ಮತದಾನದ ಹಕ್ಕು ಚಲಾಯಿಸಿದ ನಟಿ ಕಾರುಣ್ಯ ರಾಮ್ ಮತ್ತು ಸಹೋದರಿ
ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆ ಕನ್ನಡ ನಟಿ ಕಾರುಣ್ಯ ರಾಮ್ ಮತ್ತು ಸಹೋದರಿ ಸಮೃದ್ಧಿ ರಾಮ್ ಇಂದು ಆರ್ ಆರ್ ನಗರದಲ್ಲಿ ಮತದಾನ ಮಾಡಿದ್ದಾರೆ.
ಬಳಿಕ ಮಾಧ್ಯಮದವರು ಜೊತೆ ಮಾತನಾಡಿದ ನಟಿ ''ವೋಟ್ ಮಾಡುವುದು ಪ್ರತಿಯೊಬ್ಬರು ಹಕ್ಕು, ನಿಮ್ಮ ನಾಯಕರನ್ನು ಆಯ್ಕೆ ಮಾಡಬೇಕಾಗಿದೆ. ನಮ್ಮ ಮತಕ್ಕೆ ಅಮೂಲ್ಯವಾದ ಬೆಲೆ ಇದೆ'' ಎಂದು ಹೇಳಿದರು.
''ಕೊರೊನಾ ವೈರಸ್ ಕಾರಣದಿಂದ ಭಯಗೊಂಡು ಕೆಲವು ವೋಟ್ ಮಾಡಲು ಬರುವುದಿಲ್ಲ. ಆ ರೀತಿ ಮಾಡಬೇಡಿ. ಕೊವಿಡ್ ಹಿನ್ನೆಲೆ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಲಾಗಿದೆ, ಎಲ್ಲ ವ್ಯವಸ್ಥೆಯೂ ಚೆನ್ನಾಗಿ ಆಗಿದೆ'' ಎಂದು ಕಾರುಣ್ಯ ತಿಳಿಸಿದರು.

''ಕೊರೊನಾ ಪರಿಸ್ಥಿತಿಯಲ್ಲಿ ಮಾತ್ರ ಕಟ್ಟುನಿಟ್ಟಾಗಿ ಮತದಾನ ಸಾಗುತ್ತಿದೆ. ಇದು ಇಲ್ಲಿಗೆ ಸೀಮಿತವಾಗಬಾರದು. ಮುಂದಿನ ಚುನಾವಣೆ ಸಮಯದಲ್ಲೂ ಇಂತಹದ್ದೇ ವ್ಯವಸ್ಥೆ ಇರಬೇಕು'' ಎಂದು ಕಾರುಣ್ಯ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆರ್ ಆರ್ ನಗರದಲ್ಲಿ ಇಂದು ನಟ ದರ್ಶನ್, ನೆನಪಿರಲಿ ಪ್ರೇಮ್, ಹಿರಿಯ ನಟ ಅವಿನಾಶ್, ದಿಗಂತ್, ಅಮೂಲ್ಯ ದಂಪತಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮತದಾನ ಮಾಡಿದ್ದಾರೆ.


Click it and Unblock the Notifications











