Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾದಿಂದ 'ಬಿಗ್ ಬಾಸ್' ಜಯಶ್ರೀ ಕಿಕ್ ಔಟ್: ನಿರ್ದೇಶಕರ ವಿರುದ್ಧ ಗರಂ.!
Recommended Video
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ಮೇಲೆ ಜಯಶ್ರೀಗೆ ಸ್ಯಾಂಡಲ್ ವುಡ್ ಕೈಬೀಸಿ ಕರೆಯಿತು. ಇಮ್ರಾನ್ ಸರ್ದಾರಿಯಾ ನಿರ್ದೇಶನದ 'ಉಪ್ಪು ಹುಳಿ ಖಾರ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ ಜಯಶ್ರೀ 'ನಟ ನಟಿಯರು' ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.
ಮಂಜು ಹೆಬ್ಬೂರು ನಿರ್ದೇಶನದ 'ನಟ ನಟಿಯರು' ಸಿನಿಮಾ ಚಿತ್ರೀಕರಣದಲ್ಲಿ ಜಯಶ್ರೀ ಪಾಲ್ಗೊಂಡಿದ್ದರು. ಎರಡು ದಿನ ಶೂಟಿಂಗ್ ಮುಗಿದದ್ದೂ ಆಯ್ತು. ಆದ್ರೆ, ಮೂರನೇ ದಿನ ಆಗಿದ್ದೇ ಬೇರೆ.
'ನಟ ನಟಿಯರು' ಸಿನಿಮಾದ ಚಿತ್ರೀಕರಣ ಮೂರನೇ ದಿನ ಎಲ್ಲಿ ನಡೆಯುತ್ತೆ ಎನ್ನುವ ಬಗ್ಗೆ ಜಯಶ್ರೀಗೆ ಮಾಹಿತಿ ಇರಲಿಲ್ಲ. ಇದಕ್ಕಿದ್ದಂತೆ 'ನಟ ನಟಿಯರು' ಸಿನಿಮಾದ ವಾಟ್ಸ್ ಆಪ್ ಗ್ರೂಪ್ ನಿಂದ ಜಯಶ್ರೀಯನ್ನ ಹೊರ ಹಾಕಲಾಯಿತು. ಜಯಶ್ರೀ ನಂಬರ್ ನ ನಿರ್ದೇಶಕ ಮಂಜು ಹೆಬ್ಬೂರ್ ಬ್ಲಾಕ್ ಮಾಡಿದರು.
'Rapid ಫೈರ್' ಪ್ರಶ್ನೆಗಳಿಗೆ ಬಿಗ್ ಬಾಸ್ ಜಯಶ್ರೀ ಕೊಟ್ಟ ನೇರ ಉತ್ತರ
ಸಮಸ್ಯೆ ಏನು ಎಂಬುದರ ಬಗ್ಗೆ ವಿವರಿಸದೆ, ಮಾಹಿತಿ ಕೂಡ ನೀಡದೆ ಏಕಾಏಕಿ ಸಿನಿಮಾದಿಂದ ಕಿಕ್ ಔಟ್ ಮಾಡಿರುವುದಕ್ಕೆ ನಿರ್ದೇಶಕ ಮಂಜು ಹೆಬ್ಬೂರ್ ವಿರುದ್ಧ ನಟಿ ಜಯಶ್ರೀ ಗರಂ ಆಗಿದ್ದಾರೆ.
ಅತ್ತ ನಿರ್ದೇಶಕರ ವಿರುದ್ಧ ಜಯಶ್ರೀ ಆರೋಪ ಮಾಡುತ್ತಿದ್ದಾರೆ. ಇತ್ತ ಮಂಜು ಹೆಬ್ಬೂರ್ ಫೋನ್ ಸ್ವಿಚ್ ಆಫ್ ಆಗಿದೆ. ಜಯಶ್ರೀ ರನ್ನ ಮಾತ್ರ ಚಿತ್ರದಿಂದ ಕಿತ್ತು ಹಾಕಲಾಗಿದ್ಯೋ, ಅಥವಾ ಸಿನಿಮಾದ ಚಿತ್ರೀಕರಣವೇ ನಿಂತು ಹೋಗಿದ್ಯೋ.. ಖಚಿತ ಆಗಿಲ್ಲ.