೇ ಸಮಸ್ಯೆಗೆ ಸಿಲುಕಿದ್ದಾರೆ. ಅವರೂ ಸಹ ಕಳೆದ ಮೂರು ವಾರದಿಂದ ಹಂಪಿಯ ಹೋಟೆಲ್ ಒಂದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರ ನೆರವಿಗೆ ನಿಂತ ಉಪೇಂದ್ರ
ಕೊರೊನಾ ಭೀತಿ ಹೆಚ್ಚು ವ್ಯಾಪಿಸದೇ ಇದ್ದ ಸಮಯದಲ್ಲಿ ನಟಿ ಜಯಂತಿ ತಮ್ಮ ಕುಟುಂಬದೊಂದಿಗೆ ಹಂಪಿಗೆ ಬಂದಿದ್ದರು. ಆದರೆ ಅವರಿನ್ನೂ ಪ್ರವಾಸದಲ್ಲಿರುವಾಗಲೇ ಲಾಕ್ಡೌನ್ ಘೋಷಣೆ ಆಯ್ತು. ಹಾಗಾಗಿ ಅವರು ಹಂಪಿಯಲ್ಲೇ ಉಳಿದಿದ್ದಾರೆ.
ಮಾರ್ಚ್ 22 ರಂದು ಪ್ರವಾಸಕ್ಕೆ ಬಂದಿದ್ದರು
ಮಾರ್ಚ್ 22 ರಂದು ನಟಿ ಜಯಂತಿ ಮತ್ತು ಕುಟುಂಬ ಹಂಪಿ ಪ್ರವಾಸಕ್ಕೆ ಬಂದಿದ್ದರು. ಪ್ರವಾಸ ಇನ್ನೂ ನಡೆಯುತ್ತಿರುವಾಗಲೇ ಲಾಕ್ಡೌನ್ ಘೋಷಣೆ ಆಯಿತು. ಹಾಗಾಗಿ ಜಯಂತಿ ಮತ್ತು ಕುಟುಂಬ ಹೊಸಪೇಟೆಯ ಹೋಟೆಲ್ ಒಂದರಲ್ಲಿ ಉಳಿಯಬೇಕಾಯಿತು.
ಬೆಂಗಳೂರಿಗೆ ವಾಪಸ್ಸಾಗಲು ಸಾಧ್ಯವಾಗಿಲ್ಲ
ಲಾಕ್ಡೌನ್ ಆದ ಬಳಿಕ ಜಯಂತಿ ಮತ್ತು ಕುಟುಂಬಕ್ಕೆ ಬೆಂಗಳೂರಿಗೆ ವಾಪಸ್ ಬರಲು ಆಗಿಲ್ಲ. ಹಾಗಾಗಿ ಹೋಟೆಲ್ನಲ್ಲಿಯೇ ಕಳೆದ 22 ದಿನಗಳಿಂದಲೂ ಇದ್ದಾರೆ. ಅಲ್ಲಿಯೇ ಊಟ ಅಲ್ಲಿಯೇ ವಾಸ್ಥವ್ಯ.
ಲಾಕ್ಡೌನ್ ಮಧ್ಯೆ ಶೂಟಿಂಗ್ ಆರೋಪ: ನಿರ್ದೇಶಕನ ವಿರುದ್ಧ ಪೊಲೀಸರಿಗೆ ಸೋನಾಕ್ಷಿ ಸಿನ್ಹಾ ದೂರು
ಏಪ್ರಿಲ್ 14 ಕ್ಕೆ ಲಾಕ್ಡೌನ್ ಅಂತ್ಯವಾಗುವ ನಿರೀಕ್ಷೆ ಇತ್ತು
ಏಪ್ರಿಲ್ 14 ಕ್ಕೆ ಲಾಕ್ಡೌನ್ ಅಂತ್ಯವಾಗಬಹುದು ಎಂಬ ಆಸೆಯಲ್ಲಿದ್ದ ಜಯಂತಿ ಮತ್ತು ಕುಟುಂಬಕ್ಕೆ ಮತ್ತೆ ನಿರಾಸೆಯಾಗಿದ್ದು, ಮೇ 3 ರ ವರೆಗೆ ಲಾಕ್ಡೌನ್ ಮುಂದುವರೆದಿರುವುದು ತಲೆನೋವಾಗಿ ಪರಿಣಮಿಸಿದೆ. ಇನ್ನುಳಿದ ದಿನಗಳನ್ನೂ ಸಹ ಅವರು ಹೋಟೆಲ್ನಲ್ಲಿಯೇ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಯಂತಿ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು
75 ವರ್ಷ ವಯಸ್ಸಿನ ನಟಿ ಜಯಂತಿ ಅವರಿಗೆ ಕಳೆದ ವರ್ಷ ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದರು. ಈಗ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿಯೇ ಇದ್ದು, ಖಾಸಗಿ ಹೋಟೆಲ್ನಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಇದ್ದಾರೆ ಎನ್ನಲಾಗಿದೆ.
ಲಾಕ್ಡೌನ್ನಲ್ಲಿಯೂ ಜತೆ ಸೇರಿಕೊಂಡು ಪಕೋಡಾ ಮಾಡಿದ 'ಅಗ್ನಿಸಾಕ್ಷಿ' ತಂಡ!
ಜಯಂತಿ ಅಲ್ಲಿ ಉಳಿಯುವುದೇ ಉತ್ತಮ
ಬಳ್ಳಾರಿ ಜಿಲ್ಲೆಯಲ್ಲಿ 6 ಕೊರೊನಾ ಪಾಸಿಟಿವ್ ಪ್ರಕರಣಗಳು ಈ ವರೆಗೆ ಪತ್ತೆಯಾಗಿದೆ. ಅದೇ ಬೆಂಗಳೂರಿನಲ್ಲಿ 80 ಪ್ರಕರಣಗಳು ದಾಖಲಾಗಿವೆ, ಇದರಲ್ಲಿ 47 ಸಕ್ರಿಯ ಪ್ರಕರಣಗಳು ಇವೆ (ಏಪ್ರಿಲ್ 14 ರ ಅಂಕಿ-ಸಂಖ್ಯೆ). ಹಾಗಾಗಿ ಜಯಂತಿ ಅವರು ಬೆಂಗಳೂರಿಗೆ ಮರಳುವುದಕ್ಕಿಂತಲೂ ಅಲ್ಲಿಯೇ ಉಳಿಯುವುದು ಉತ್ತಮ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.