Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾದಿಂದ 'ಬಿಗ್ ಬಾಸ್' ಜಯಶ್ರೀ ಕಿಕ್ ಔಟ್: ನಿರ್ದೇಶಕರ ವಿರುದ್ಧ ಗರಂ.!
Recommended Video
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ಮೇಲೆ ಜಯಶ್ರೀಗೆ ಸ್ಯಾಂಡಲ್ ವುಡ್ ಕೈಬೀಸಿ ಕರೆಯಿತು. ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ ಜಯಶ್ರೀ 'ನಟ ನಟಿಯರು' ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.
ಮಂಜು ಹೆಬ್ಬೂರು ನಿರ್ದೇಶನದ 'ನಟ ನಟಿಯರು' ಸಿನಿಮಾ ಚಿತ್ರೀಕರಣದಲ್ಲಿ ಜಯಶ್ರೀ ಪಾಲ್ಗೊಂಡಿದ್ದರು. ಎರಡು ದಿನ ಶೂಟಿಂಗ್ ಮುಗಿದದ್ದೂ ಆಯ್ತು. ಆದ್ರೆ, ಮೂರನೇ ದಿನ ಆಗಿದ್ದೇ ಬೇರೆ.
'ನಟ ನಟಿಯರು' ಸಿನಿಮಾದ ಚಿತ್ರೀಕರಣ ಮೂರನೇ ದಿನ ಎಲ್ಲಿ ನಡೆಯುತ್ತೆ ಎನ್ನುವ ಬಗ್ಗೆ ಜಯಶ್ರೀಗೆ ಮಾಹಿತಿ ಇರಲಿಲ್ಲ. ಇದಕ್ಕಿದ್ದಂತೆ 'ನಟ ನಟಿಯರು' ಸಿನಿಮಾದ ವಾಟ್ಸ್ ಆಪ್ ಗ್ರೂಪ್ ನಿಂದ ಜಯಶ್ರೀಯನ್ನ ಹೊರ ಹಾಕಲಾಯಿತು. ಜಯಶ್ರೀ ನಂಬರ್ ನ ನಿರ್ದೇಶಕ ಮಂಜು ಹೆಬ್ಬೂರ್ ಬ್ಲಾಕ್ ಮಾಡಿದರು.
'Rapid ಫೈರ್' ಪ್ರಶ್ನೆಗಳಿಗೆ ಬಿಗ್ ಬಾಸ್ ಜಯಶ್ರೀ ಕೊಟ್ಟ ನೇರ ಉತ್ತರ
ಸಮಸ್ಯೆ ಏನು ಎಂಬುದರ ಬಗ್ಗೆ ವಿವರಿಸದೆ, ಮಾಹಿತಿ ಕೂಡ ನೀಡದೆ ಏಕಾಏಕಿ ಸಿನಿಮಾದಿಂದ ಕಿಕ್ ಔಟ್ ಮಾಡಿರುವುದಕ್ಕೆ ನಿರ್ದೇಶಕ ಮಂಜು ಹೆಬ್ಬೂರ್ ವಿರುದ್ಧ ನಟಿ ಜಯಶ್ರೀ ಗರಂ ಆಗಿದ್ದಾರೆ.
ಅತ್ತ ನಿರ್ದೇಶಕರ ವಿರುದ್ಧ ಜಯಶ್ರೀ ಆರೋಪ ಮಾಡುತ್ತಿದ್ದಾರೆ. ಇತ್ತ ಮಂಜು ಹೆಬ್ಬೂರ್ ಫೋನ್ ಸ್ವಿಚ್ ಆಫ್ ಆಗಿದೆ. ಜಯಶ್ರೀ ರನ್ನ ಮಾತ್ರ ಚಿತ್ರದಿಂದ ಕಿತ್ತು ಹಾಕಲಾಗಿದ್ಯೋ, ಅಥವಾ ಸಿನಿಮಾದ ಚಿತ್ರೀಕರಣವೇ ನಿಂತು ಹೋಗಿದ್ಯೋ.. ಖಚಿತ ಆಗಿಲ್ಲ.